ಮಾಜಿ ಪ್ರಧಾನಿ ಹಸೀನಾ ಭಾರತದಲ್ಲಿ ಇರುವ ಕಾರಣ ಉಭಯ ದೇಶಗಳ ಬಾಂಧವ್ಯದ ಪಥವನ್ನು ಹೇಗೆ ನೋಡುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದು ಭಾರತ ಹೇಗೆ ನಿರ್ಧರಿಸುತ್ತದೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ’ ಎಂದು ನುಡಿದಿದ್ದಾರೆ.
ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಹಸೀನಾ ಭಾರತದಲ್ಲಿ ಉಳಿದುಕೊಂಡಾಗ, ‘ಬಾಂಗ್ಲಾದೇಶಿಗಳು ಕೋಪಗೊಂಡಿಲ್ಲ. ಆದರೆ ಅವರು ನೊಂದಿದ್ದಾರೆ, ಗಾಯಗೊಂಡಿದ್ದಾರೆ. ಭಾರತದಿಂದ ಈ ನಡೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.