ಗುರುವಾರ, 24 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Wayanad landslides |ನಲುಗಿದ ನೆಲದಲ್ಲಿ ‘ಅಪರಿಚಿತರ’ ಚಿರನಿದ್ರೆ

ಭೂಕುಸಿತಕ್ಕೆ ನಲುಗಿದ ಚಹಾತೋಟದ ನಡುವೆ ದೇಹ, ಅಂಗಾಂಗಗಳ ಅಂತ್ಯಸಂಸ್ಕಾರ
Published : 5 ಆಗಸ್ಟ್ 2024, 23:48 IST
Last Updated : 5 ಆಗಸ್ಟ್ 2024, 23:48 IST
ಫಾಲೋ ಮಾಡಿ
Comments
ತೀರಿಹೋದವರೆಲ್ಲರೂ ಚೂರಲ್‌ಮಲ, ಮುಂಡಕ್ಕೈ ಭಾಗದವರು. ಅಲ್ಲಿನ ಜನರಿಗೆ ಗೌರವ ಸಲ್ಲಿಸಲು ಅನುಕೂಲ ಆಗಲಿ ಎಂಬ ಕಾರಣಕ್ಕೆ ಈ ಜಾಗ ಆಯ್ಕೆ ಮಾಡಲಾಗಿದೆ
ನಾಸರ್, ಮೇಪ್ಪಾಡಿ ಗ್ರಾ.ಪಂ ಸ್ಥಾಯಿ ಸಮಿತಿ ಸದಸ್ಯ
2019ರಲ್ಲಿ ಸಂಭವಿಸಿದ ದುರಂತದಲ್ಲಿ 17 ಜನರು ಸಾವಿಗೀಡಾಗಿದ್ದರು. ಕಾಫಿ, ಚಹಾ ಮತ್ತು ಏಲಕ್ಕಿ ತೋಟವೂ ಇಲ್ಲದಾಗಿತ್ತು. ಈ ಜಾಗದಲ್ಲಿ ಈಗ ಮತ್ತೊಂದು ನೋವು
ಮುತ್ತಲಿಬ್ ತಾಞಿಲೋಡ್, ಸ್ಥಳೀಯ ವ್ಯಾಪಾರಿ
‘ಕಳ್ಳರ ಕಾಟ: ಸೇವೆಗೆ ಬಂದವರ ನೋಂದಣಿ
ದುರಂತಭೂಮಿಯಲ್ಲಿ ಕಳ್ಳರ ಕಾಟ ಹೆಚ್ಚಿದ್ದು ಸ್ವಯಂಸೇವಕರ ಹೆಸರಿನಲ್ಲಿ ಹಣ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದ್ದರಿಂದ ‘ಸೇವೆ’ಗೆ ಜಿಲ್ಲಾಡಳಿತ ನಿಯಂತ್ರಣ ಹೇರಿದೆ. ಆರಂಭದ ಕೆಲವು ದಿನ ಮೃತದೇಹಗಳ ಹುಡುಕಾಟದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ವೈಯಕ್ತಿಕವಾಗಿ ಕೆಲವರು ತೊಡಗಿಸಿಕೊಂಡಿದ್ದರು. ಈ ನಡುವೆ ಕೆಲವರು ಮೃತದೇಹಗಳಿಂದ ಆಭರಣ ಮತ್ತು ಅಳಿದುಳಿದ ಮನೆಗಳಿಂದ ಹಣ, ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಗಮನಕ್ಕೆ ಬಂದಿದೆ. ಕೆಲವರನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪ್ರತಿ ಊರಿನಲ್ಲಿ ಅಪರಿಚಿತರನ್ನು ಕಂಡರೆ ಸ್ಥಳೀಯರೇ ತಡೆದು ನಿಲ್ಲಿಸಿ ಮಾಹಿತಿ ಕೇಳಿ ಕಳುಹಿಸುತ್ತಿದ್ದರು. ಈ ಎಲ್ಲದರಿಂದಾಗಿ ಹೆಸರು ನೊಂದಾಯಿಸಿಕೊಂಡೇ ಸೇವಾಕಾರ್ಯಕ್ಕೆ ಇಳಿಯಲು ವ್ಯವಸ್ಥೆ ಮಾಡಲಾಗಿದೆ.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹದ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಡಿಎನ್‌ಎ ಮಾದರಿಯ ಸಂಖ್ಯೆ ನಮೂದಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹದ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಡಿಎನ್‌ಎ ಮಾದರಿಯ ಸಂಖ್ಯೆ ನಮೂದಿಸುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
