ಭಾವೈಕ್ಯತೆಯ ಮೌಲ್ಯಗಳನ್ನ ಜನಸಾಮಾನ್ಯರಲ್ಲಿ ಬಿತ್ತಿದ ಸುತಾರ ಅವರು ಅಧ್ಯಾತ್ಮ ಸಾಧನೆಗೆ ಧರ್ಮ ಭೇದಗಳಿಲ್ಲ. ಅದು ಎಲ್ಲರಿಗೂ ತೆರೆದ ದಾರಿ ಎನ್ನುವುದನ್ನು ಸಾರಿದ ಆಧುನಿಕ ಕಬೀರರು. ಕೋಮು ಸೌಹಾರ್ದತೆಯ ಮಹತ್ವವನ್ನು ಸಾರಿದ ಸುತಾರ ಅವರು ಮಾನವೀಯತೆಗಿಂತ ಮಿಗಿಲಾದ ಧರ್ಮವಿಲ್ಲ ಎಂದು ನಡೆದು ತೋರಿಸಿದ್ದಲ್ಲದೆ, ಎಲ್ಲಾ ಧರ್ಮಗಳ ಸಾರವೂ ಒಂದೇ ಎಂದು ಪ್ರತಿಪಾದಿಸಿದರು.