<p>‘ನಮ್ಮ ನಾಗಣ್ಣ ಮಗಳ ಜಾತಕ ಬರೆಸಲು ಪರದಾಡ್ತಿದ್ದಾನೆ. ಯಾರಾದ್ರೂ ಒಳ್ಳೇ ಜ್ಯೋತಿಷಿ ಗೊತ್ತಿದ್ರೆ ಹೇಳ್ತೀರಾ...’ ಬೈಟು ಕಾಫಿ ಬಳಗದಲ್ಲಿ ಪ್ರಸ್ತಾಪಿಸಿದ ಬದ್ರಿ.</p><p>‘ಅಯ್ಯೋ... ಜ್ಯೋತಿಷಿಗಳಿಗೇನು ಕೊರತೆ, ಊರುತುಂಬಾ ಬೋರ್ಡ್ ಹಾಕ್ಕೊಂಡು ಕೂತಿರ್ತಾರೆ’.</p><p>‘ಪರಿಸ್ಥಿತಿ ಹಾಗಿಲ್ಲಪ್ಪಾ... ಜಾತಕಾ ಬರೆಯೋರೆಂದರೆ ಕವಿತಾ ಬರೆಯೋರ ಥರಾ ಅಂದ್ಕೋಬೇಡ. ಜ್ಯೋತಿಷಿಗಳು ಕೆಲವು ಕವಿಗಳಂತೆ ದಸರಾ ದೂಸರಾ ಅಂತ ಕಿವಿಗಳನ್ನು ಹುಡುಕಿಕೊಂಡು ತಿರುಗೋದಿಲ್ಲ’.</p><p>‘ಕವಿಗಳನ್ನೇನು ಅಷ್ಟೊಂದು ಅಗ್ಗ ಅಂತ ಭಾವಿಸಬೇಡ. ಸಿಟ್ಟು ಬಂದರೆ ಕೊಟ್ಟ ಪ್ರಶಸ್ತಿ<br>ಯನ್ನು ಕೊಟ್ಟವರಿಗೇ ಹಿಂದಿರುಗಿಸಿದ ಉದಾಹರಣೆಗಳು ಇವೆ. ಅಪಸ್ವರ ಹೊರಟರೆ ಕವಿಗೋಷ್ಠಿಯನ್ನೇ ತ್ಯಜಿಸುವಷ್ಟು ಸ್ವಾಭಿಮಾನಿಗಳು ಅವರು’.</p><p>‘ಮುಡಾ ಸೈಟು, ಮುಡಾ ಅಧ್ಯಕ್ಷತೆಯನ್ನೇ ತ್ಯಜಿಸುವ ನೈತಿಕತೆ ಕಾಲದಲ್ಲಿ ಪ್ರಶಸ್ತಿ ವಾಪಸಾತಿ ಏನು ಮಹಾತ್ಯಾಗ ಬಿಡು’.</p><p>‘ಕೊಟ್ಟ ಸೈಟಿನಲ್ಲಿ ಮನೆ ಕಟ್ಟದವನು, ಕರೆದ ಗೋಷ್ಠಿಯಲ್ಲಿ ಕವಿತೆ ಓದದವನು ಕೊಟ್ಟ ಕುದುರೆ ಏರದವನಂತೆಯೇ...’ ಹೊಸದೊಂದು ವಚನ ಹೊಸೆದ ರುದ್ರಿ.</p><p>‘ವಿಷಯಾಂತರ ಬೇಡ. ನಾಗಣ್ಣನಿಗೆ ಜಾತಕ ಬರೆಯೋರು ಯಾಕೆ ಸಿಗ್ತಿಲ್ಲ ಹೇಳಿ’.</p><p>‘ನಾಗಣ್ಣನ ಚನ್ನಪಟ್ಟಣ ಅಷ್ಟೇ ಅಲ್ಲ... ಸಂಡೂರು ಮತ್ತು ಶಿಗ್ಗಾವಿಯಲ್ಲೂ ಇನ್ನೊಂದು ವಾರ ಜಾತಕ ಬರೆಯೋರು ಸಿಗೋದಿಲ್ಲ. ಅವರೆಲ್ಲಾ ವಿಪರೀತ ಬಿಜಿ’ ಕೊಟ್ರಿ ಡಿಕ್ಲೇರ್ ಮಾಡಿಬಿಟ್ಟ.</p><p>‘ಅದೇನಪ್ಪಾ ಅಂಥಾದ್ದು ಈ ಊರುಗಳಲ್ಲಿ?’</p><p>‘ನೀವಿನ್ನೂ ವಾಲ್ಮೀಕಿ ನಿಗಮದ ಹಗರಣದಲ್ಲೇ ಇದ್ದೀರಿ… ಈಗಾಗ್ಲೇ ಕೋವಿಡ್ ಸಾಮಗ್ರಿ ಖರೀದಿ ಪ್ರಕರಣ ಓಡುತ್ತಿದೆ’ ಕೊಟ್ರಿ ತಿವಿದ. ಕೊನೆಗೆ ತಿಂಗಳೇಶನೇ ವಿವರಿಸಿದ:</p><p>‘ಕೈ ಪಕ್ಷದ ಬಂಡೆಯಣ್ಣ ಕಾಲ್ಫಾರ್ ಮಾಡಿದ್ದಾರೆ: ಖಾಲಿ ಇರುವ ಮೂರು ಶಾಸಕ ಸ್ಥಾನಗಳನ್ನು ಭರ್ತಿ ಮಾಡಲು ಗೆಲ್ಲುವ ಅಭ್ಯರ್ಥಿ ಗಳಿಂದ ಜಾತಕಗಳನ್ನು ಆಹ್ವಾನಿಸಲಾಗಿದೆ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನಮ್ಮ ನಾಗಣ್ಣ ಮಗಳ ಜಾತಕ ಬರೆಸಲು ಪರದಾಡ್ತಿದ್ದಾನೆ. ಯಾರಾದ್ರೂ ಒಳ್ಳೇ ಜ್ಯೋತಿಷಿ ಗೊತ್ತಿದ್ರೆ ಹೇಳ್ತೀರಾ...’ ಬೈಟು ಕಾಫಿ ಬಳಗದಲ್ಲಿ ಪ್ರಸ್ತಾಪಿಸಿದ ಬದ್ರಿ.</p><p>‘ಅಯ್ಯೋ... ಜ್ಯೋತಿಷಿಗಳಿಗೇನು ಕೊರತೆ, ಊರುತುಂಬಾ ಬೋರ್ಡ್ ಹಾಕ್ಕೊಂಡು ಕೂತಿರ್ತಾರೆ’.</p><p>‘ಪರಿಸ್ಥಿತಿ ಹಾಗಿಲ್ಲಪ್ಪಾ... ಜಾತಕಾ ಬರೆಯೋರೆಂದರೆ ಕವಿತಾ ಬರೆಯೋರ ಥರಾ ಅಂದ್ಕೋಬೇಡ. ಜ್ಯೋತಿಷಿಗಳು ಕೆಲವು ಕವಿಗಳಂತೆ ದಸರಾ ದೂಸರಾ ಅಂತ ಕಿವಿಗಳನ್ನು ಹುಡುಕಿಕೊಂಡು ತಿರುಗೋದಿಲ್ಲ’.</p><p>‘ಕವಿಗಳನ್ನೇನು ಅಷ್ಟೊಂದು ಅಗ್ಗ ಅಂತ ಭಾವಿಸಬೇಡ. ಸಿಟ್ಟು ಬಂದರೆ ಕೊಟ್ಟ ಪ್ರಶಸ್ತಿ<br>ಯನ್ನು ಕೊಟ್ಟವರಿಗೇ ಹಿಂದಿರುಗಿಸಿದ ಉದಾಹರಣೆಗಳು ಇವೆ. ಅಪಸ್ವರ ಹೊರಟರೆ ಕವಿಗೋಷ್ಠಿಯನ್ನೇ ತ್ಯಜಿಸುವಷ್ಟು ಸ್ವಾಭಿಮಾನಿಗಳು ಅವರು’.</p><p>‘ಮುಡಾ ಸೈಟು, ಮುಡಾ ಅಧ್ಯಕ್ಷತೆಯನ್ನೇ ತ್ಯಜಿಸುವ ನೈತಿಕತೆ ಕಾಲದಲ್ಲಿ ಪ್ರಶಸ್ತಿ ವಾಪಸಾತಿ ಏನು ಮಹಾತ್ಯಾಗ ಬಿಡು’.</p><p>‘ಕೊಟ್ಟ ಸೈಟಿನಲ್ಲಿ ಮನೆ ಕಟ್ಟದವನು, ಕರೆದ ಗೋಷ್ಠಿಯಲ್ಲಿ ಕವಿತೆ ಓದದವನು ಕೊಟ್ಟ ಕುದುರೆ ಏರದವನಂತೆಯೇ...’ ಹೊಸದೊಂದು ವಚನ ಹೊಸೆದ ರುದ್ರಿ.</p><p>‘ವಿಷಯಾಂತರ ಬೇಡ. ನಾಗಣ್ಣನಿಗೆ ಜಾತಕ ಬರೆಯೋರು ಯಾಕೆ ಸಿಗ್ತಿಲ್ಲ ಹೇಳಿ’.</p><p>‘ನಾಗಣ್ಣನ ಚನ್ನಪಟ್ಟಣ ಅಷ್ಟೇ ಅಲ್ಲ... ಸಂಡೂರು ಮತ್ತು ಶಿಗ್ಗಾವಿಯಲ್ಲೂ ಇನ್ನೊಂದು ವಾರ ಜಾತಕ ಬರೆಯೋರು ಸಿಗೋದಿಲ್ಲ. ಅವರೆಲ್ಲಾ ವಿಪರೀತ ಬಿಜಿ’ ಕೊಟ್ರಿ ಡಿಕ್ಲೇರ್ ಮಾಡಿಬಿಟ್ಟ.</p><p>‘ಅದೇನಪ್ಪಾ ಅಂಥಾದ್ದು ಈ ಊರುಗಳಲ್ಲಿ?’</p><p>‘ನೀವಿನ್ನೂ ವಾಲ್ಮೀಕಿ ನಿಗಮದ ಹಗರಣದಲ್ಲೇ ಇದ್ದೀರಿ… ಈಗಾಗ್ಲೇ ಕೋವಿಡ್ ಸಾಮಗ್ರಿ ಖರೀದಿ ಪ್ರಕರಣ ಓಡುತ್ತಿದೆ’ ಕೊಟ್ರಿ ತಿವಿದ. ಕೊನೆಗೆ ತಿಂಗಳೇಶನೇ ವಿವರಿಸಿದ:</p><p>‘ಕೈ ಪಕ್ಷದ ಬಂಡೆಯಣ್ಣ ಕಾಲ್ಫಾರ್ ಮಾಡಿದ್ದಾರೆ: ಖಾಲಿ ಇರುವ ಮೂರು ಶಾಸಕ ಸ್ಥಾನಗಳನ್ನು ಭರ್ತಿ ಮಾಡಲು ಗೆಲ್ಲುವ ಅಭ್ಯರ್ಥಿ ಗಳಿಂದ ಜಾತಕಗಳನ್ನು ಆಹ್ವಾನಿಸಲಾಗಿದೆ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>