<p><strong>ಮಂಡ್ಯ</strong>: ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳಿಗೆ ಸಾವಿರಾರು ರೂಪಾಯಿ ಹಣ ಹೂಡಿಕೆ ಮಾಡಿ, ವಂಚನೆಗೊಳಗಾದವರಿಂದ ದೂರು ಅರ್ಜಿ ಸ್ವೀಕರಿಸುವುದನ್ನು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸ್ಥಗಿತಗೊಳಿಸಿದ್ದು, ಇದರಿಂದ ಸಂತ್ರಸ್ತೆಯರು ಕಂಗೆಟ್ಟಿದ್ದಾರೆ. </p><p>ಐದಾರು ತಿಂಗಳಿಂದ ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಗಳಿಗೆ ಮಹಿಳೆಯರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು. ‘ಸರ್ಕಾರ ಪರಿಹಾರ ಕೊಡಿಸುತ್ತದೆ’ ಎಂಬ ಸಂತ್ರಸ್ತೆಯರ ನಿರೀಕ್ಷೆ ಭಗ್ನವಾಗಿದೆ. </p><p>‘ಅನಿಯಂತ್ರಿತ ಠೇವಣಿ’ (ಅನ್ರೆಗ್ಯುಲೇಟೆಡ್ ಡೆಪಾಸಿಟ್) ಯೋಜನೆಗಳ ಅಡಿ, ಅಧಿಕ ಬಡ್ಡಿ ಆಸೆಗಾಗಿ ಹಣ ಹೂಡಿದ್ದ ಮಹಿಳೆಯರು ಪರಿತಪಿಸುತ್ತಿದ್ದಾರೆ.</p><p><strong>ರಚನೆಯಾಗದ ಸಕ್ಷಮ ಪ್ರಾಧಿಕಾರ: </strong>ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 (ಕೆ.ಪಿ.ಐ.ಡಿ ಅಧಿನಿಯಮ) ಮತ್ತು 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019ರ ಅಡಿಯಲ್ಲಿ ಸರ್ಕಾರ ‘ಸಕ್ಷಮ ಪ್ರಾಧಿಕಾರ’ವನ್ನು ರಾಜ್ಯದಲ್ಲಿ ಇದುವರೆಗೆ ರಚಿಸಿಲ್ಲ. ವಿಶೇಷಾಧಿಕಾರಿಯನ್ನೂ ನೇಮಿಸಿಲ್ಲ.</p><p>‘ಅಧಿಸೂಚನೆ ಹೊರಡಿಸಿಲ್ಲವಾದ್ದರಿಂದ ಸದ್ಯಕ್ಕೆ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.</p><p><strong>ಹಣ ವಸೂಲಿ: </strong>‘ಪರಿಹಾರ ಕೊಡಿಸುತ್ತೇವೆ ಎಂದು ನಂಬಿಸಿ, ಅರ್ಜಿ ಹಾಕಿಸಲು ತಲಾ ₹2000–₹3000 ವಸೂಲಿ ಮಾಡಿ ಮಧ್ಯವರ್ತಿಗಳು ಕರೆ ತಂದಿದ್ದರು. ಇಲ್ಲಿ ನೋಡಿದರೆ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಬಳಿ ಕುಳಿತಿದ್ದ ಮಹಿಳೆಯರು ಅಳಲು ತೋಡಿಕೊಂಡರು.</p><p>2023ರ ನವೆಂಬರ್ನಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯೊಂದ ರಲ್ಲೇ 37,400 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವು ಜಿಲ್ಲಾಧಿಕಾರಿ ಕಚೇರಿಗಳಲ್ಲೇ ದೂಳು ತಿನ್ನುತ್ತಿವೆ. </p><p>‘ಹಳ್ಳಿಗಾಡಿನ ಮಹಿಳೆಯರಿಗೆ ಬಡ್ಡಿ ಆಸೆ ತೋರಿಸಿ, ಕೂಡಿಟ್ಟ ಹಣವನ್ನು ಕಸಿದುಕೊಂಡ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಬಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಸಿಐಟಿಯು ಮಂಡ್ಯ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ. </p>.<h3>245 ಎಫ್ಐಆರ್ ದಾಖಲು</h3><p>‘ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಬಡ್ಸ್ ಕಾಯ್ದೆಯಡಿ 245 ಎಫ್ಐಆರ್ ದಾಖಲಾಗಿದ್ದು, ಕೆಲವು ತನಿಖಾ ಹಂತದಲ್ಲಿ, ಕೆಲವು ದೋಷಾರೋಪಣಾ ಪಟ್ಟಿ ಸಲ್ಲಿಸುವ ಹಂತದಲ್ಲಿವೆ. ಇನ್ನೂ ಕೆಲವು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ’ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಇದುವರೆಗೆ ಬಂದ ಅರ್ಜಿಗಳನ್ನು ಮಾನವೀಯ ದೃಷ್ಟಿಯಿಂದ ಸ್ವೀಕರಿಸಿದ್ದೇವೆ. ಸರ್ಕಾರ ‘ಸಕ್ಷಮ ಪ್ರಾಧಿಕಾರ’ ರಚಿಸಿ, ಅಧಿಸೂಚನೆ ಹೊರಡಿಸಿದ ನಂತರ ಅರ್ಜಿಗಳನ್ನು ಪ್ರಾಧಿಕಾರಕ್ಕೆ ರವಾನಿಸುತ್ತೇವೆ</blockquote><span class="attribution">– ಕುಮಾರ, ಮಂಡ್ಯ ಜಿಲ್ಲಾಧಿಕಾರಿ</span></div>.<p>ಪರಿಹಾರದ ನೆಪದಲ್ಲಿ ಮಧ್ಯವರ್ತಿಗಳಿಂದ ಹಣ ವಸೂಲಿ</p><p>ಹಣಕಾಸು ಕಂಪನಿಗಳ ಆಸ್ತಿ ಮುಟ್ಟುಗೋಲಿಗೆ ಆಗ್ರಹ</p><p>ಅರ್ಜಿ ಸ್ವೀಕರಿಸಲು ಕಾನೂನು ತೊಡಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳಿಗೆ ಸಾವಿರಾರು ರೂಪಾಯಿ ಹಣ ಹೂಡಿಕೆ ಮಾಡಿ, ವಂಚನೆಗೊಳಗಾದವರಿಂದ ದೂರು ಅರ್ಜಿ ಸ್ವೀಕರಿಸುವುದನ್ನು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸ್ಥಗಿತಗೊಳಿಸಿದ್ದು, ಇದರಿಂದ ಸಂತ್ರಸ್ತೆಯರು ಕಂಗೆಟ್ಟಿದ್ದಾರೆ. </p><p>ಐದಾರು ತಿಂಗಳಿಂದ ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಗಳಿಗೆ ಮಹಿಳೆಯರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು. ‘ಸರ್ಕಾರ ಪರಿಹಾರ ಕೊಡಿಸುತ್ತದೆ’ ಎಂಬ ಸಂತ್ರಸ್ತೆಯರ ನಿರೀಕ್ಷೆ ಭಗ್ನವಾಗಿದೆ. </p><p>‘ಅನಿಯಂತ್ರಿತ ಠೇವಣಿ’ (ಅನ್ರೆಗ್ಯುಲೇಟೆಡ್ ಡೆಪಾಸಿಟ್) ಯೋಜನೆಗಳ ಅಡಿ, ಅಧಿಕ ಬಡ್ಡಿ ಆಸೆಗಾಗಿ ಹಣ ಹೂಡಿದ್ದ ಮಹಿಳೆಯರು ಪರಿತಪಿಸುತ್ತಿದ್ದಾರೆ.</p><p><strong>ರಚನೆಯಾಗದ ಸಕ್ಷಮ ಪ್ರಾಧಿಕಾರ: </strong>ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 (ಕೆ.ಪಿ.ಐ.ಡಿ ಅಧಿನಿಯಮ) ಮತ್ತು 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019ರ ಅಡಿಯಲ್ಲಿ ಸರ್ಕಾರ ‘ಸಕ್ಷಮ ಪ್ರಾಧಿಕಾರ’ವನ್ನು ರಾಜ್ಯದಲ್ಲಿ ಇದುವರೆಗೆ ರಚಿಸಿಲ್ಲ. ವಿಶೇಷಾಧಿಕಾರಿಯನ್ನೂ ನೇಮಿಸಿಲ್ಲ.</p><p>‘ಅಧಿಸೂಚನೆ ಹೊರಡಿಸಿಲ್ಲವಾದ್ದರಿಂದ ಸದ್ಯಕ್ಕೆ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.</p><p><strong>ಹಣ ವಸೂಲಿ: </strong>‘ಪರಿಹಾರ ಕೊಡಿಸುತ್ತೇವೆ ಎಂದು ನಂಬಿಸಿ, ಅರ್ಜಿ ಹಾಕಿಸಲು ತಲಾ ₹2000–₹3000 ವಸೂಲಿ ಮಾಡಿ ಮಧ್ಯವರ್ತಿಗಳು ಕರೆ ತಂದಿದ್ದರು. ಇಲ್ಲಿ ನೋಡಿದರೆ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಬಳಿ ಕುಳಿತಿದ್ದ ಮಹಿಳೆಯರು ಅಳಲು ತೋಡಿಕೊಂಡರು.</p><p>2023ರ ನವೆಂಬರ್ನಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯೊಂದ ರಲ್ಲೇ 37,400 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವು ಜಿಲ್ಲಾಧಿಕಾರಿ ಕಚೇರಿಗಳಲ್ಲೇ ದೂಳು ತಿನ್ನುತ್ತಿವೆ. </p><p>‘ಹಳ್ಳಿಗಾಡಿನ ಮಹಿಳೆಯರಿಗೆ ಬಡ್ಡಿ ಆಸೆ ತೋರಿಸಿ, ಕೂಡಿಟ್ಟ ಹಣವನ್ನು ಕಸಿದುಕೊಂಡ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಬಡ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಸಿಐಟಿಯು ಮಂಡ್ಯ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ. </p>.<h3>245 ಎಫ್ಐಆರ್ ದಾಖಲು</h3><p>‘ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಬಡ್ಸ್ ಕಾಯ್ದೆಯಡಿ 245 ಎಫ್ಐಆರ್ ದಾಖಲಾಗಿದ್ದು, ಕೆಲವು ತನಿಖಾ ಹಂತದಲ್ಲಿ, ಕೆಲವು ದೋಷಾರೋಪಣಾ ಪಟ್ಟಿ ಸಲ್ಲಿಸುವ ಹಂತದಲ್ಲಿವೆ. ಇನ್ನೂ ಕೆಲವು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ’ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>.<div><blockquote>ಇದುವರೆಗೆ ಬಂದ ಅರ್ಜಿಗಳನ್ನು ಮಾನವೀಯ ದೃಷ್ಟಿಯಿಂದ ಸ್ವೀಕರಿಸಿದ್ದೇವೆ. ಸರ್ಕಾರ ‘ಸಕ್ಷಮ ಪ್ರಾಧಿಕಾರ’ ರಚಿಸಿ, ಅಧಿಸೂಚನೆ ಹೊರಡಿಸಿದ ನಂತರ ಅರ್ಜಿಗಳನ್ನು ಪ್ರಾಧಿಕಾರಕ್ಕೆ ರವಾನಿಸುತ್ತೇವೆ</blockquote><span class="attribution">– ಕುಮಾರ, ಮಂಡ್ಯ ಜಿಲ್ಲಾಧಿಕಾರಿ</span></div>.<p>ಪರಿಹಾರದ ನೆಪದಲ್ಲಿ ಮಧ್ಯವರ್ತಿಗಳಿಂದ ಹಣ ವಸೂಲಿ</p><p>ಹಣಕಾಸು ಕಂಪನಿಗಳ ಆಸ್ತಿ ಮುಟ್ಟುಗೋಲಿಗೆ ಆಗ್ರಹ</p><p>ಅರ್ಜಿ ಸ್ವೀಕರಿಸಲು ಕಾನೂನು ತೊಡಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>