‘ಡಿಸಾಸ್ಟರ್ ಟೂರಿಸಂ’ಗೆ ನಿಯಂತ್ರಣ
ದುರಂತ ನಡೆದ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶಗಳನ್ನು ನೋಡಲು ಶನಿವಾರದಿಂದ ಕೆಲವು ಜನರು ಹೋಗಿದ್ದರು. ನೂರಾರು ಜನರು ಪ್ರಾಣ ಕಳೆದುಕೊಂಡ ಮತ್ತು ಬಂಡೆಕಲ್ಲುಗಳು ಉರುಳಿ ಬಿದ್ದ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆದು ಸಾಮಾಜಿಕ ತಾಣಗಳಿಗೆ ಅಪ್‌ಲೋಡ್‌ ಮಾಡತೊಡಗಿದ್ದರು. ಭಾನುವಾರ ಈ ಸ್ಥಳಗಳು ‘ಡಿಸಾಸ್ಟರ್ ಟೂರಿಸಂ’ ತಾಣದಂತಾಗಿತ್ತು. ಇದನ್ನು ಮನಗಂಡ ಜಿಲ್ಲಾಡಳಿತ ಅನವಶ್ಯಕವಾಗಿ ಜನರು ಅತ್ತ ಹೋಗದಂತೆ ನಿರ್ಬಂಧ ಹೇರಿದೆ.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ತರಲಾಯಿತು –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಭೂಕುಸಿತದಿಂದ ಸಾವಿಗೀಡಾದವರ ಪೈಕಿ ಗುರುತು ಪತ್ತೆಯಾಗದ ಮೃತದೇಹಗಳನ್ನು ಸಾಮೂಹಿಕ ಅಂತ್ಯಕ್ರಿಯೆ ತರಲಾಯಿತು –ಪ್ರಜಾವಾಣಿ ಚಿತ್ರ–ಫಕ್ರುದ್ದೀನ್‌ ಎಚ್‌.
ಗುಡ್ಡ ಇಳಿದ ಬುಡಕಟ್ಟು ಜನರು
ದುರಂತದ ನಂತರವೂ ಗುಡ್ಡ ಇಳಿಯಲು ಮತ್ತು ಕಾಡಿನಿಂದ ಹೊರಬರಲು ನಿರಾಕರಿಸಿದ್ದ ಏರಾಟ್ಟುಕುಂಡ್‌ ಭಾಗದ ಬುಡಕಟ್ಟು ಜನರನ್ನು ಕೊನೆಗೂ ಕಾಳಜಿ ಕೇಂದ್ರಗಳಿಗೆ ತಲುಪಿಸಲಾಗಿದ್ದು ಅಟ್ಟಮಲದಲ್ಲಿ ಅವರು ಸುರಕ್ಷಿತರಾಗಿದ್ದಾರೆ. ಈ ಶಿಬಿರದ ಮೇಲುಸ್ತುವಾರಿಯನ್ನು ಪರಿಶಿಷ್ಟ ಪಂಗಡದ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಏರಾಟ್ಟುಕುಂಡ್‌ ರಕ್ಷಿತಾರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ನಾಲ್ಕು ಕುಟುಂಬಗಳು ಇದ್ದವು. ಸತತ ಪ್ರಯತ್ನದ ನಂತರ ಅವರನ್ನು ಅಟ್ಟಮಲ ಕಾಳಜಿ ಕೇಂದ್ರಕ್ಕೆ ತಲುಪಿಸಲಾಗಿತ್ತು. ಮೇಪ್ಪಾಡಿಯಲ್ಲಿರುವ ಕಾಳಜಿ ಕೇಂದ್ರಗಳಿಗೆ ಬರಲು ಒಪ್ಪದ ಕಾರಣ ಅವರನ್ನು ಅಲ್ಲೇ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT