ಪ್ರಶ್ನೆಪತ್ರಿಕೆಯನ್ನು ಮೇ 4ರಂದೇ ನೀಡಲು ಪರೀಕ್ಷಾರ್ಥಿಗಳಿಂದ ತಲಾ ₹40 ಲಕ್ಷ ಕೇಳಿದ್ದಾಗಿ ಯದುವೇಂದು ಹೇಳಿದ್ದಾನೆ. ಬಿಹಾರದ ದಾನಪುರ ಪುರಸಭೆಯಲ್ಲಿ ಯದುವೇಂದು ಕಿರಿಯ ಎಂಜಿನಿಯರ್ ಆಗಿದ್ದಾನೆ. ‘ನಿತೀಶ್ ಮತ್ತು ಅಮಿತ್ ಅವರನ್ನು ಸಂಪರ್ಕಿಸಿ ನಾನು, ಆಯುಷ್ ಕುಮಾರ್, ಅನುರಾಗ್ ಯಾದವ್, ಅಭಿಷೇಕ್ ಕುಮಾರ್ ಮತ್ತು ಶಿವನಂದನ್ ಕುಮಾರ್ ಎಂಬ ನಾಲ್ಕು ಪರೀಕ್ಷಾರ್ಥಿಗಳು ಇದ್ದಾರೆ ಎಂದು ತಿಳಿಸಿದ್ದೆ’ ಎಂದಿದ್ದಾನೆ.