ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಸೀನಾ, ‘ಹಿಂಸಾಚಾರದಲ್ಲಿ ಭಾಗಿಯಾದ ನಿಜವಾದ ಅಪಾರಾಧಿಗಳನ್ನು ಶಿಕ್ಷಿಸಲು ಮತ್ತು ಅದರ ಕುರಿತು ತನಿಖೆ ನಡೆಸಲು ನಾವು ವಿಶ್ವಸಂಸ್ಥೆ ಹಾಗೂ ಇತರ ಸಂಸ್ಥೆಗಳ ಸಹಕಾರವನ್ನು ಬಯಸುತ್ತೇವೆ. ದೇಶದ ಆಸ್ತಿಗಳಿಗೆ ಹಾನಿ ಮಾಡಿ, ನೂರಾರು ಜನರನ್ನು ಕೊಂದು ದೇಶದ ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ. ಈ ರಕ್ತಪಾತದಿಂದ ಯಾರು ಏನು ಗಳಿಸಿದರು ಎಂಬುದೇ ನನ್ನ ಪ್ರಶ್ನೆ’ ಎಂದರು.