ಬಜಾಲಿ, ಬರ್ಪೇಟ, ಕಾಚಾರ್ , ದರ್ರಾಂಗ್ , ಗೋಲ್ಪಾರಾ, ಕಾಮರೂಪ್, ಕರೀಮ್ಗಂಜ್, ನಾಗಾಂವ್ ಮತ್ತು ಹೊಜೈ ಜಿಲ್ಲೆಗಳಲ್ಲಿ 1,70,377 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ವರ್ಷದಲ್ಲಿ ಸಂಭವಿಸಿದ ಚಂಡಮಾರುತ, ಪ್ರವಾಹ ಸೇರಿದಂತೆ ಭೂಕುಸಿತ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿದೆ ಎಂದು ಎಎಸ್ಡಿಎಂಎ ಪ್ರಕಟಣೆಯಲ್ಲಿ ತಿಳಿಸಿದೆ.
ಕರೀಮ್ಗಂಜ್ನಲ್ಲಿ 96,440 ಜನರು, ಕಾಚಾರ್ನಲ್ಲಿ 52,400 ಕ್ಕೂ ಹೆಚ್ಚು ಜನರು, ದರ್ರಾಂಗ್ನಲ್ಲಿ ಸುಮಾರು 10,802 ಜನರು ತೊಂದರೆಗೆ ಸಿಲುಕಿದ್ದಾರೆ. ಇವು ಅತಿ ಹೆಚ್ಚು ಪ್ರವಾಹ ಪರಿಸ್ಥಿತಿಗೆ ಒಳಗಾದ ಜಿಲ್ಲೆಗಳಾಗಿವೆ.