<p><strong>ಮುಂಬೈ: </strong>ತಮ್ಮ ಬಣವನ್ನು ನಿಜವಾದ ಶಿವಸೇನಾ ಎಂದು ಘೋಷಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಕ್ಕೆ ಮತ್ತು ಸತ್ಯಕ್ಕೆ ಸಂದ ವಿಜಯ ಎಂದು ಬಣ್ಣಿಸಿದ್ದಾರೆ.</p>.<p>‘ಏಕನಾಥ ಶಿಂದೆ ಅವರೇ ಶಿವಸೇನಾಯ ನಿಜವಾದ ನಾಯಕ’ ಎಂಬುದನ್ನು ಚುನಾವಣಾ ಆಯೋಗದ ಈ ಘೋಷಣೆಯು ದೃಢೀಕರಿಸಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.</p>.<p>‘ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಸಂಖ್ಯೆ ಹೊಂದಿರುವವರನ್ನೇ ಪರಿಗಣಿಸಲಾಗುತ್ತದೆ’ ಎಂದು ಶಿಂದೆ ಹೇಳಿದರು.</p>.<p>‘ಇದು ಬಾಳಾಸಾಹೇಬರ ಪರಂಪರೆಯ ವಿಜಯ. ನಮ್ಮದು ನಿಜವಾದ ಶಿವಸೇನಾ. ಬಾಳಾಸಾಹೇಬರ ಚಿಂತನೆಗಳನ್ನು ಮುಂದಿಟ್ಟುಕೊಂಡು ನಾವು ಕಳೆದ ವರ್ಷ ಮಹಾರಾಷ್ಟ್ರದಲ್ಲಿ (ಬಿಜೆಪಿಯೊಂದಿಗೆ) ಹೊಸ ಸರ್ಕಾರವನ್ನು ಸ್ಥಾಪಿಸಿದ್ದೇವೆ. ಇದು ಸತ್ಯ ಮತ್ತು ಜನತೆಯ ಗೆಲುವು ಹಾಗೂ ಬಾಳಾಸಾಹೇಬರ ಆಶೀರ್ವಾದ’ ಎಂದು ಶಿಂದೆ ತಿಳಿಸಿದರು.</p>.<p>2022ರ ಜೂನ್ನಲ್ಲಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಶಿಂದೆ ಬಂಡೆದಿದ್ದರು. ಪರಿಣಾಮವಾಗಿ ಠಾಕ್ರೆ ನೇತೃತ್ವದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿತ್ತು.</p>.<p>ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಿಜವಾದ ಶಿವಸೇನಾವನ್ನು ಏಕನಾಥ್ ಶಿಂದೆ ಮುನ್ನಡೆಸಿದ್ದರು ಎಂಬುದು ಈಗ ಸಾಬೀತಾಗಿದೆ. ಸಂಖ್ಯಾಬಲದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಇವುಗಳನ್ನೂ ಓದಿ </strong></p>.<p><a href="https://www.prajavani.net/india-news/election-commission-recognises-eknath-shinde-faction-as-real-shiv-sena-orders-allocation-of-bow-and-1016229.html" itemprop="url">ಏಕನಾಥ ಶಿಂದೆ ಬಣವೇ ಶಿವಸೇನೆ: ಚುನಾವಣಾ ಆಯೋಗದ ಘೋಷಣೆ </a></p>.<p><a href="https://www.prajavani.net/india-news/shining-sun-shield-and-sword-or-peepul-tree-team-shinde-submits-symbols-to-eci-979215.html" itemprop="url" target="_blank">ಹೊಸ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಮಹಾರಾಷ್ಟ್ರ ಸಿಎಂ ಶಿಂದೆ ಬಣ</a></p>.<p><a href="https://www.prajavani.net/india-news/sc-allows-ec-to-go-ahead-with-hearing-shinde-groups-claim-of-being-real-shiv-sena-975674.html" itemprop="url" target="_blank">ನೈಜ ಶಿವಸೇನಾ: ಶಿಂದೆ ಬಣಕ್ಕೆ ಮೇಲುಗೈ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ತಮ್ಮ ಬಣವನ್ನು ನಿಜವಾದ ಶಿವಸೇನಾ ಎಂದು ಘೋಷಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ, ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಕ್ಕೆ ಮತ್ತು ಸತ್ಯಕ್ಕೆ ಸಂದ ವಿಜಯ ಎಂದು ಬಣ್ಣಿಸಿದ್ದಾರೆ.