‘ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆ ಒಂದು ಅತ್ಯುತ್ತಮ ಯೋಜನೆ. ಅದನ್ನು ವಿಫಲವಾಗಿಸಲು ಬಿಡುವುದಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ಕೆರೆಗಳಿಗೆ ನೀರು ಹರಿಸುವ ಕುರಿತು ಗಂಭೀರ ಪ್ರಯತ್ನ ನಡೆಯಲಿದೆ. ಈ ಬಾರಿ ಉತ್ತಮವಾಗಿ ಮಳೆ ಸುರಿದು ತುಂಗಭದ್ರಾ ನದಿಯಲ್ಲಿ ಸಾಕಷ್ಟು ನೀರು ಹರಿಯುವ ನಿರೀಕ್ಷೆ ಇರುವ ಕಾರಣ ತಲಘಟ್ಟಪುರದಿಂದ ನೀರು ಪಂಪ್ ಮಾಡಿ ಕೆರೆಗಳಿಗೆ ತುಂಬಿಸಲು ಖಂಡಿತ ಪ್ರಯತ್ನ ಮಾಡುತ್ತೇವೆ. ಕೆರೆಗಳ ದುರಸ್ತಿಯತ್ತಲೂ ಗಮನ ಹರಿಸಲಾಗುವುದು’ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.