ಸೋಮವಾರ, 21 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲನಗರ: ನರೇಗಾ ಅನುದಾನ ಬಳಸಿ ಸುಸಜ್ಜಿತ ಚಿತಾಗಾರಗಳ ನಿರ್ಮಾಣ

Published : 21 ಅಕ್ಟೋಬರ್ 2024, 8:02 IST
Last Updated : 21 ಅಕ್ಟೋಬರ್ 2024, 8:02 IST
ಫಾಲೋ ಮಾಡಿ
Comments
ತಾಲ್ಲೂಕಿನಾದ್ಯಂತ 16 ಸುಸಜ್ಜಿತವಾದ ಚಿತಾಗಾರಗಳನ್ನು ನಿರ್ಮಿಸಲಾಗಿದೆ. ಅಂದಾಜು ₹80ರಿಂದ ₹90 ಲಕ್ಷದವರೆಗೆ ಖರ್ಚಾಗಿರುತ್ತದೆ. ಸುಮಾರು ವರ್ಷಗಳಿಂದ ಬಡವರಿಗೆ ಶವಸಂಸ್ಕಾರ ಮಾಡಲು ಬಹಳ ತೊಂದರೆಯಾಗುತ್ತಿತ್ತು. ಅನೇಕ ಅರ್ಜಿಗಳು ಬಂದಿದ್ದವು ಮತ್ತು ಎಲ್ಲ ಗ್ರಾಮಗಳಲ್ಲಿ ಚಿತಾಗಾರಗಳ ನಿರ್ಮಾಣದ ಅತಿ ಜರೂರಿ ಇತ್ತು. ಆದ್ದರಿಂದ ಸರ್ಕಾರದ ಅನುಕೂಲ ಕೂಡ ಇತ್ತು. ಹೀಗಾಗಿ ಚಿತಾಗಾರ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಬಡವರ ಹೆಸರಿನಲ್ಲಿ ಎಲ್ಲರಿಗೂ ಅನುಕೂಲವಾಗಿದೆ.
ಮಾಣಿಕರಾವ ಪಾಟೀಲ ತಾಲ್ಲೂಕು ಪಂಚಾಯಿತಿ ಇಒ
ಅನೇಕ ವರ್ಷಗಳಿಂದ ನಾಲ್ಕೈದು ಬಡಾವಣೆಯ ಜನರಿಗೆ ವಿಶೆಷವಾಗಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಜನರಿಗೂ ಸ್ಮಶಾನಭೂಮಿಯ ಸಮಸ್ಯೆಯು ಬಹಳ ದಿನಗಳಿಂದ ಕಾಡುತ್ತಿತ್ತು. ಆದರೆ ಸರ್ಕಾರದ ಆದೇಶದ ಮೇರೆಗೆ ತಾಲ್ಲೂಕು ಆಡಳಿತದಿಂದ ಈ ರೀತಿಯ ಸುಸಜ್ಜಿತವಾದ ಚಿತಾಗಾರಗಳನ್ನು ಮಾಡಿಕೊಟ್ಟಿದ್ದರಿಂದ ಶವ ಸಂಸ್ಕಾರಕ್ಕೆ ಅನುಕೂಲವಾಗಿದೆ. ಗೋವಿಂದರಾವ ತಾಂದಳೆ ತಾಲ್ಲೂಕು ಘಟಕದ ಅಧ್ಯಕ್ಷ ದಲಿತ ಸಂಘರ್ಷ ಸಮಿತಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಜನರಿಗೆ ಸಹಾಯವಾಗಲೆಂದು ಸರ್ಕಾರ ಮಾಡಿರುವುದರಿಂದ ಸ್ಥಳಗಳ ಸಮಸ್ಯೆಗಳಿರದ ಕಡೆಗಳಲ್ಲಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಇನ್ನೂ ಕಾರ್ಯ ಪ್ರಗತಿಯಲ್ಲಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ಎಲ್ಲೇಲ್ಲಿ ಆಗಬೇಕಾಗಿದೆಯೋ ಅಲ್ಲಿ ಪಿಡಿಒಗಳು ಮಾಡುವಂತೆ ತಿಳಿಸುತ್ತೇವೆ.
ಹನಮಂತರಾಯ ಕೌಟಗೆ ಸಹಾಯಕ ನಿರ್ದೇಶಕ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT