‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿಮ್ಮ ನಿರ್ಧಾರಕ್ಕೆ ಹ್ಯಾಟ್ಸ್ ಆಫ್ ಸರ್. ನಿಮ್ಮ ರಾಜಕೀಯ ಭವಿಷ್ಯವನ್ನು ಜನರ ಕೈಯಲ್ಲಿ ಇಟ್ಟಿರುವುದು ಪ್ರಾಮಾಣಿಕ ರಾಜಕೀಯದ ಬಗ್ಗೆ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ಮತಗಳ ಮೂಲಕ ನಿಮ್ಮ ಭವಿಷ್ಯವನ್ನು ನಿರ್ಧರಿಸುವಂತೆ ದೆಹಲಿ ಜನತೆಗೆ ನೀವು ನೀಡಿರುವ ಕರೆ, ನಿಮ್ಮ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಎತ್ತಿ ತೋರಿಸುತ್ತದೆ’ ಎಂದು ಪಾಲೇಕರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ದಿಟ್ಟ ನಡೆಯ ಮೂಲಕ ಬಿಜೆಪಿಯ ರಾಜಕೀಯ ಪ್ರೇರಿತ ದಾಳಿಗಳನ್ನು ಕೇಜ್ರಿವಾಲ್ ಕೊನೆಗೊಳಿಸಿದ್ದಾರೆ. ಜತೆಗೆ, ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಜನರ ತೀರ್ಪಿನಲ್ಲಿ ಅಚಲವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.