<p><strong>ಹಾವೇರಿ</strong>: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ತೆಗ್ಗು–ಗುಂಡಿಗಳು ಹೆಚ್ಚು ಬಿದ್ದಿದ್ದು, ಇಂಥ ರಸ್ತೆಯಲ್ಲಿ ಸಂಚರಿಸಲು ಜನರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ರಸ್ತೆಗಳು ಹಾಳಾಗಿರುವುದಷ್ಟೇ ಅಲ್ಲದೇ, ಕಾಲುವೆಗಳಲ್ಲಿ ನೀರಿನ ಜೊತೆ ಯಲ್ಲಿ ತ್ಯಾಜ್ಯವೆಲ್ಲ ಹರಿದು ಕೆಳಸೇತುವೆ ಗಳಲ್ಲಿ ಜಮೆ ಆಗುತ್ತಿದೆ. ಇದದಿಂದ ಕೆಳಸೇತುವೆಗಳಲ್ಲಿ ತ್ಯಾಜ್ಯ ನಿಂತು ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ.</p><p>ಹಾವೇರಿಯಿಂದ ಭೂ–ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು–ಗುಂಡಿ ಗಳು ಹೆಚ್ಚಾಗಿವೆ. ಗ್ರಾಮಸ್ಥರ ವಾಹನ ಗಳು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದೇ ಭೂ ವೀರಾಪುರದಲ್ಲಿ ವಸತಿ ಶಾಲೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು ಇವೆ. ಇಲ್ಲಿಯ ಮಕ್ಕಳು ಹಾಗೂ ಶಿಕ್ಷಕರು, ಹಾವೇರಿಗೆ ಬಂದು ಹೋಗಲು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆ ಹಾಳಾಗಿ ದ್ದರಿಂದ, ಅವರೆಲ್ಲರೂ ಪರದಾಡು ತ್ತಿದ್ದಾರೆ.</p><p>‘ಭೂ ವೀರಾಪುರದ ರಸ್ತೆ ಹಾಳಾಗಿ ಹಲವು ವರ್ಷವಾಗಿದೆ. ಮಳೆಗಾಲ ದಲ್ಲಂತೂ ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡಿ ಅನುಕೂಲ ಮಾಡಿಕೊಡ ಬೇಕು’ ಎಂದು ಗ್ರಾಮದ ಪ್ರಕಾಶ ಒತ್ತಾಯಿಸಿದರು.</p><p>ಹಾವೇರಿ ತಾಲ್ಲೂಕಿನ ವರದ ಹಳ್ಳಿಯ ರಸ್ತೆಯೂ ಸಂಪೂರ್ಣ ಹಾಳಾ ಗಿದ್ದು, ಅಲ್ಲಲ್ಲಿ ನೀರು ನಿಂತುಕೊಂಡು ಜನರ ಸಂಚಾರಕ್ಕೆ ತೊಂದರೆ ಉಂಟಾ ಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಡಾಂಬರ್ ರಸ್ತೆ ಮಾಡಲಾಗಿದೆ. ಈಗ, ಡಾಂಬರ್ ಕಿತ್ತು ಹೋಗಿದೆ.</p><p>ನಾಗೇಂದ್ರನಮಟ್ಟಿ ಕೆಳಸೇತುವೆ ಫಜೀತಿ: ನಗರದ ಚರಂಡಿ ಹಾಗೂ ಕಾಲುವೆಗಳ ಮೂಲಕ ಸಾಗುವ ತ್ಯಾಜ್ಯ, ನಾಗೇಂದ್ರನಮಟ್ಟಿಯ ಕೆಳಸೇತುವೆಯಲ್ಲಿ ಸೇರುತ್ತಿದೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ದುರ್ನಾತದಿಂದ ಮೂಗು ಮುಚ್ಚಿ ಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p><p>ನಗರದ ರೈಲು