ಸಂಡೂರು ಉಪ ಚುನಾವಣೆ: ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದೇ ಕುತೂಹಲ
ಸಂಡೂರು ಉಪ ಚುನಾವಣೆಗೆ ಮಹೂರ್ತ ನಿಗದಿ: ಬಿಜೆಪಿ, ಕಾಂಗ್ರೆಸ್ ಜಿದ್ದಾಜಿದ್ದಿ
ರಾಮು ಅರಕೇರಿ
Published : 16 ಅಕ್ಟೋಬರ್ 2024, 6:05 IST
Last Updated : 16 ಅಕ್ಟೋಬರ್ 2024, 6:05 IST
ಫಾಲೋ ಮಾಡಿ
Comments
ಚುನಾವಣೆಗೆ ಸಿದ್ಧರಾಗಿದ್ದೇವೆ. ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಹಲವಾರು ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ. ಎಲ್ಲವನ್ನೂ ಪರಾಮರ್ಶೆ ಮಾಡಲಿರುವ ಪಕ್ಷ ಸೂಕ್ತವಾದವರನ್ನು ಆಯ್ಕೆ ಮಾಡಲಿದೆ.
ಬಿ.ಕೆ ಸುಂದರ್, ಬಳ್ಳಾರಿ ಬಿಜೆಪಿ ವಕ್ತಾರ
ಅಭ್ಯರ್ಥಿ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಜೆಡಿಎಸ್ಗೆ ಸಿಕ್ಕರೂ ಸರಿ ಬಿಜೆಪಿಗೆ ಸಿಕ್ಕರೂ ಸರಿಯೇ. ನಾವು ಕೆಲಸ ಮಾಡುತ್ತೇವೆ. ಕ್ಷೇತ್ರ ಜೆಡಿಎಸ್ಗೆ ಸಿಕ್ಕರೆ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಪಕ್ಷಕ್ಕೆ ತಿಳಿಸಿದ್ದೇನೆ. ಸೋಮಪ್ಪ ಅವರೂ ಆಕಾಂಕ್ಷಿಯಾಗಿದ್ದಾರೆ.
ಮೀನಹಳ್ಳಿ ತಾಯಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
ತುಕಾರಾಂ ಕುಟುಂಬದವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಸಂಡೂರಿನ ಕಾರ್ಯಕ್ರಮದಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ನ್ಯಾಯ ಗೆಲ್ಲಿಸಬೇಕು ಸುಳ್ಳು ಕುತುಂತ್ರಗಳನ್ನು ಸೋಲಿಸಬೇಕು. ಉಪ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ.