<p><strong>ಮೈಸೂರು:</strong> ‘ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ನೀಡಿರುವ ಬಿಜೆಪಿಯನ್ನು ಬೆಂಬಲಿಸಬೇಕೇ ಎಂದು ಮತದಾರರು ಇನ್ನಾದರೂ ಯೋಚಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕೋರಿದರು.</p><p>ಖಾಲಿ ಚೊಂಬುಗಳು ಹಾಗೂ ಮೂರು ನಾಮ ಬಳಿದ ತೆಂಗಿನ ಕಾಯಿ ಚಿಪ್ಪುಗಳನ್ನು ಮುಂದಿಟ್ಟುಕೊಂಡು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು.</p>.Union Budget 2024 | ಕೃಷಿಗೆ ಚೈತನ್ಯ: ಸಂಶೋಧನೆಗೆ ಬಲ.<p>‘ಕೇಂದ್ರ ಸರ್ಕಾರವು ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತ ವಿರೋಧಿಯಾಗಿದೆ. ಅಲ್ಲದೇ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಅದಕ್ಕೆ ಸ್ಪಂದನೆ ದೊರೆತಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು, ಸಚಿವರ ಸಭೆ ನಡೆಸಿ ಮಾಡಿಕೊಂಡಿದ್ದ ಮನವಿಯಿಂದಲೂ ಪ್ರಯೋಜನವಾಗಿಲ್ಲ. ಆ ಬಜೆಟ್ನಲ್ಲಿ ಕರ್ನಾಟಕದ ಪ್ರಸ್ತಾಪವೇ ಇಲ್ಲ. ಇಲ್ಲಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ–ಜೆಡಿಎಸ್ನ 19 ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದಲೂ ಏನೇನೂ ಪ್ರಯೋಜನವಾಗಿಲ್ಲವಲ್ಲ ಏಕೆ?’ ಎಂದು ಖಾರವಾಗಿ ಕೇಳಿದರು.</p>.Union Budget 2024: ನಗರಗಳ ಬಹುಮುಖಿ ಪ್ರಗತಿ ದಾರಿಗಳು ಹತ್ತು ಹಲವು. <h2>ಬಿಜೆಪಿಯವರಿಗೆ ನಾಚಿಕೆ ಆಗಬೇಕು:</h2>. <p>‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಇಡಿ, ಐಟಿ ಹಾಗೂ ಸಿಬಿಐ ಮೂಲಕ ಪ್ರಯತ್ನಿಸುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು’ ಎಂದರು.</p><p>‘ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗಿಳಿಯುವವರೆಗೆ ₹ 53 ಲಕ್ಷ ಕೋಟಿ ಸಾಲವನ್ನಷ್ಟೆ ಮಾಡಲಾಗಿತ್ತು. ನರೇಂದ್ರ ಮೋದಿ ಸರ್ಕಾರವು 10 ವರ್ಷಗಳಲ್ಲಿ ಬರೋಬ್ಬರಿ ₹ 183 ಲಕ್ಷ ಕೋಟಿ ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿಸಿದೆ’ ಎಂದು ದೂರಿದರು.</p>.Union Budget 2024: ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ‘ಪೂರ್ವೋದಯ’.<p>‘ರಾಜ್ಯದಿಂದ ಪ್ರತಿ ವರ್ಷ ₹ 4.50 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ, ಈ ಬಜೆಟ್ನಲ್ಲಿ ರಾಜ್ಯಕ್ಕೆ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಮೋದಿ ಅವರು ಅಧಿಕಾರ ಉಳಿಸಿಕೊಳ್ಳಲು ಮಂಡಿಸಿರುವ ‘ಕುರ್ಚಿ ಬಚಾವೊ ಬಜೆಟ್’ ಇದಾಗಿದೆ’ ಎಂದು ಟೀಕಿಸಿದರು.</p><p>‘ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆ 67 ಕೋಟಿ ಇದೆ. ಆದರೆ, ಆ ಸಮಾಜದವರಿಗೆ ಕೇವಲ ₹ 56ಸಾವಿರ ಕೋಟಿಯನ್ನಷ್ಟೆ ಕೊಡಲಾಗಿದೆ. ಇದೆಲ್ಲವನ್ನೂ ಪರಿಶಿಷ್ಟರು ಅರ್ಥ ಮಾಡಿಕೊಳ್ಳಬೇಕು. ಜನಸಂಖ್ಯೆಯನ್ನು ಆಧರಿಸಿಯಾದರೂ ಹಣ ಎತ್ತಿಡಬೇಕಿತ್ತು’ ಎಂದರು.</p>.Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್. <p>‘ಮೈಸೂರಿನ ಸಂಸದ ಯದುವೀರ್ ಎಲ್ಲಿದ್ದಾರೆ? ಯಾವ ಯೋಜನೆಯನ್ನೂ ತರಲಿಲ್ಲವಲ್ಲ ನೀವು’ ಎಂದು ಪ್ರಶ್ನಿಸಿದರು.</p><p>ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪಕ್ಷದ ಮುಖಂಡರಾದ ಎಚ್.ವಿ.ರಾಜೀವ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಬಿ.ಎಂ.ರಾಮು, ಪುಷ್ಪವಲ್ಲಿ, ಕೆ.ವಿ.ಮಲ್ಲೇಶ್, ಟಿ.ಬಿ. ಚಿಕ್ಕಣ್ಣ ಪಾಲ್ಗೊಂಡಿದ್ದರು.</p>.Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ. <h2>‘ಎಚ್ಡಿಕೆ ಅಧಿಕಾರದಲ್ಲಿ ಮುಂದುವರಿಯಬಾರದು’</h2>. <p>‘ಕುಮಾರಸ್ವಾಮಿ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಅವರು ಒಂದು ರೂಪಾಯಿಯನ್ನಾದರೂ ತಂದಿದ್ದಾರೆಯೇ? ಅವರನ್ನು ಗೆಲ್ಲಿಸಿದ ಮಂಡ್ಯಕ್ಕಾದರೂ ಏನಾದರೂ ಕೊಡುಗೆ ಕೊಡಿಸಬಹುದಿತ್ತಲ್ಲವೇ? ನೈತಿಕತೆ ಇದ್ದರೆ ಅವರು ಅಧಿಕಾರದಲ್ಲಿ ಮುಂದುವರಿಯಬಾರದು’ ಎಂದು ಲಕ್ಷ್ಮಣ ಟೀಕಿಸಿದರು.</p><p>ಯುವಜನರಿಗೆ ಕೌಶಲ ತರಬೇತಿ ಸೇರಿದಂತೆ ನಮ್ಮ ಪ್ರಣಾಳಿಕೆಯಲ್ಲಿದ್ದ (ನ್ಯಾಯಪತ್ರ) ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ನಕಲು ಮಾಡಿ ಘೋಷಿಸಿದೆ ಎಂದು ದೂರಿದರು.</p> .Union Budget 2024: ಬಿಹಾರ, ಆಂಧ್ರಕ್ಕೆ ಬಂಪರ್ ಅನುದಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಖಾಲಿ ಚೊಂಬು ಹಾಗೂ ತೆಂಗಿನಕಾಯಿ ಚಿಪ್ಪು ನೀಡಿರುವ ಬಿಜೆಪಿಯನ್ನು ಬೆಂಬಲಿಸಬೇಕೇ ಎಂದು ಮತದಾರರು ಇನ್ನಾದರೂ ಯೋಚಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಕೋರಿದರು.</p><p>ಖಾಲಿ ಚೊಂಬುಗಳು ಹಾಗೂ ಮೂರು ನಾಮ ಬಳಿದ ತೆಂಗಿನ ಕಾಯಿ ಚಿಪ್ಪುಗಳನ್ನು ಮುಂದಿಟ್ಟುಕೊಂಡು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಬಾಣ ಪ್ರಯೋಗಿಸಿದರು.</p>.Union Budget 2024 | ಕೃಷಿಗೆ ಚೈತನ್ಯ: ಸಂಶೋಧನೆಗೆ ಬಲ.<p>‘ಕೇಂದ್ರ ಸರ್ಕಾರವು ರೈತರು, ಯುವಕರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತ ವಿರೋಧಿಯಾಗಿದೆ. ಅಲ್ಲದೇ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಅದಕ್ಕೆ ಸ್ಪಂದನೆ ದೊರೆತಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರು, ಸಚಿವರ ಸಭೆ ನಡೆಸಿ ಮಾಡಿಕೊಂಡಿದ್ದ ಮನವಿಯಿಂದಲೂ ಪ್ರಯೋಜನವಾಗಿಲ್ಲ. ಆ ಬಜೆಟ್ನಲ್ಲಿ ಕರ್ನಾಟಕದ ಪ್ರಸ್ತಾಪವೇ ಇಲ್ಲ. ಇಲ್ಲಿಂದ ಆಯ್ಕೆಯಾಗಿ ಹೋಗಿರುವ ಬಿಜೆಪಿ–ಜೆಡಿಎಸ್ನ 19 ಮಂದಿ ಸಂಸದರು ಏನು ಮಾಡುತ್ತಿದ್ದಾರೆ? ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಂದಲೂ ಏನೇನೂ ಪ್ರಯೋಜನವಾಗಿಲ್ಲವಲ್ಲ ಏಕೆ?’ ಎಂದು ಖಾರವಾಗಿ ಕೇಳಿದರು.</p>.Union Budget 2024: ನಗರಗಳ ಬಹುಮುಖಿ ಪ್ರಗತಿ ದಾರಿಗಳು ಹತ್ತು ಹಲವು. <h2>ಬಿಜೆಪಿಯವರಿಗೆ ನಾಚಿಕೆ ಆಗಬೇಕು:</h2>. <p>‘ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಇಡಿ, ಐಟಿ ಹಾಗೂ ಸಿಬಿಐ ಮೂಲಕ ಪ್ರಯತ್ನಿಸುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು’ ಎಂದರು.</p><p>‘ಮನಮೋಹನ್ ಸಿಂಗ್ ಅಧಿಕಾರದಿಂದ ಕೆಳಗಿಳಿಯುವವರೆಗೆ ₹ 53 ಲಕ್ಷ ಕೋಟಿ ಸಾಲವನ್ನಷ್ಟೆ ಮಾಡಲಾಗಿತ್ತು. ನರೇಂದ್ರ ಮೋದಿ ಸರ್ಕಾರವು 10 ವರ್ಷಗಳಲ್ಲಿ ಬರೋಬ್ಬರಿ ₹ 183 ಲಕ್ಷ ಕೋಟಿ ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿಸಿದೆ’ ಎಂದು ದೂರಿದರು.</p>.Union Budget 2024: ಪೂರ್ವದ ರಾಜ್ಯಗಳ ಅಭಿವೃದ್ಧಿಗೆ ‘ಪೂರ್ವೋದಯ’.<p>‘ರಾಜ್ಯದಿಂದ ಪ್ರತಿ ವರ್ಷ ₹ 4.50 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ, ಈ ಬಜೆಟ್ನಲ್ಲಿ ರಾಜ್ಯಕ್ಕೆ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಮೋದಿ ಅವರು ಅಧಿಕಾರ ಉಳಿಸಿಕೊಳ್ಳಲು ಮಂಡಿಸಿರುವ ‘ಕುರ್ಚಿ ಬಚಾವೊ ಬಜೆಟ್’ ಇದಾಗಿದೆ’ ಎಂದು ಟೀಕಿಸಿದರು.</p><p>‘ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಸಂಖ್ಯೆ 67 ಕೋಟಿ ಇದೆ. ಆದರೆ, ಆ ಸಮಾಜದವರಿಗೆ ಕೇವಲ ₹ 56ಸಾವಿರ ಕೋಟಿಯನ್ನಷ್ಟೆ ಕೊಡಲಾಗಿದೆ. ಇದೆಲ್ಲವನ್ನೂ ಪರಿಶಿಷ್ಟರು ಅರ್ಥ ಮಾಡಿಕೊಳ್ಳಬೇಕು. ಜನಸಂಖ್ಯೆಯನ್ನು ಆಧರಿಸಿಯಾದರೂ ಹಣ ಎತ್ತಿಡಬೇಕಿತ್ತು’ ಎಂದರು.</p>.Union Budget 2024 | ವಿಶ್ಲೇಷಣೆ: ದೇಶಕ್ಕೆ ‘ಹಿತ’ ಜನರಿಗೆ ‘ಮಿತ’ ನೀಡಿದ ಬಜೆಟ್. <p>‘ಮೈಸೂರಿನ ಸಂಸದ ಯದುವೀರ್ ಎಲ್ಲಿದ್ದಾರೆ? ಯಾವ ಯೋಜನೆಯನ್ನೂ ತರಲಿಲ್ಲವಲ್ಲ ನೀವು’ ಎಂದು ಪ್ರಶ್ನಿಸಿದರು.</p><p>ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ಖಾನ್, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪಕ್ಷದ ಮುಖಂಡರಾದ ಎಚ್.ವಿ.ರಾಜೀವ್, ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಬಿ.ಎಂ.ರಾಮು, ಪುಷ್ಪವಲ್ಲಿ, ಕೆ.ವಿ.ಮಲ್ಲೇಶ್, ಟಿ.ಬಿ. ಚಿಕ್ಕಣ್ಣ ಪಾಲ್ಗೊಂಡಿದ್ದರು.</p>.Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ. <h2>‘ಎಚ್ಡಿಕೆ ಅಧಿಕಾರದಲ್ಲಿ ಮುಂದುವರಿಯಬಾರದು’</h2>. <p>‘ಕುಮಾರಸ್ವಾಮಿ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಾರೆ. ಅವರು ಒಂದು ರೂಪಾಯಿಯನ್ನಾದರೂ ತಂದಿದ್ದಾರೆಯೇ? ಅವರನ್ನು ಗೆಲ್ಲಿಸಿದ ಮಂಡ್ಯಕ್ಕಾದರೂ ಏನಾದರೂ ಕೊಡುಗೆ ಕೊಡಿಸಬಹುದಿತ್ತಲ್ಲವೇ? ನೈತಿಕತೆ ಇದ್ದರೆ ಅವರು ಅಧಿಕಾರದಲ್ಲಿ ಮುಂದುವರಿಯಬಾರದು’ ಎಂದು ಲಕ್ಷ್ಮಣ ಟೀಕಿಸಿದರು.</p><p>ಯುವಜನರಿಗೆ ಕೌಶಲ ತರಬೇತಿ ಸೇರಿದಂತೆ ನಮ್ಮ ಪ್ರಣಾಳಿಕೆಯಲ್ಲಿದ್ದ (ನ್ಯಾಯಪತ್ರ) ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ನಕಲು ಮಾಡಿ ಘೋಷಿಸಿದೆ ಎಂದು ದೂರಿದರು.</p> .Union Budget 2024: ಬಿಹಾರ, ಆಂಧ್ರಕ್ಕೆ ಬಂಪರ್ ಅನುದಾನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>