ನಿಲ್ದಾಣಕ್ಕೆ ಹೊಂದಿ ಕೊಂಡಿರುವ ನಾಗೇಂದ್ರನ ಮಟ್ಟಿಗೆ ಸಂಪರ್ಕ ಕಲ್ಪಿಸಲು ಸಿಂದಗಿ ಮಠದ ಬಳಿ ರೈಲ್ವೆ ಹಳಿಗೆ ಕೆಳ ಸೇತುವೆ ನಿರ್ಮಿಸಲಾಗಿದೆ. ಇದೇ ಪ್ರದೇಶದಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯವೆಲ್ಲವೂ ಜಮೆ ಆಗುತ್ತಿದ್ದು, ಅದೆಲ್ಲವೂ ಕೆಳ ಸೇತುವೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.</p><p>ಮಳೆಗಾಲದಲ್ಲಂತೂ ಕೆಳ ಸೇತುವೆ ಸಮಸ್ಯೆ ಹೆಚ್ಚಾಗಿದೆ. ಮಳೆ ಬಂದ ಸಂದರ್ಭದಲ್ಲಿ ನೀರಿನ ಜೊತೆಯಲ್ಲಿ ಪ್ಲಾಸ್ಟಿಕ್, ಹಾಳಾದ ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ತ್ಯಾಜ್ಯ ಬರುತ್ತಿದೆ. ಇದೆಲ್ಲವೂ ಕೆಳ ಸೇತುವೆಯ ಕಾಲುವೆ ಮೂಲಕ ಹರಿದು ಹೋಗುತ್ತಿದೆ. ಕೆಳ ಸೇತುವೆ ಬಳಿ ಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದಿದ್ದರಿಂದ, ತ್ಯಾಜ್ಯವೆಲ್ಲವೂ ಸುಲಭವಾಗಿ ಕೆಳಸೇತುವೆಗೆ ನುಗ್ಗುತ್ತಿದೆ. ಇದರ ಜೊತೆಯಲ್ಲಿ ಹಾವು, ಚೇಳುಗಳೂ ಸೇರಿಕೊಳ್ಳುತ್ತಿವೆ.</p><p>ಕೆಳ ಸೇತುವೆಗೆ ಹೊಂದಿಕೊಂಡು ಕೆರೆ ಇದ್ದು, ಹೂಳು ತುಂಬಿಕೊಂಡು ಹಲವು ವರ್ಷವೇ ಆಗಿದೆ. ಈ ಪ್ರದೇಶ, ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ರೋಗಗಳಿವೆ ಆಹ್ವಾನ ನೀಡುವಂತಿದೆ.</p><p>ನಾಗೇಂದ್ರನಮಟ್ಟಿಯ ಶಾಲೆ ಮಕ್ಕಳು, ಉದ್ಯೋಗಿಗಳು, ಕೂಲಿ ಕೆಲಸ ಗಾರರು ಇದೇ ಕೆಳಸೇತುವೆ ಮೂಲಕ ನಿತ್ಯವೂ ನಗರಕ್ಕೆ ಬಂದು ಹೋಗು ತ್ತಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಕೆಳ ಸೇತುವೆ ದಾಟುತ್ತಿದ್ದಾರೆ. ಇತ್ತೀಚೆಗೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ, ಕೆಳ ಸೇತುವೆಯಲ್ಲಿ ತ್ಯಾಜ್ಯವೇ ಹೆಚ್ಚಿದ್ದುದ್ದು ಕಂಡುಬಂತು.</p><p>‘ಕೆಳ ಸೇತುವೆ ನಿರ್ವಹಣೆ ಸರಿಯಿಲ್ಲ. ಇದು ಹಲವು ವರ್ಷಗಳ ಸಮಸ್ಯೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ನಾಗೇಂದ್ರ ನಮಟ್ಟಿಯ ರಜಾಕ ಅಹ್ಮದ್ ಹೇಳಿದರು.</p><p>ಸ್ಥಳೀಯ ನಿವಾಸಿ ಲಕ್ಷ್ಮಣ, ‘ಬಡವರು ವಾಸಿಸುವ ಸ್ಥಳವಿದೆ. ಕೆಳ ಸೇತುವೆ ದಾಟಲು ವಿದ್ಯಾರ್ಥಿಗಳು ಕಷ್ಟಪಡು ತ್ತಿದ್ದಾರೆ. ತ್ಯಾಜ್ಯದ ಜೊತೆಯಲ್ಲಿಯೇ ವಿಷಕಾರಿ ಕ್ರಿಮಿ–ಕೀಟಗಳು ಓಡಾಡು ತ್ತಿವೆ. ಇದರಿಂದ ಮಕ್ಕಳ ಜೀವಕ್ಕೂ ಅಪಾಯ ಉಂಟಾಗುವ ಭಯವಿದೆ’ ಎಂದರು.