ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಸಾವಳಸಂಗ ಸಾಲು ಬೆಟ್ಟಗಳಲ್ಲಿ ಚಾರಣ

ಬಿಸಿಲೂರಿನಲ್ಲಿ ಮಲೆನಾಡ ಅನುಭವ ನೀಡುವ ತಾಣ: ಮಳೆಗಾಲದಲ್ಲಿ ಮನಮೋಹಕ
Published : 1 ಸೆಪ್ಟೆಂಬರ್ 2024, 5:23 IST
Last Updated : 1 ಸೆಪ್ಟೆಂಬರ್ 2024, 5:23 IST
ಫಾಲೋ ಮಾಡಿ
Comments
ಚಾರಣಕ್ಕೆ ಹೇಳಿ ಮಾಡಿಸಿರುವಂತಿರುವ ಸಾವಳಸಂಗ ಬೆಟ್ಟದ ಮನಮೋಹಕ ದೃಶ್ಯ–ಚಿತ್ರ: ವಿನೋದಕುಮಾರ ಮಣೂರ
ಚಾರಣಕ್ಕೆ ಹೇಳಿ ಮಾಡಿಸಿರುವಂತಿರುವ ಸಾವಳಸಂಗ ಬೆಟ್ಟದ ಮನಮೋಹಕ ದೃಶ್ಯ–ಚಿತ್ರ: ವಿನೋದಕುಮಾರ ಮಣೂರ
ಬೈಕುಗಳನ್ನೇರಿ ಸಾವಳಸಂಗ ಬೆಟ್ಟಕ್ಕೆ ತೆರಳುತ್ತಿರುವ ಚಾರಣಿಗರು–ಚಿತ್ರ:ವಿನೋದ ಕುಮಾರ ಮಣೂರ
ಬೈಕುಗಳನ್ನೇರಿ ಸಾವಳಸಂಗ ಬೆಟ್ಟಕ್ಕೆ ತೆರಳುತ್ತಿರುವ ಚಾರಣಿಗರು–ಚಿತ್ರ:ವಿನೋದ ಕುಮಾರ ಮಣೂರ
ಗಿಡಮರಗಳಿಂದ ಕೂಡದ ಬೆಟ್ಟ ಸಾಲು
ವಿಜಯಪುರ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರ್ತಿಯಿಂದ ಐದು ಕಿ.ಮೀ. ದೂರದಲ್ಲಿ ಇಂಚಿಗೇರಿಗೆ ತೆರಳುವ ರಸ್ತೆಯಲ್ಲಿ ಸಾವಳಸಂಗ ಬೆಟ್ಟ ಸಾಲು ಇದೆ. ಇಲ್ಲಿ ಪ್ರಮುಖವಾಗಿ ಲಿಂಗೇಶ್ವರ ಗುಡ್ಡ ಅರವಕ್ಕಿ ಗುಡ್ಡ ಮತ್ತು ಸಿದ್ದೇಶ್ವರ ಗುಡ್ಡ ಎಂಬ ಮೂರು ತಾಣಗಳಿವೆ. ಸುಮಾರು 271 ಎಕರೆ ಪ್ರದೇಶ ಒಳಗೊಂಡಿರುವ ಸಾವಳಸಂಗ ಬೆಟ್ಟದಲ್ಲಿ ಕೆಂಪು ಹುಣಸೆ ಮಾವು ಸೀತಾಫಲ ಚಳ್ಳೆ ನೇರಳೆ ಆಲ ಅರಳಿ ಹೊಂಗೆ ಹೊಳೆ ಮತ್ತಿ ಬಿದಿರು ಗಜುಗ ಬೇವು ಗೊಬ್ಬರ ಗಿಡ ಸೇರಿದಂತೆ ವಿವಿಧ ಜಾತಿಯು ಸುಮಾರು 31 ಸಾವಿರ ಗಿಡಗಳನ್ನು 2018–19ರಿಂದ ನೆಟ್ಟು ನೀರೆರೆದು ಬೆಳೆಸಿ ಸಂರಕ್ಷಿಸಲಾಗಿದೆ. ಇಲ್ಲಿ ನವಿಲು ನರಿ ಮೊಲ ಹಾವು ವಿವಿಧ ಜಾತಿಯ ಪಕ್ಷಿಗಳು ನೆಲೆ ಕಂಡುಕೊಂಡಿವೆ. ಎರಡು ಪ್ಯಾರಾಗೋಲಗಳಿವೆ. ಕುಳಿತು ಊಟ ಮಾಡಲು ವಿಶ್ರಾಂತಿ ಪಡೆಯಲು ಅನುಕೂಲ ಮಾಡಲಾಗಿದೆ. ಪ್ರತಿದಿನ 15 ವಾಚರ್‌ಗಳು ಸಾವಳಸಂಗ ಬೆಟ್ಟದಲ್ಲಿ ಕಾರ್ಯನಿರ್ವಹಿಸುತ್ತಾರೆ. ಚಾರಣಿಗರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಾರೆ. ಸಾವಳಸಂಗ ಬೆಟ್ಟಸಾಲನ್ನು‘ಸಿದ್ದೇಶ್ವರ ವನ್ಯಧಾಮ’ ಎಂದು ಹೆಸರಿಡಲು ಇಂಡಿ ಶಾಸಕ ಯಶವಂತರಾಯಗೌಡ ಅವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT