ಮುಂಬೈ: ಟಿ–20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ₹11 ಕೋಟಿ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
#Live 📡| 05-07-2024
— Eknath Shinde - एकनाथ शिंदे (@mieknathshinde) July 5, 2024
📍विधान भवन, मुंबई
📹 विश्वविजेत्या भारतीय क्रिकेट संघातील खेळाडूंचा सत्कार समारंभ लाईव्ह https://t.co/K8szcPXJSx
ತಂಡದಲ್ಲಿದ್ದ ಮುಂಬೈ ಆಟಗಾರರಾದ ರೋಹಿತ್ ಶರ್ಮಾ, ಸುರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಹಾಗೂ ಶಿವಂದುಬೆ ಅವರಿಗೆ ವಿಧಾನ ಭವನದ ಸೆಂಟ್ರಲ್ ಹಾಲ್ನಲ್ಲಿ ಸನ್ಮಾನಿಸಿ ಈ ಘೋಷಣೆ ಮಾಡಿದರು.
ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಗೆಲುವಿನ ಬಗ್ಗೆ ಆನಂದ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಅನ್ನು ವಿಶೇಷವಾಗಿ ಪ್ರಶಂಸಿದ್ದಾರೆ.
अनंत आमुची ध्येयासक्ती, अनंत अन आशा, किनारा तुला पामराला...
— Eknath Shinde - एकनाथ शिंदे (@mieknathshinde) July 5, 2024
कुसुमाग्रज्यांच्या लेखणीतून साकारलेल्या 'कोलंबसाचे गर्वगीत' या कवितेतील ओळी खऱ्या करून दाखवत आयसीसी टी-२० विश्वचषकाला गवसणी घालणारे भारतीय क्रिकेट संघातील मुंबईकर सदस्य कर्णधार रोहित शर्मा, सुर्यकुमार यादव, यशस्वी… pic.twitter.com/Dhfz27wATH
ಸಹಾಯಕ ಸಿಬ್ಬಂದಿಯಾಗಿದ್ದ ಪರಾಸ್ ಮಂಬ್ರೆ ಹಾಗೂ ಅರುಣ್ ಕನಾಡೆ ಅವರನ್ನೂ ಮುಖ್ಯಮಂತ್ರಿ ಹಾಡಿ ಹೊಗಳಿದ್ದಾರೆ.
ಗುರುವಾರ ದಕ್ಷಿಣ ಮುಂಬೈನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಜನದಟ್ಟಣೆಯನ್ನು ನಿಭಾಯಿಸಿದ ಪೊಲೀಸರನ್ನೂ ಶಿಂದೆ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.