</p>.<h2><strong>ರಸ್ತೆ ತುಂಬ ಗುಂಡಿ</strong></h2>.<p>ಶಿಗ್ಗಾವಿ: ಕಳೆದ 15 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ನೀರಿನಿಂದಾಗಿ ತಾಲ್ಲೂಕಿನ ಬಾಡ ಮತ್ತು ಹುಣಸಿಕಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಮಳೆ ನೀರಿನಿಂದ ಹದಗೆಟ್ಟು ಕೆಸರಾಗಿ ನಿತ್ಯ ಸಂಚರಿಸುವುದು ಕಷ್ಟಕರವಾಗಿದೆ.</p><p>ಹುಣಸಿಕಟ್ಟ ಗ್ರಾಮದಿಂದ ಬಾಡ ಗ್ರಾಮಕ್ಕೆ ಬರುವ ಪ್ರಮುಖ ರಸ್ತೆಯಾ ಗಿದ್ದು, ಮಳೆಗಾಲ ಬಂದರೆ ಸಾಕು ರಸ್ತೆ ಯಲ್ಲಿ ನೀರು ಹರಿದು ಇಡೀ ರಸ್ತೆಯಲ್ಲ ಕೆಸರುಮಯವಾಗಿ ಪಾದಚಾರಿಗಳು, ವಾಹನಗಳು ಓಡಾಡದಂತಾಗುತ್ತದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿ ಗಳು ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ.</p><p>ವಾಹನಗಳಿಲ್ಲದೆ ಸಂಚಾರ ಸ್ಥಗಿತವಾಗುತ್ತಿವೆ. ಹೀಗಾಗಿ ರೈತರು, ವ್ಯಾಪಾರಸ್ಥರು ಸಹ ಸಂಚರಿಸ ದಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಈ ಕಡೆ ಗಮನ ಹರಿಸಿ ರಸ್ತೆ ಡಾಂಬರೀಕರಣ ಮಾಡಬೇಕು. ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರರಾದ ಜಗದೀಶ ಸಿದ್ದಣ್ಣ ವರ, ಮಾಲತೇಶ ಕಮ್ಮಾರ, ಅಶೋಕ ಸಿದ್ದಣ್ಣವರ, ಶೇಖಪ್ಪ ಹಾದಿಮನಿ, ರಮೇಶ ಕಲಿವಾಳ ಆಗ್ರಹಿಸಿದ್ದಾರೆ.</p><p>ಮರ ಬಿದ್ದು ಕಿರಿಕಿರಿ: ತಾಲ್ಲೂಕಿನ ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ರಸ್ತೆ ನಡುವೆ ದೊಡ್ಡಹಳ್ಳದ ಹತ್ತಿರದಲ್ಲಿ ಮರ ಬಿದ್ದು 3 ತಾಸು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ಹೆಸ್ಕಾಂ ಮತ್ತು ಸಾರ್ವಜನಿಕರು, ರಸ್ತೆ ಪಕ್ಕದ ರೈತರು ಸೇರಿ ಮರವನ್ನು ತೆರವುಗೊಳಿಸುವಲ್ಲಿ ನೆರವಾದರು.</p><p>ನಂತರ ರಸ್ತೆ ಸಂಚಾರ ಸುಗಮ ಗೊಂಡಿತು. ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ವಾಹನಗಳು, ಪಾದಚಾರಿ ಗಳು, ದ್ವಿಚಕ್ರ ವಾಹನಗಳು ಬಂಕಾಪುರ ಮಾರ್ಗವಾಗಿ ಮತ್ತು ದುರ್ಗಾದೇವಿ ದೇವಸ್ಥಾನದ ರಸ್ತೆ ಮಾರ್ಗವಾಗಿ ಸುತ್ತುವರೆದು ಹೋಗುವಂತೆ ಆಯಿತು.</p>.<h2><strong>ಶಿಗ್ಗಾವಿ: ಹಾಳಾದ ರಸ್ತೆ</strong></h2>.