ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ನಾಗರಿಕರ ಸುರಕ್ಷತೆಗೆ ಆದ್ಯತೆ: ಮೊಹಮ್ಮದ್ ಯೂನಸ್

Published : 8 ಆಗಸ್ಟ್ 2024, 14:23 IST
Last Updated : 8 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments
‘ಎರಡನೇ ಸ್ವಾತಂತ್ರ್ಯ’
ಆಡಳಿತ ಬದಲಾವಣೆಯನ್ನು ದೇಶದ ‘ಎರಡನೇ ಸ್ವಾತಂತ್ರ್ಯ’ ಎಂದು ಕರೆದ ಅವರು, ‘ಇದು ನಮ್ಮ ಹೆಮ್ಮೆಯ ದಿನವಾಗಿದೆ’ ಎಂದು ಹೇಳಿದರು. ‘ನಮಗೆ ದೊರೆತಿರುವ ಈ ಎರಡನೇ ಸ್ವಾತಂತ್ರ್ಯವನ್ನು ನಾವು ರಕ್ಷಿಸಿಕೊಳ್ಳಬೇಕಿದೆ’ ಎಂದು ಅವರು ತಿಳಿಸಿದರು. ‘ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ತರುವುದು, ಅರಾಜಕತಾ ಚಟುವಟಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳನ್ನು ನಿಯಂತ್ರಿಸುವುದು ನನ್ನ ಮೊದಲ ಕಾರ್ಯವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ಹಿಂಸೆ ಆಗದಂತೆ ನೋಡಿಕೊಳ್ಳಿ’
ದರೋಡೆಕೋರರ ಹಾವಳಿ
ಢಾಕಾ (ಪಿಟಿಐ): ಹಿಂಸಾಚಾರದಿಂದ ನಲುಗಿರುವ ಬಾಂಗ್ಲಾದೇಶದಲ್ಲಿ ಲೂಟಿ ಮತ್ತು ದರೋಡೆಕೋರರ ಹಾವಳಿಯೂ ತೀವ್ರಗೊಂಡಿದ್ದು, ನಿವಾಸಿಗಳು ಕೆಲ ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದ್ದು, ಪೊಲೀಸರು ಕಾರ್ಯ ನಿರ್ವಹಿಸಲು ಹಿಂಜರಿದಿರುವ ಕಾರಣ ಅಪರಾಧಿಗಳು ಗುಂಪು ಗುಂಪಾಗಿ ಲೂಟಿ, ದರೋಡೆ ಕೃತ್ಯಗಳನ್ನು ಎಸಗುತ್ತಿದ್ದಾರೆ ಎನ್ನಲಾಗಿದೆ. ನಿವಾಸಿಗಳು ದೊಣ್ಣೆಗಳನ್ನು ಹಿಡಿದು ಗಸ್ತು ತಿರುಗುವ ಮೂಲಕ, ತಮ್ಮ ಮನೆ ಮತ್ತು ರಸ್ತೆಗಳನ್ನು ರಕ್ಷಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯುವ ಜನರ ಕೈಯಲ್ಲಿ ದೇಶ
ವಿದ್ಯಾರ್ಥಿಗಳು ಮತ್ತು ಯುವ ಜನರ ಕರೆಗೆ ಓಗೊಟ್ಟು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿಕೊಳ್ಳಲು ಒಪ್ಪಿದ್ದಾಗಿ ಹೇಳಿದ ಅವರು, ದೇಶ ಈಗ ಯುವ ಜನರ ಕೈಯಲ್ಲಿದೆ ಎಂದರು. ‘ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವಂತಹ ಸರ್ಕಾರವನ್ನು ನಾವು ರಚಿಸಬೇಕಿದೆ. ಅಂತೆಯೇ ಪ್ರತಿಭಟನಾ ಸಮಯದಲ್ಲಿ ಉಂಟಾದ ಅವ್ಯವಸ್ಥೆಯಿಂದ ದೇಶವನ್ನು ರಕ್ಷಿಸಲು ನಾಗರಿಕರು ಸಹಕರಿಸಬೇಕಿದೆ’ ಎಂದು ಹೇಳಿದರು.
560ಕ್ಕೆ ಏರಿದ ಮೃತರ ಸಂಖ್ಯೆ
ಶೇಖ್‌ ಹಸೀನಾ ಅವರು ಸೋಮವಾರ ದೇಶ ತೊರೆದ ಬಳಿಕ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೀಸಲಾತಿ ನಿಯಮ ವಿರೋಧಿಸಿ ಜುಲೈನಿಂದ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 560ಕ್ಕೆ ಏರಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT