2019ರಲ್ಲಿಯೇ ಶಾಸನದ ಸ್ಥಳದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ಬಿಡುಗಡೆ ಮಾಡಿಸಲಾಗಿತ್ತು. ಶಾಸನದ ಮುಂದೆ ಎರಡು ಎಕರೆ ಜಾಗವನ್ನು ಖರೀದಿಸಲಾಗಿತ್ತು. ಆದರೆ, ಪುರಾತತ್ವ ಇಲಾಖೆಯ ಬಿಗಿಯಾದ ಕಾನೂನಿನಿಂದ ₹50 ಲಕ್ಷ ಮಾತ್ರ ಬಳಕೆಯಾಗಿದ್ದು, ಇನ್ನೂ ₹50 ಲಕ್ಷ ಖರ್ಚಾಗದೆ ಉಳಿದಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ತಿಳಿಸಿದರು.