<p>ಶಿಗ್ಗಾವಿ: ಪಟ್ಟಣದ ಪ್ರಮುಖ ರಸ್ತೆಯಾದ ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಮುಂದಿನ ರಸ್ತೆ ಸಂಪೂರ್ಣ ತೆಗ್ಗುಗುಂಡಿಗಳು ಬಿದ್ದು, ವಾಹನ ಸವಾರರು ಸಂಚಾರಕ್ಕಾಗಿ ಪರ ದಾಡುವಂತಾಗಿದೆ. ಸಂಬಂಧಿಸಿದ ಅಧಿ ಕಾರಿಗಳು ಈ ಕಡೆ ಗಮನ ಹರಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p>ಪಟ್ಟಣದ ಪ್ರವಾಸಿ ಮಂದಿರದಿಂದ ಕಿತ್ತೂರ ಚನ್ನಮ್ಮ ವೃತ್ತದವರೆಗೆ ಸಾಕಷ್ಟು ಗುಂಡಿಗಳು ಬಿದ್ದು, ಅವುಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ಅದರಲ್ಲಿ ದ್ವಿಚಕ್ರ ವಾಹನ ಸವಾರರು ಹೋಗಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಅಲ್ಲದೆ ಇದೇ ರಸ್ತೆಯಲ್ಲಿ ಮಾಮ್ಲೆದೇಸಾಯಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಇದೆ. </p><p>ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಗಳಿವೆ. ಹೆಸ್ಕಾಂ ಕಚೇರಿ, ತಾಲ್ಲೂಕು ಪಂಚಾಯ್ತಿ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಿವೆ. ನಿತ್ಯ ಮಕ್ಕಳು ಶಾಲಾ ಕಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದೆ. ಅಲ್ಲದೆ ಶಿಗ್ಗಾವಿಯಿಂದ ಸವಣೂರಿಗೆ ಹೋಗುವ ಮುಖ್ಯ ರಸ್ತೆಯಾಗಿದೆ. ಸಾರಿಗೆ ಸಂಸ್ಥೆ ಬಸ್ಗಳು ಸಂಚರಿಸಲು ಕಿರಿಕಿರಿಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಕ್ಷಣ ರಸ್ತೆ ದುರಸ್ಥಿ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.</p>.<p><em><strong>ಪೂರಕ ಮಾಹಿತಿ: ಬಸವರಾಜ ಒಡೇರಹಳ್ಳಿ, ಎಂ.ವಿ.ಗಾಡಾದ, ಪ್ರಮೀಳಾ ಹುನಗುಂದ</strong></em></p>.<p>ಬ್ಯಾಡಗಿ: ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಹರಿಯುವ ಶೌಚಾಯದ ನೀರು, ಮಳೆ ಬಂದರೆ ಕೆರೆಯಂತಾಗುವ ರಸ್ತೆ, ಸದಾ ಸಂಚಾರ ಕಿರಿಕಿರಿ, ಜೀವ ಕೈಯಲ್ಲಿ ಹಿಡಿದು ಓಡಾಡುವ ಪಾದಚಾರಿಗಳು. ಆಗಾಗ ಉರುಳಿ ಬೀಳುವ ವಾಹನಗಳು...