<p><strong>ಕೊಪ್ಪ</strong>: 'ಯುವಜನರು ಅನಗತ್, ಅಸುರಕ್ಷಿತ ಆನ್ಲೈನ್ ಅಪ್ಲಿಕೇಷನ್ ಬಳಕೆಯಿಂದ ಸಮಯ, ಹಣ ಕಳೆದುಕೊಳ್ಳುತ್ತಿರುವುದರ ಜತೆಗೆ, ಕಾನೂನಿನಡಿ ಶಿಕ್ಷೆಗೂ ಒಳಗಾಗುತ್ತಿದ್ದಾರೆ' ಕೊಪ್ಪ ಉಪ ವಿಭಾಗದ ಡಿವೈಎಸ್ಪಿ ಎಂ.ಜೆ.ಬಾಲಾಜಿ ಸಿಂಗ್ ಹೇಳಿದರು.</p>.<p>ಬಾಳಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈಚೆಗೆ ನಡೆದ ‘ಸಾರ್ವಜನಿಕ ಜೀವನದಲ್ಲಿ ಕಾನೂನಿನ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನ್ಲೈನ್ ವ್ಯವಹಾರಗಳು ಮತ್ತು ಲಿಂಕ್ಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ, ಮಾಡಿ ಪುಸ್ತಕದ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಬೇಕು’ ಎಂದರು.</p>.<p>'ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಸುರಕ್ಷತೆ ಇರುತ್ತದೆ. ಸಂಚಾರಿ ನಿಯಮಗಳು ಸುಗಮ ಸಂಚಾರಕ್ಕೆ ದಾರಿಯೇ ವಿನಹ ಅದು ನಿರ್ಬಂಧವಲ್ಲ’ ಎಂದರು.</p>.<p>ಪ್ರಾಂಶುಪಾಲ ಎಸ್.ಅನಂತ ಅವರು ಮಾತನಾಡಿ, ‘ಆನ್ಲೈನ್ ಶಾಪಿಂಗ್ನಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಕಾನೂನಿನ ಅರಿವಿನಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ' ಎಂದರು.</p>.<p>ಐಕ್ಯೂಎಸಿ ಸಂಚಾಲಕ ನಿರಂಜನ್, ಉಪನ್ಯಾಸಕ ಹರೀಶ ಎಂ.ಆರ್., ಪ್ರಶಾಂತ ಕುಮಾರ್ ಕೆ.ಎಸ್., ಹೆಡ್ ಕಾನ್ಸ್ಟೆಬಲ್ ಸಾದಿಕ್ ಭಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ</strong>: 'ಯುವಜನರು ಅನಗತ್, ಅಸುರಕ್ಷಿತ ಆನ್ಲೈನ್ ಅಪ್ಲಿಕೇಷನ್ ಬಳಕೆಯಿಂದ ಸಮಯ, ಹಣ ಕಳೆದುಕೊಳ್ಳುತ್ತಿರುವುದರ ಜತೆಗೆ, ಕಾನೂನಿನಡಿ ಶಿಕ್ಷೆಗೂ ಒಳಗಾಗುತ್ತಿದ್ದಾರೆ' ಕೊಪ್ಪ ಉಪ ವಿಭಾಗದ ಡಿವೈಎಸ್ಪಿ ಎಂ.ಜೆ.ಬಾಲಾಜಿ ಸಿಂಗ್ ಹೇಳಿದರು.</p>.<p>ಬಾಳಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈಚೆಗೆ ನಡೆದ ‘ಸಾರ್ವಜನಿಕ ಜೀವನದಲ್ಲಿ ಕಾನೂನಿನ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಆನ್ಲೈನ್ ವ್ಯವಹಾರಗಳು ಮತ್ತು ಲಿಂಕ್ಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ, ಮಾಡಿ ಪುಸ್ತಕದ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಬೇಕು’ ಎಂದರು.</p>.<p>'ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಸುರಕ್ಷತೆ ಇರುತ್ತದೆ. ಸಂಚಾರಿ ನಿಯಮಗಳು ಸುಗಮ ಸಂಚಾರಕ್ಕೆ ದಾರಿಯೇ ವಿನಹ ಅದು ನಿರ್ಬಂಧವಲ್ಲ’ ಎಂದರು.</p>.<p>ಪ್ರಾಂಶುಪಾಲ ಎಸ್.ಅನಂತ ಅವರು ಮಾತನಾಡಿ, ‘ಆನ್ಲೈನ್ ಶಾಪಿಂಗ್ನಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಕಾನೂನಿನ ಅರಿವಿನಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ' ಎಂದರು.</p>.<p>ಐಕ್ಯೂಎಸಿ ಸಂಚಾಲಕ ನಿರಂಜನ್, ಉಪನ್ಯಾಸಕ ಹರೀಶ ಎಂ.ಆರ್., ಪ್ರಶಾಂತ ಕುಮಾರ್ ಕೆ.ಎಸ್., ಹೆಡ್ ಕಾನ್ಸ್ಟೆಬಲ್ ಸಾದಿಕ್ ಭಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>