ದಾಳಿಂಬೆ ಬೆಳೆಗೆ ಸಂಬಂಧಿಸಿದಂತೆ ವಿಜ್ಞಾನಿಗಳನ್ನು ಬಳಸಿಕೊಂಡು ಬೆಳೆ ನಿರ್ವಹಣಾ ವೆಚ್ಚ ಕಡಿಮೆ ಮಾಡುವುದು, ಬೆಳೆಯಲ್ಲಿ ಅತ್ಯಾಧುನಿಕ ಮಾದರಿ ಅಳವಡಿಕೆ, ಬೆಳೆಗೆ ನೀಡುವ ಶೇ 40ರಷ್ಟು ಸಬ್ಸಿಡಿ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸುವುದು, ಬೆಳೆಗೆ ಕಾಡುವ ಕಪ್ಪುಚುಕ್ಕೆ, ಸೀಳುರೋಗ ಒಳಗೊಂಡಂತೆ ಎಲ್ಲಾ ರೀತಿಯ ರೋಗಗಳನ್ನು ನಿಯಂತ್ರಿಸಲು ತಜ್ಞರ ಮೂಲಕ ರೈತರಿಗೆ ಮಾಹಿತಿ ನೀಡುವುದು ಯೋಜನೆಯ ಆದ್ಯತೆಗಳಲ್ಲಿ ಪ್ರಮುಖವಾದವು ಎಂದು ಮಾಹಿತಿ ನೀಡಿದ್ದಾರೆ.