</p><p>ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯ ದುಸ್ಥಿತಿ ಇದು. ಕಳೆದ 8 ವರ್ಷಗಳ ಹಿಂದೆ ಮುಖ್ಯರಸ್ತೆ ವಿಸ್ತರಣೆಗೆ ಮುಂದಾಗಿದ್ದ ತಾಲ್ಲೂಕು ಆಡಳಿತ, ಚರಂಡಿಗಳನ್ನು ತೆರವುಗೊಳಿಸಿತ್ತು. ಈ ಚರಂಡಿ ಇನ್ನು ದುರಸ್ತಿ ಕಂಡಿಲ್ಲ. ಮುಖ್ಯ ರಸ್ತೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಭೂ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆ ಇನ್ನಷ್ಟು ಜಟಿಲಗೊಂಡಿದೆ. ಈ ಮುಖ್ಯ ರಸ್ತೆಯ ವಿಸ್ತರಣೆ ಮರೀಚಿಕೆಯಾಗುತ್ತಿದೆ. ಜೊತೆಗೆ, ಹಲವು ಸಮಸ್ಯೆಗಳು ಉದ್ಭವಿಸುವಂತೆ ಮಾಡಿದೆ.</p><p>ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗಿದೆ. ಶತಮಾನದ ಹಿಂದೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಟಿಪ್ಪರ್ಗಳ ಓಡಾಟದಿಂದ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದರೆ ರಸ್ತೆ ಕೆರೆಯಂತಾಗುತ್ತದೆ. ವರ್ಷದ ಹಿಂದೆ ಕಲ್ಲಿನ ಪುಡಿ ಹಾಕಿ ದುರಸ್ತಿ ಮಾಡಿದ್ದ ರಸ್ತೆ ಈಗ ಹಾಳಾಗಿದೆ. ಸ್ಥಳೀಯ ನಿವಾಸಿಗಳ ಶೌಚಾಲಯದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಪಾದಚಾರಿ ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಯ ಮೇಲೆ ಹೋಗುವುದು ದುಸ್ತರವಾಗಿದೆ. ಆದಷ್ಟು ಬೇಗ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p>ಸದಾ ಸಂಚಾರ ದಟ್ಟಣೆ: ಎದುರು ಬದುರಾಗಿ ವಾಹನಗಳು ಬಂದರೆ ಸದಾ ಸಂಚಾರ ಕಿರಿಕಿರಿ ಆಗುತ್ತಿದೆ. ಡಿಸೆಂಬರ್ನಿಂದ ಐದಾರು ತಿಂಗಳವರೆಗೆ ಮೆಣಸಿನಕಾಯಿ ಹೊತ್ತುಕೊಂಡು ಬರುವ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಹರ ಸಾಹಸ ಪಡಬೇಕಾಗಿದೆ. ಸಂಚಾರ ದಟ್ಟಣೆಯಿಂದ ವಾಹನಗಳು ನಿರ್ಗಮಿಸಲು ಗಂಟೆಗಟ್ಟಲೆ ಸಮಯವನ್ನು ತೆಗೆದುಕೊಳ್ಳಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಸ್ತೆಯಲ್ಲಿರುವ ತಗ್ಗು ಮುಚ್ಚಿ, ತಾತ್ಕಾಲಿಕವಾಗಿ ಚರಂಡಿ ನಿರ್ಮಿಸಿದರೆ ಜನತೆ ನಿರಾತಂಕವಾಗಿರಬಹುದು. </p><p>‘ಮುಖ್ಯ ರಸ್ತೆಯ ಭೂ ಮಾಲೀಕರ ಕಟ್ಟಡಗಳಿಗೆ ಹಾನಿಯಾಗದಂತೆ, ಚರಂಡಿ ನಿರ್ಮಾಣ, ರಸ್ತೆ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೋರ್ಟ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಮುಂದಾಗಬೇಕು.