ನವೋದ್ಯಮಗಳ ಪ್ರತಿನಿಧಿಗಳ ಜೊತೆ ಮಂಗಳವಾರ ಆನ್ಲೈನ್ ಮೂಲಕ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಜೀವ್, ‘ಎಸ್ವಿಬಿ ದಿವಾಳಿಯಾಗಿರುವುದರಿಂದ ತೊಂದರೆಗೆ ಸಿಲುಕಿರುವ ನವೋದ್ಯಮಗಳ ಬಗ್ಗೆ ಹಣಕಾಸು ಸಚಿವಾಲಯದ ಜೊತೆ ಚರ್ಚಿಸಲಾಗುವುದು. ಅವುಗಳು ತಕ್ಷಣಕ್ಕೆ ಎದುರಿಸುತ್ತಿರುವ ನಗದು ಲಭ್ಯತೆಯ ಸಮಸ್ಯೆಯನ್ನು ಬಗೆಹರಿಸುವ ವಿಚಾರವಾಗಿ ಮಾತುಕತೆ ನಡೆಸುವೆ’ ಎಂದಿದ್ದಾರೆ.