ಬೆಂಗಳೂರು: ಬಿಗ್ಬಾಸ್ ರಿಯಾಲಿಟಿ ಶೋ ಆರಂಭವಾಗಿ ವಾರ ಕಳೆದಿದ್ದು, ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಯಾರೆಲ್ಲ ಪಾಠ ಹೇಳಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಸ್ವರ್ಗ– ನರಕ ಪರಿಕಲ್ಪನೆಯೊಂದಿಗೆ ಸೆಪ್ಟೆಂಬರ್ 29ರಂದು ಆರಂಭದವಾದ ಬಿಗ್ಬಾಸ್ ಮನೆಯೊಳಗೆ ಒಟ್ಟು 17 ಸ್ಪರ್ಧಿಗಳು ಪ್ರವೇಶಿಸಿದ್ದರು.
ವಾರದ ಆರಂಭದಲ್ಲೇ ಸ್ಪರ್ಧಿಗಳ ನಡುವೆ ಜಟಾಪಟಿ ಶುರುವಾಗಿದ್ದು, ಹಲವು ಕಾರಣಗಳಿಗೆ ಮನೆಯೊಳಗೆ ವಾಗ್ವಾದಗಳು ನಡೆದಿವೆ. ಈ ವಾರ ಲಾಯರ್ ಜಗದೀಶ್, ಧನರಾಜ್ ಆಚಾರ್, ಚೈತ್ರಾ ಕುಂದಾಪುರ, ಮಾನಸ ಸಂತೋಷ್ ಹೆಚ್ಚು ಗಮನ ಸೆಳೆದಿದ್ದರು. ಮೋಕ್ಷಿತಾ ಪೈ, ಹಂಸಾ, ಗೋಲ್ಡ್ ಸುರೇಶ್ ಮನೆಯೊಳಗೆ ಸಪ್ಪೆಯಾದಂತೆ ಕಾಣುತ್ತಿದ್ದರು.