</p><p>ತುಮ್ಮಿನಕಟ್ಟಿ: ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಾಯ್ತೆರೆದ ತೆಗ್ಗು, ಗುಂಡಿಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ಇದಲ್ಲದೆ ರಸ್ತೆ ಪಕ್ಕದ ಕಾಲುವೆಯಿಂದ ಹೂಳು ತೆಗೆದ ಮಣ್ಣನ್ನು ಡಾಂಬರ್ ರಸ್ತೆ ಪಕ್ಕ ಹಾಕಲಾಗಿದೆ. ಇದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಂಚರಿಸಲು ಪರಿತಪಿಸುವಂತಾಗಿದೆ. ರಾತ್ರಿ ವೇಳೆ ಭಾರಿ ಗಾತ್ರದ ವಾಹನಗಳು ಎದುರಾದರೆ ಸಣ್ಣಪುಟ್ಟ ವಾಹನಗಳ ಸವಾರರು ಜೀವ ಭಯದಲ್ಲೇ ವಾಹನ ಚಾಲನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.</p><p>ಇದು ತುಮ್ಮಿನಕಟ್ಟಿಯಿಂದ ಕೂಸಗಟ್ಟಿಗೆ ಹೋಗುವ ರಸ್ತೆಯ ದುಸ್ಥಿತಿ. ಈ ರಸ್ತೆಯಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಹೀಗಾಗಿ, ಪ್ರಸ್ತುತ ರಸ್ತೆಯ ದುಸ್ಥಿತಿ ಕಂಡು ಇಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.</p><p>ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನಕ್ಕೆ ಬಂದು ಹೋಗುವ ಅಪಾರ ಪ್ರಮಾಣದ ಭಕ್ತರು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿನಿತ್ಯ ಇದೇ ಮಾರ್ಗವಾಗಿ ಹರಿಹರ, ದಾವಣಗೆರೆ, ರಟ್ಟೀಹಳ್ಳಿ, ಹಿರೇಕೆರೂರು, ಬೆಂಗಳೂರಿಗೆ ತೆರಳುತ್ತಾರೆ. ಸರ್ಕಾರಿ, ಖಾಸಗಿ ಹಾಗೂ ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.</p><p>ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆಯ ಈ ದುಸ್ಥಿತಿ ಕಂಡು ಕಾಣದಂತೆ ಜಾಣ ಕುರುಡು ತೋರುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಎಚ್ಚರಿಸಿದ್ದಾರೆ. ಜನರೇ ಹೋರಾಟದ ಹಾದಿ ತುಳಿದು ತಕ್ಕ ಪಾಠ ಕಲಿಸುವ ಅನಿವಾರ್ಯತೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂಬುದು ಸ್ಥಳೀಯ ರೈತರ ಆಗ್ರಹವಾಗಿದೆ</p><p>‘ಪ್ರತಿನಿತ್ಯ ಸಂಚಾರ ಸಂಕಷ್ಟ ಎದುರಿಸುವ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು, ನೋವನ್ನು ಅನುಭವಿಸಿದ ಘಟನೆಗಳು ಸಾಕಷ್ಟು ಸಂಭವಿಸಿವೆ. ಸವಾರರಿಗೆ ಎದುರಾಗುವ ಬಾರಿ ಗಾತ್ರದ ವಾಹನಗಳು ಬಂದಾಗ ಸ್ವಲ್ಪ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಸ್ಥಳೀಯ ರೈತ ಮುಖಂಡ ಪರಸಪ್ಪ ಜಾದವ್ ಅವರು.