<p><strong>ನಾಗ್ಪುರ:</strong> ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್ಗೆ ಸಂಕಷ್ಟಗಳು ಎದುರಾದ ಕಾರಣ ಶರದ್ ಪವಾರ್ ಬಣ ತೊರೆದು ಅಜಿತ್ ಪವಾರ್ ಅವರೊಂದಿಗೆ ಹೋಗಬೇಕಾಯಿತು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶಾಸಕ ರಾಜೇಂದ್ರ ಶಿಂಗ್ನೆ ಹೇಳಿದ್ದಾರೆ.</p><p>ಸದ್ಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಹಾಗೂ ಕೆಲವು ಶಾಸಕರು ಶಿವಸೇನಾ, ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕಳೆದ ವರ್ಷ ಸೇರಿಕೊಂಡರು. ಇದು ಎನ್ಸಿಪಿ ಇಬ್ಭಾಗವಾಗಲು ಕಾರಣವಾಯಿತು.</p><p>ಶರದ್ ಅವರು ಕಟ್ಟಿದ್ದ ಮೂಲ ಎನ್ಸಿಪಿಯನ್ನು ಅಜಿತ್ ಮುನ್ನಡೆಸುತ್ತಿದ್ದಾರೆ.</p><p>ಬುಲ್ಧಾನ ಜಿಲ್ಲೆಯ ಸಿಂದ್ಖೇಡ್ ರಾಜ ಕ್ಷೇತ್ರದ ಶಾಸಕ ರಾಜೇಂದ್ರ ಅವರು ವಾರ್ಧಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.</p><p>ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರದ್ ಪವಾರ್ ಅವರನ್ನು ಸದಾ ಗೌರವಿಸುತ್ತೇನೆ. ಅವರ ನಾಯಕತ್ವದಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ತಮ್ಮ ರಾಜಕೀಯ ಬದುಕಿಗೆ ಅವರ ಕೊಡುಗೆ ದೊಡ್ಡದಾಗಿದ್ದು ಯಾವಾಗಲು ಋಣಿಯಾಗಿರುತ್ತೇನೆ ಎಂದಿದ್ದಾರೆ. </p><p>'ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್ಗೆ ತೊಂದರೆಗಳು ಎದುರಾದ ಕಾರಣ ಮತ್ತು ಅಸಹಾಯಕತೆಯಿಂದಾಗಿ ನಾನು ಅಜಿತ್ ಅವರೊಂದಿಗೆ ಆಡಳಿತ ಪಕ್ಷದ ಜೊತೆಗೆ ಹೋಗಬೇಕಾಯಿತು. ಸರ್ಕಾರ ಸದ್ಯ ನಮ್ಮ ಬ್ಯಾಂಕ್ಗೆ ₹ 300 ಕೋಟಿ ಅನುದಾನ ಒದಗಿಸಿದೆ. ಪವಾರ್ ಅವರು ನಮ್ಮ ಪಾಲಿಗೆ ಸದಾ ಪೂಜ್ಯನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ:</strong> ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್ಗೆ ಸಂಕಷ್ಟಗಳು ಎದುರಾದ ಕಾರಣ ಶರದ್ ಪವಾರ್ ಬಣ ತೊರೆದು ಅಜಿತ್ ಪವಾರ್ ಅವರೊಂದಿಗೆ ಹೋಗಬೇಕಾಯಿತು ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಶಾಸಕ ರಾಜೇಂದ್ರ ಶಿಂಗ್ನೆ ಹೇಳಿದ್ದಾರೆ.</p><p>ಸದ್ಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಹಾಗೂ ಕೆಲವು ಶಾಸಕರು ಶಿವಸೇನಾ, ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವನ್ನು ಕಳೆದ ವರ್ಷ ಸೇರಿಕೊಂಡರು. ಇದು ಎನ್ಸಿಪಿ ಇಬ್ಭಾಗವಾಗಲು ಕಾರಣವಾಯಿತು.</p><p>ಶರದ್ ಅವರು ಕಟ್ಟಿದ್ದ ಮೂಲ ಎನ್ಸಿಪಿಯನ್ನು ಅಜಿತ್ ಮುನ್ನಡೆಸುತ್ತಿದ್ದಾರೆ.</p><p>ಬುಲ್ಧಾನ ಜಿಲ್ಲೆಯ ಸಿಂದ್ಖೇಡ್ ರಾಜ ಕ್ಷೇತ್ರದ ಶಾಸಕ ರಾಜೇಂದ್ರ ಅವರು ವಾರ್ಧಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎನ್ಸಿಪಿ (ಎಸ್ಪಿ) ಮುಖ್ಯಸ್ಥ ಶರದ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.</p><p>ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶರದ್ ಪವಾರ್ ಅವರನ್ನು ಸದಾ ಗೌರವಿಸುತ್ತೇನೆ. ಅವರ ನಾಯಕತ್ವದಲ್ಲಿ 30 ವರ್ಷ ಕೆಲಸ ಮಾಡಿದ್ದೇನೆ. ತಮ್ಮ ರಾಜಕೀಯ ಬದುಕಿಗೆ ಅವರ ಕೊಡುಗೆ ದೊಡ್ಡದಾಗಿದ್ದು ಯಾವಾಗಲು ಋಣಿಯಾಗಿರುತ್ತೇನೆ ಎಂದಿದ್ದಾರೆ. </p><p>'ನಮ್ಮ ಜಿಲ್ಲಾ ಸಹಕಾರಿ ಬ್ಯಾಂಕ್ಗೆ ತೊಂದರೆಗಳು ಎದುರಾದ ಕಾರಣ ಮತ್ತು ಅಸಹಾಯಕತೆಯಿಂದಾಗಿ ನಾನು ಅಜಿತ್ ಅವರೊಂದಿಗೆ ಆಡಳಿತ ಪಕ್ಷದ ಜೊತೆಗೆ ಹೋಗಬೇಕಾಯಿತು. ಸರ್ಕಾರ ಸದ್ಯ ನಮ್ಮ ಬ್ಯಾಂಕ್ಗೆ ₹ 300 ಕೋಟಿ ಅನುದಾನ ಒದಗಿಸಿದೆ. ಪವಾರ್ ಅವರು ನಮ್ಮ ಪಾಲಿಗೆ ಸದಾ ಪೂಜ್ಯನೀಯರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>