ಮುಡಾದಲ್ಲಿ ಫಿಫ್ಟಿ ಫಿಫ್ಟಿ ಹಂಚಿಕೆ ಆದ ಮಾದರಿಯಲ್ಲಿ ₹187 ಕೋಟಿಯಲ್ಲಿ ಯಾರ್ಯಾರಿಗೆ ಎಷ್ಟು ಹಂಚಿಕೆ ಆಗಿದೆ ಎಂದು ಹೇಳಿ?
– ವಿ.ಸುನಿಲ್ ಕುಮಾರ್ ಬಿಜೆಪಿ
ಅಶೋಕ ಅವರೇ ನಿಮ್ಮನ್ನು ಲೀಡರ್ಶಿಪ್ನಿಂದ ತೆಗೆಯುತ್ತಾರೆ ಅಂತ ಸುದ್ದಿ ಇತ್ತು. ಇವತ್ತು ಚೆನ್ನಾಗಿ ಮಾತನಾಡಿದ್ದೀರಿ ನಿಮ್ಮನ್ನು ನಾಯಕರಾಗಿ ಮುಂದುವರೆಸುತ್ತಾರೆ ಬಿಡಿ
–ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಈ ಹಗರಣದ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಿನ್ನ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಸಿಎಂ ಹಗರಣ ನಡೆದಿದೆ ಎಂದರೆ ಡಿಸಿಎಂ ಏನೂ ಆಗಿಲ್ಲ ಹಣ ಎಲ್ಲೂ ಹೋಗಿಲ್ಲ ಎನ್ನುತ್ತಾರೆ.
–ಆರ್.ಅಶೋಕ, ವಿರೋಧಪಕ್ಷದ ನಾಯಕ
ಹೊಂದಾಣಿಕೆ ರಾಜಕಾರಣ ಬೇಡ ಎರಡೂ ಪಕ್ಷಗಳು ಸ್ವಚ್ಛವಾಗಬೇಕು. ಹಗರಣಗಳನ್ನು ಸಿಬಿಐ ತನಿಖೆಗೆ ಕೊಡಿ ಎಲ್ಲವೂ ಸರಿ ಹೋಗುತ್ತದೆ