</p><p>ರಸ್ತೆಯ ಈ ದುಸ್ಥಿತಿಯಿಂದ ತುಮ್ಮಿನಕಟ್ಟಿಗೆ ಬರಬೇಕಾದ ಸರ್ಕಾರಿ ಬಸ್ಸುಗಳು ಬಾರದೇ, ಫತ್ತೇಪುರದ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗಿ, ಪುನಃ ಉಕ್ಕಡಗಾತ್ರಿಯಿಂದ ಹರಿಹರಕ್ಕೆ ತಲುಪುತ್ತವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.</p>.<div><blockquote>ಶಿಗ್ಗಾವಿ ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ನೀರು ನಿಂತು ತುಂಬಾ ತೊಂದರೆಯಾಗಿದೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ</blockquote><span class="attribution">ರವಿ ಕೋಣಪ್ಪನವರ, ಶಿಗ್ಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ತೆಗ್ಗು–ಗುಂಡಿಗಳು ಹೆಚ್ಚು ಬಿದ್ದಿದ್ದು, ಇಂಥ ರಸ್ತೆಯಲ್ಲಿ ಸಂಚರಿಸಲು ಜನರು ತೊಂದರೆ ಅನುಭವಿಸುತ್ತಿದ್ದಾರೆ.</p>.<p>ರಸ್ತೆಗಳು ಹಾಳಾಗಿರುವುದಷ್ಟೇ ಅಲ್ಲದೇ, ಕಾಲುವೆಗಳಲ್ಲಿ ನೀರಿನ ಜೊತೆ ಯಲ್ಲಿ ತ್ಯಾಜ್ಯವೆಲ್ಲ ಹರಿದು ಕೆಳಸೇತುವೆ ಗಳಲ್ಲಿ ಜಮೆ ಆಗುತ್ತಿದೆ. ಇದದಿಂದ ಕೆಳಸೇತುವೆಗಳಲ್ಲಿ ತ್ಯಾಜ್ಯ ನಿಂತು ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ.</p><p>ಹಾವೇರಿಯಿಂದ ಭೂ–ವೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು–ಗುಂಡಿ ಗಳು ಹೆಚ್ಚಾಗಿವೆ. ಗ್ರಾಮಸ್ಥರ ವಾಹನ ಗಳು ಹಾಗೂ ಬಸ್ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇದೇ ಭೂ ವೀರಾಪುರದಲ್ಲಿ ವಸತಿ ಶಾಲೆ ಹಾಗೂ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳು ಇವೆ. ಇಲ್ಲಿಯ ಮಕ್ಕಳು ಹಾಗೂ ಶಿಕ್ಷಕರು, ಹಾವೇರಿಗೆ ಬಂದು ಹೋಗಲು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆ ಹಾಳಾಗಿ ದ್ದರಿಂದ, ಅವರೆಲ್ಲರೂ ಪರದಾಡು ತ್ತಿದ್ದಾರೆ.</p><p>‘ಭೂ ವೀರಾಪುರದ ರಸ್ತೆ ಹಾಳಾಗಿ ಹಲವು ವರ್ಷವಾಗಿದೆ. ಮಳೆಗಾಲ ದಲ್ಲಂತೂ ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ರಸ್ತೆಯನ್ನು ದುರಸ್ತಿ ಮಾಡಿ ಅನುಕೂಲ ಮಾಡಿಕೊಡ ಬೇಕು’ ಎಂದು ಗ್ರಾಮದ ಪ್ರಕಾಶ ಒತ್ತಾಯಿಸಿದರು.