<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ‘ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆದವರ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಪಕ್ಷದಲ್ಲಿ ನಿರಂತರ 5 ವರ್ಷ ಸದಸ್ಯತ್ವ ಇದ್ದವರಿಗೆ ಮಾತ್ರ ಚುನಾವಣೆಗೆ ನಿಲ್ಲಲು ಅವಕಾಶ ಎಂಬ ಅಂಶ ಕಾಯ್ದೆಯಲ್ಲಿ ಸೇರಿಸಬೇಕು’ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಇಂಥ ಕಾಯ್ದೆಯಿಂದ ಮಾತ್ರ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಪಕ್ಷಾಂತರ ಮಾಡಿದವರಿಗೆ ಜನರು ಮತ ಹಾಕಬಾರದು. ಈ ಕಾಯ್ದೆ ಮಾಡುವ ಅಧಿಕಾರ ನನಗೆ ಇದ್ದಿದ್ದರೆ, ಹಿಂಜರಿಯುತ್ತಿರಲಿಲ್ಲ’ ಎಂದರು.</p>.<p>‘ಪ್ರಸ್ತುತ ರಾಜಕಾರಣ ಇಲಿ, ಬೆಕ್ಕು ಮತ್ತು ಹಾವುಗಳ ಕಚ್ಚಾಟದ ಕಥೆಯಂತಾಗಿದೆ. ಯಾವುದೇ ರಾಜಕಾರಣಿ ಇನ್ನೊಬ್ಬ ರಾಜಕಾರಣಿ ತಪ್ಪು ಮಾಡಿದ್ದರೆ ದೂಷಿಸಲಿ. ಅದರ ಬದಲು ಪರಸ್ಪರ ಆಧಾರ ರಹಿತ ದೂಷಣೆ ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ (ವಿಜಯನಗರ ಜಿಲ್ಲೆ):</strong> ‘ರಾಜಕೀಯ ಪಕ್ಷಗಳಲ್ಲಿ ಸದಸ್ಯತ್ವ ಪಡೆದವರ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಪಕ್ಷದಲ್ಲಿ ನಿರಂತರ 5 ವರ್ಷ ಸದಸ್ಯತ್ವ ಇದ್ದವರಿಗೆ ಮಾತ್ರ ಚುನಾವಣೆಗೆ ನಿಲ್ಲಲು ಅವಕಾಶ ಎಂಬ ಅಂಶ ಕಾಯ್ದೆಯಲ್ಲಿ ಸೇರಿಸಬೇಕು’ ಎಂದು ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ‘ಇಂಥ ಕಾಯ್ದೆಯಿಂದ ಮಾತ್ರ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಪಕ್ಷಾಂತರ ಮಾಡಿದವರಿಗೆ ಜನರು ಮತ ಹಾಕಬಾರದು. ಈ ಕಾಯ್ದೆ ಮಾಡುವ ಅಧಿಕಾರ ನನಗೆ ಇದ್ದಿದ್ದರೆ, ಹಿಂಜರಿಯುತ್ತಿರಲಿಲ್ಲ’ ಎಂದರು.</p>.<p>‘ಪ್ರಸ್ತುತ ರಾಜಕಾರಣ ಇಲಿ, ಬೆಕ್ಕು ಮತ್ತು ಹಾವುಗಳ ಕಚ್ಚಾಟದ ಕಥೆಯಂತಾಗಿದೆ. ಯಾವುದೇ ರಾಜಕಾರಣಿ ಇನ್ನೊಬ್ಬ ರಾಜಕಾರಣಿ ತಪ್ಪು ಮಾಡಿದ್ದರೆ ದೂಷಿಸಲಿ. ಅದರ ಬದಲು ಪರಸ್ಪರ ಆಧಾರ ರಹಿತ ದೂಷಣೆ ಸರಿಯಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>