ದೀಪಾವಳಿಯಲ್ಲಿ ಮಾತ್ರ ನಿಷೇಧ ಏಕೆ: ಬಿಜೆಪಿ ಪ್ರಶ್ನೆ
ದೆಹಲಿ ಸರ್ಕಾರದ ನಿರ್ಧಾರವನ್ನು ರಾಜ್ಯ ಬಿಜೆಪಿ ಖಂಡಿಸಿದ್ದು, ನಗರದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.
‘ಮಾಲಿನ್ಯಕ್ಕೆ ಪಟಾಕಿಗಳೇ ಮೂಲ ಕಾರಣವಲ್ಲ ಎಂದು ನ್ಯಾಯಾಲಯದಲ್ಲಿ ರುಜುವಾತಾಗಿದೆ ಮತ್ತು ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ. ದೀಪಾವಳಿಗೆ ಮಾತ್ರ ಪಟಾಕಿ ಬಳಕೆಗೆ ನಿಷೇಧ ಏಕೆ. ಜನರು ಈ ನಿಯಮವನ್ನು ಪಾಲನೆ ಮಾಡುವುದಿಲ್ಲ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕಪಿಲ್ ಮಿಶ್ರಾ ಹೇಳಿದ್ದಾರೆ.
‘ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ಮೇಲೆ ನಿರ್ಬಂಧ ಹೇರಲಿ. ಆದರೆ ಹಸಿರು ಪಟಾಕಿ ಬಳಕೆಗೆ ಅನುಮತಿ ಬೇಕು. ದೀಪಾವಳಿ ಕೇವಲ ಹಬ್ಬ ಅಲ್ಲ, ಲಕ್ಷಾಂತರ ಹಿಂದೂಗಳ ಭಾವನೆಗಳೊಂದಿಗೆ ಅದು ಬೆರೆತಿದೆ’ ಎಂದು ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧೂರಿ ಹೇಳಿದರು.