ಹಾನಗಲ್ನ ಕರಂಸಾಬ್ ಅವರ ಮಾವಿನ ಮಂಡಿಯಲ್ಲಿ ರೈತರು ಮಾರಾಟಕ್ಕೆ ತಂದಿರುವ ಆಪೂಸ್ ತಳಿಯ ಮಾವು
ಹಾನಗಲ್ ಮಾವಿನ ಮಂಡಿಗಳಲ್ಲಿ ಈ ದಿನಗಳಲ್ಲಿ ಮಾವಿನ ವ್ಯಾಪಾರ ಜೋರಾಗಿದೆ
‘ಸಸ್ಯ ಸಂರಕ್ಷಣಾ ಕ್ರಮ ಅಗತ್ಯ’
ಈ ಬಾರಿ ಶೇ 30 ರಷ್ಟು ಮಾತ್ರ ಮಾವು ಇಳುವರಿ ಇದೆ. ಎರಡು ವರ್ಷದ ಹಿಂದೆ ರಾಮತೀರ್ಥ ಹೊಸಕೊಪ್ಪ ಗುಡಗುಡಿ ಬೈಚವಳ್ಳಿ ಚೀರನಹಳ್ಳಿ ಮತ್ತಿತರ ಗ್ರಾಮ ಭಾಗದಲ್ಲಿ ಮಾವು ಬೆಳೆಗೆ ವಿಪರೀತ ಅಂಟು ರೋಗ ಕಾಣಿಸಿಕೊಂಡಿತ್ತು. ಗಿಡದಲ್ಲಿ ಒಂದೂ ಕಾಯಿ ಉಳಿದಿರಲಿಲ್ಲ. ಆಗಾಗ್ಗೆ ಎದುರಾಗುವ ಹವಾಮಾನ ವೈಪರೀತ್ಯದ ಜೊತೆಯಲ್ಲಿ ಇದಕ್ಕೆಲ್ಲ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿರುವುದು ಕಾರಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ. ಏಪ್ರಿಲ್ನಿಂದ ಮೇ ವರೆಗೆ ಮಾವು ಅವಧಿ ಮುಗಿಯುತ್ತದೆ. ಆ ಬಳಿಕ ಮಾವಿನ ಗಿಡಗಳ ಕಾಳಜಿ ಮುಖ್ಯ. ಜುಲೈ ಸಮಯದಲ್ಲಿ ಅನಗತ್ಯ ರೆಂಬೆ -ಕೊಂಬೆ ಕತ್ತರಿಸಬೇಕು. ಜನವರಿ ವರೆಗೆ ಮೂರ್ನಾಲ್ಕು ಬಾರಿ ಉತ್ತಮವಾಗಿ ತೋಟಗಳಿಗೆ ನೀರು ಹಾಯಿಸಬೇಕು. ಅಂಟು ರೋಗ ಬಾಧಿಸದಂತೆ ಔಷಧ ಸಿಂಪಡಣೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ ಎನ್ನುತ್ತಾರೆ ಅವರು.