</p>.<p>‘ಏಕನಾಥ ಶಿಂದೆ ಅವರೇ ಶಿವಸೇನಾಯ ನಿಜವಾದ ನಾಯಕ’ ಎಂಬುದನ್ನು ಚುನಾವಣಾ ಆಯೋಗದ ಈ ಘೋಷಣೆಯು ದೃಢೀಕರಿಸಿದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.</p>.<p>‘ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಸಂಖ್ಯೆ ಹೊಂದಿರುವವರನ್ನೇ ಪರಿಗಣಿಸಲಾಗುತ್ತದೆ’ ಎಂದು ಶಿಂದೆ ಹೇಳಿದರು.</p>.<p>‘ಇದು ಬಾಳಾಸಾಹೇಬರ ಪರಂಪರೆಯ ವಿಜಯ. ನಮ್ಮದು ನಿಜವಾದ ಶಿವಸೇನಾ. ಬಾಳಾಸಾಹೇಬರ ಚಿಂತನೆಗಳನ್ನು ಮುಂದಿಟ್ಟುಕೊಂಡು ನಾವು ಕಳೆದ ವರ್ಷ ಮಹಾರಾಷ್ಟ್ರದಲ್ಲಿ (ಬಿಜೆಪಿಯೊಂದಿಗೆ) ಹೊಸ ಸರ್ಕಾರವನ್ನು ಸ್ಥಾಪಿಸಿದ್ದೇವೆ. ಇದು ಸತ್ಯ ಮತ್ತು ಜನತೆಯ ಗೆಲುವು ಹಾಗೂ ಬಾಳಾಸಾಹೇಬರ ಆಶೀರ್ವಾದ’ ಎಂದು ಶಿಂದೆ ತಿಳಿಸಿದರು.</p>.<p>2022ರ ಜೂನ್ನಲ್ಲಿ ಉದ್ಧವ್ ಠಾಕ್ರೆ ಅವರ ನಾಯಕತ್ವದ ವಿರುದ್ಧ ಶಿಂದೆ ಬಂಡೆದಿದ್ದರು. ಪರಿಣಾಮವಾಗಿ ಠಾಕ್ರೆ ನೇತೃತ್ವದ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿತ್ತು.</p>.<p>ಇದೇ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಿಜವಾದ ಶಿವಸೇನಾವನ್ನು ಏಕನಾಥ್ ಶಿಂದೆ ಮುನ್ನಡೆಸಿದ್ದರು ಎಂಬುದು ಈಗ ಸಾಬೀತಾಗಿದೆ. ಸಂಖ್ಯಾಬಲದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಇವುಗಳನ್ನೂ ಓದಿ </strong></p>.<p><a href="https://www.prajavani.net/india-news/election-commission-recognises-eknath-shinde-faction-as-real-shiv-sena-orders-allocation-of-bow-and-1016229.html" itemprop="url">ಏಕನಾಥ ಶಿಂದೆ ಬಣವೇ ಶಿವಸೇನೆ: ಚುನಾವಣಾ ಆಯೋಗದ ಘೋಷಣೆ </a></p>.<p><a href="https://www.prajavani.net/india-news/shining-sun-shield-and-sword-or-peepul-tree-team-shinde-submits-symbols-to-eci-979215.html" itemprop="url" target="_blank">ಹೊಸ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಮಹಾರಾಷ್ಟ್ರ ಸಿಎಂ ಶಿಂದೆ ಬಣ</a></p>.<p><a href="https://www.prajavani.net/india-news/sc-allows-ec-to-go-ahead-with-hearing-shinde-groups-claim-of-being-real-shiv-sena-975674.html" itemprop="url" target="_blank">ನೈಜ ಶಿವಸೇನಾ: ಶಿಂದೆ ಬಣಕ್ಕೆ ಮೇಲುಗೈ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>