‘ನಾನು ರಾಜಶೇಖರ ರೆಡ್ಡಿಯವರಿಂದ ವೈಯಕ್ತಿಕವಾಗಿ ಬಹಳಷ್ಟನ್ನು ಕಲಿತಿದ್ದೇನೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ನನ್ನ ಭಾರತ್ ಜೋಡೊ ಯಾತ್ರೆಯು ರೆಡ್ಡಿಯವರ ಪಾದಯಾತ್ರೆಯಿಂದ ಸ್ಫೂರ್ತಿ ಪಡೆದಿದ್ದಾಗಿದೆ. ಬಿಸಿಲು, ಮಳೆಯಲ್ಲೂ ಆಂಧ್ರ ಪ್ರದೇಶದ ಜನರ ಜೊತೆಗಿನ ರೆಡ್ಡಿಯವರ ನಡಿಗೆ ನನಗೆ ನೆನಪಾಗುತ್ತಿದೆ’ಎಂದಿದ್ದಾರೆ.
‘ಅಂತಹ ಯಾತ್ರೆಗಳನ್ನು ಪರಿಗಣಿಸಿ ಭಾರತ್ ಜೋಡೊ ಯಾತ್ರೆ ರೂಪಿಸಿದೆವು’ ಎಂದು ಅವರು ಹೇಳಿದ್ದಾರೆ.
2003ರಲ್ಲಿ ರೆಡ್ಡಿ ಆಂಧ್ರ ಪ್ರದೇಶದ ಉದ್ದಕ್ಕೂ 1,400 ಕಿ.ಮೀ ಪಾದಯಾತ್ರೆ ಮಾಡಿದ್ದರು. ವರ್ಷದ ಬಳಿಕ, ಟಿಡಿಪಿಯನ್ನು ಸೋಲಿಸಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿತ್ತು.