‘ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳ ಮಾಹಿತಿ ಹೈಕಮಾಂಡ್ಗೆ ಹೋಗುತ್ತದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ತುಮಕೂರಿನಲ್ಲೂ ನಾನು ಮತ್ತು ಪರಮೇಶ್ವರ ಭಾನುವಾರ ಭೇಟಿ ಆಗಿದ್ದೆವು. ಈ ಹಿಂದೆ ಸಚಿವ ಎಚ್.ಸಿ. ಮಹದೇವಪ್ಪ ಅವರ ಮನೆಯಲ್ಲೂ ಭೇಟಿ ಆಗಿದ್ದೆವು. ನಾವ್ಯಾಕೆ ಭಯ ಪಡಬೇಕು. ಪಕ್ಷಕ್ಕೆ ಯಾರೆಲ್ಲ ನಿಷ್ಠೆಯಿಂದ ಇದ್ದಾರೆ ಎನ್ನುವುದನ್ನೂ ಹೈಕಮಾಂಡ್ ಗಮನಿಸುತ್ತದೆ’ ಎಂದರು.