ನವದೆಹಲಿ: ದೇಶದ ಆರ್ಥಿಕ ಪರಿಸ್ಥಿತಿಯು 2014ಕ್ಕೂ ಮೊದಲು ಹೇಗಿತ್ತು, ಆ ಇಸವಿಯ ನಂತರದಲ್ಲಿ ಹೇಗಾಗಿದೆ ಎಂಬುದನ್ನು ಹೋಲಿಸಿ ತೋರಿಸುವ ಶ್ವೇತಪತ್ರವನ್ನು ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಕಾರಣ, ಸಂಸತ್ತಿನ ಬಜೆಟ್ ಅಧಿವೇಶನವು ಒಂದು ದಿನದ ಮಟ್ಟಿಗೆ ವಿಸ್ತರಣೆ ಆಗಲಿದೆ. ಅಂದರೆ, ಅಧಿವೇಶನವು ಶನಿವಾರ ಮುಗಿಯಲಿದೆ.