<p><strong>ಜೈಪುರ:</strong> ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಪಾಪಕೃತ್ಯಗಳಿಗಾಗಿ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ‘ಶಿಕ್ಷಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>ರಾಜಸ್ಥಾನದ ಭೀನ್ಮಾಲ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಒಮ್ಮೆ 400 ಸ್ಥಾನಗಳನ್ನು ಗೆದ್ದಿದ್ದ ಪಕ್ಷಕ್ಕೆ ಈಗ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಸ್ಪರ್ಧಿಸಲೂ ಆಗುತ್ತಿಲ್ಲ. ಕಾಂಗ್ರೆಸ್ನ ಈಗಿನ ಸ್ಥಿತಿಗೆ ಆ ಪಕ್ಷವೇ ಹೊಣೆ’ ಎಂದು ಕುಟುಕಿದರು.</p>.<p>‘ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಹರಡುವ ಮೂಲಕ ಕಾಂಗ್ರೆಸ್ ಪಕ್ಷವು ದೇಶವನ್ನು ಟೊಳ್ಳಾಗುವಂತೆ ಮಾಡಿದೆ. ಇಂದು ದೇಶದ ಜನರು ಕಾಂಗ್ರೆಸ್ ಮೇಲೆ ಕೋಪಗೊಂಡಿದ್ದು, ಈ ಪಾಪಗಳಿಗೆ ಅದನ್ನು ಶಿಕ್ಷಿಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಮುಖ ನೋಡಬಾರದು ಎಂಬ ಸಿಟ್ಟು ಯುವಜನರಲ್ಲಿದೆ’ ಎಂದರು. </p>.<p>‘ಬಿಜೆಪಿಯನ್ನು ಎದುರಿಸಲು ಅವರು ಅವಕಾಶವಾದಿ ‘ಇಂಡಿ’ ಒಕ್ಕೂಟ ರಚಿಸಿದ್ದಾರೆ. ಆದರೆ ಅದರ ಸ್ಥಿತಿ, ಹಾರಾಡುವ ಮುನ್ನವೇ ದಾರ ತುಂಡಾದ ಗಾಳಿಪಟದ ಹಾಗಾಗಿದೆ’ ಎಂದು ಲೇವಡಿ ಮಾಡಿದರು.</p>.<p>‘ಈ ಲೋಕಸಭಾ ಚುನಾವಣೆಯಲ್ಲಿ ಶೇ 25 ರಷ್ಟು ಸೀಟುಗಳಲ್ಲಿ ಆ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಚುನಾವಣೆಗೆ ಮುನ್ನವೇ ಇಷ್ಟೊಂದು ಕಚ್ಚಾಟ ನಡೆದರೆ, ಚುನಾವಣೆಯ ನಂತರ ಲೂಟಿಗಾಗಿ ಅವರು ಯಾವ ರೀತಿ ಹೊಡೆದಾಡಿಕೊಳ್ಳಬಹುದು ಎಂಬುದನ್ನು ನಿಮಗೆ ಊಹಿಸಬಹುದು. ಇಷ್ಟು ದೊಡ್ಡ ದೇಶವನ್ನು ಅಂತಹ ಜನರ ಕೈಗೆ ಒಪ್ಪಿಸಬಹುದೇ? ಎಂದು ಪ್ರಶ್ನಿಸಿದರು. </p>.<p>ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲದವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಹೆಸರು ಹೇಳದೆಯೇ ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.</p>.<h2>ಪ್ರಧಾನಿಯ ಮಾತು...</h2>.<ul><li> </li><li><p>60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ‘ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ’ ಶೌಚಾಲಯ, ಅಡುಗೆ ಅನಿಲ, ವಿದ್ಯುತ್, ನೀರು, ಬ್ಯಾಂಕ್ ಖಾತೆಗಳಂತಹ ಸಣ್ಣ ಸೌಲಭ್ಯಗಳನ್ನೂ ನೀಡದೆ ವಂಚಿಸಿದೆ.</p></li><li><p>ಯುಪಿಎ ಆಡಳಿತದಲ್ಲಿ ಪ್ರಧಾನಿಗೆ ಯಾರೂ ಗೌರವ ಕೊಡುತ್ತಿರಲಿಲ್ಲ. ‘ರಿಮೋಟ್ ಕಂಟ್ರೋಲ್’ನಲ್ಲಿ ಸರ್ಕಾರ ನಡೆಯುತ್ತಿತ್ತು.</p></li><li><p> 2014ರ ಮೊದಲು ಇದ್ದ ಪರಿಸ್ಥಿತಿಗೆ ಮರಳಲು ದೇಶವು ಬಯಸುವುದಿಲ್ಲ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ:</strong> ತನ್ನ ಅಧಿಕಾರದ ಅವಧಿಯಲ್ಲಿ ಮಾಡಿರುವ ಪಾಪಕೃತ್ಯಗಳಿಗಾಗಿ ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ‘ಶಿಕ್ಷಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>ರಾಜಸ್ಥಾನದ ಭೀನ್ಮಾಲ್ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಒಮ್ಮೆ 400 ಸ್ಥಾನಗಳನ್ನು ಗೆದ್ದಿದ್ದ ಪಕ್ಷಕ್ಕೆ ಈಗ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳಲ್ಲಿ ಸ್ಪರ್ಧಿಸಲೂ ಆಗುತ್ತಿಲ್ಲ. ಕಾಂಗ್ರೆಸ್ನ ಈಗಿನ ಸ್ಥಿತಿಗೆ ಆ ಪಕ್ಷವೇ ಹೊಣೆ’ ಎಂದು ಕುಟುಕಿದರು.</p>.<p>‘ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಹರಡುವ ಮೂಲಕ ಕಾಂಗ್ರೆಸ್ ಪಕ್ಷವು ದೇಶವನ್ನು ಟೊಳ್ಳಾಗುವಂತೆ ಮಾಡಿದೆ. ಇಂದು ದೇಶದ ಜನರು ಕಾಂಗ್ರೆಸ್ ಮೇಲೆ ಕೋಪಗೊಂಡಿದ್ದು, ಈ ಪಾಪಗಳಿಗೆ ಅದನ್ನು ಶಿಕ್ಷಿಸುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಮುಖ ನೋಡಬಾರದು ಎಂಬ ಸಿಟ್ಟು ಯುವಜನರಲ್ಲಿದೆ’ ಎಂದರು. </p>.<p>‘ಬಿಜೆಪಿಯನ್ನು ಎದುರಿಸಲು ಅವರು ಅವಕಾಶವಾದಿ ‘ಇಂಡಿ’ ಒಕ್ಕೂಟ ರಚಿಸಿದ್ದಾರೆ. ಆದರೆ ಅದರ ಸ್ಥಿತಿ, ಹಾರಾಡುವ ಮುನ್ನವೇ ದಾರ ತುಂಡಾದ ಗಾಳಿಪಟದ ಹಾಗಾಗಿದೆ’ ಎಂದು ಲೇವಡಿ ಮಾಡಿದರು.</p>.<p>‘ಈ ಲೋಕಸಭಾ ಚುನಾವಣೆಯಲ್ಲಿ ಶೇ 25 ರಷ್ಟು ಸೀಟುಗಳಲ್ಲಿ ಆ ಪಕ್ಷಗಳ ಅಭ್ಯರ್ಥಿಗಳು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ. ಚುನಾವಣೆಗೆ ಮುನ್ನವೇ ಇಷ್ಟೊಂದು ಕಚ್ಚಾಟ ನಡೆದರೆ, ಚುನಾವಣೆಯ ನಂತರ ಲೂಟಿಗಾಗಿ ಅವರು ಯಾವ ರೀತಿ ಹೊಡೆದಾಡಿಕೊಳ್ಳಬಹುದು ಎಂಬುದನ್ನು ನಿಮಗೆ ಊಹಿಸಬಹುದು. ಇಷ್ಟು ದೊಡ್ಡ ದೇಶವನ್ನು ಅಂತಹ ಜನರ ಕೈಗೆ ಒಪ್ಪಿಸಬಹುದೇ? ಎಂದು ಪ್ರಶ್ನಿಸಿದರು. </p>.<p>ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲದವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ಹೆಸರು ಹೇಳದೆಯೇ ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.</p>.<h2>ಪ್ರಧಾನಿಯ ಮಾತು...</h2>.<ul><li> </li><li><p>60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್, ‘ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ’ ಶೌಚಾಲಯ, ಅಡುಗೆ ಅನಿಲ, ವಿದ್ಯುತ್, ನೀರು, ಬ್ಯಾಂಕ್ ಖಾತೆಗಳಂತಹ ಸಣ್ಣ ಸೌಲಭ್ಯಗಳನ್ನೂ ನೀಡದೆ ವಂಚಿಸಿದೆ.</p></li><li><p>ಯುಪಿಎ ಆಡಳಿತದಲ್ಲಿ ಪ್ರಧಾನಿಗೆ ಯಾರೂ ಗೌರವ ಕೊಡುತ್ತಿರಲಿಲ್ಲ. ‘ರಿಮೋಟ್ ಕಂಟ್ರೋಲ್’ನಲ್ಲಿ ಸರ್ಕಾರ ನಡೆಯುತ್ತಿತ್ತು.</p></li><li><p> 2014ರ ಮೊದಲು ಇದ್ದ ಪರಿಸ್ಥಿತಿಗೆ ಮರಳಲು ದೇಶವು ಬಯಸುವುದಿಲ್ಲ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>