</p><p>ಹಾವೇರಿ ತಾಲ್ಲೂಕಿನ ವರದ ಹಳ್ಳಿಯ ರಸ್ತೆಯೂ ಸಂಪೂರ್ಣ ಹಾಳಾ ಗಿದ್ದು, ಅಲ್ಲಲ್ಲಿ ನೀರು ನಿಂತುಕೊಂಡು ಜನರ ಸಂಚಾರಕ್ಕೆ ತೊಂದರೆ ಉಂಟಾ ಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿ ಕೊಂಡಿರುವ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಡಾಂಬರ್ ರಸ್ತೆ ಮಾಡಲಾಗಿದೆ. ಈಗ, ಡಾಂಬರ್ ಕಿತ್ತು ಹೋಗಿದೆ.</p><p>ನಾಗೇಂದ್ರನಮಟ್ಟಿ ಕೆಳಸೇತುವೆ ಫಜೀತಿ: ನಗರದ ಚರಂಡಿ ಹಾಗೂ ಕಾಲುವೆಗಳ ಮೂಲಕ ಸಾಗುವ ತ್ಯಾಜ್ಯ, ನಾಗೇಂದ್ರನಮಟ್ಟಿಯ ಕೆಳಸೇತುವೆಯಲ್ಲಿ ಸೇರುತ್ತಿದೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ದುರ್ನಾತದಿಂದ ಮೂಗು ಮುಚ್ಚಿ ಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p><p>ನಗರದ ರೈಲು ನಿಲ್ದಾಣಕ್ಕೆ ಹೊಂದಿ ಕೊಂಡಿರುವ ನಾಗೇಂದ್ರನ ಮಟ್ಟಿಗೆ ಸಂಪರ್ಕ ಕಲ್ಪಿಸಲು ಸಿಂದಗಿ ಮಠದ ಬಳಿ ರೈಲ್ವೆ ಹಳಿಗೆ ಕೆಳ ಸೇತುವೆ ನಿರ್ಮಿಸಲಾಗಿದೆ. ಇದೇ ಪ್ರದೇಶದಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯವೆಲ್ಲವೂ ಜಮೆ ಆಗುತ್ತಿದ್ದು, ಅದೆಲ್ಲವೂ ಕೆಳ ಸೇತುವೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.</p><p>ಮಳೆಗಾಲದಲ್ಲಂತೂ ಕೆಳ ಸೇತುವೆ ಸಮಸ್ಯೆ ಹೆಚ್ಚಾಗಿದೆ. ಮಳೆ ಬಂದ ಸಂದರ್ಭದಲ್ಲಿ ನೀರಿನ ಜೊತೆಯಲ್ಲಿ ಪ್ಲಾಸ್ಟಿಕ್, ಹಾಳಾದ ಗೃಹೋಪಯೋಗಿ ವಸ್ತುಗಳು ಹಾಗೂ ಇತರೆ ತ್ಯಾಜ್ಯ ಬರುತ್ತಿದೆ. ಇದೆಲ್ಲವೂ ಕೆಳ ಸೇತುವೆಯ ಕಾಲುವೆ ಮೂಲಕ ಹರಿದು ಹೋಗುತ್ತಿದೆ. ಕೆಳ ಸೇತುವೆ ಬಳಿ ಕಾಲುವೆಗೆ ಯಾವುದೇ ತಡೆಗೋಡೆ ಇಲ್ಲದಿದ್ದರಿಂದ, ತ್ಯಾಜ್ಯವೆಲ್ಲವೂ ಸುಲಭವಾಗಿ ಕೆಳಸೇತುವೆಗೆ ನುಗ್ಗುತ್ತಿದೆ. ಇದರ ಜೊತೆಯಲ್ಲಿ ಹಾವು, ಚೇಳುಗಳೂ ಸೇರಿಕೊಳ್ಳುತ್ತಿವೆ.</p><p>ಕೆಳ ಸೇತುವೆಗೆ ಹೊಂದಿಕೊಂಡು ಕೆರೆ ಇದ್ದು, ಹೂಳು ತುಂಬಿಕೊಂಡು ಹಲವು ವರ್ಷವೇ ಆಗಿದೆ. ಈ ಪ್ರದೇಶ, ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದ್ದು, ರೋಗಗಳಿವೆ ಆಹ್ವಾನ ನೀಡುವಂತಿದೆ.</p><p>ನಾಗೇಂದ್ರನಮಟ್ಟಿಯ ಶಾಲೆ ಮಕ್ಕಳು, ಉದ್ಯೋಗಿಗಳು, ಕೂಲಿ ಕೆಲಸ ಗಾರರು ಇದೇ ಕೆಳಸೇತುವೆ ಮೂಲಕ ನಿತ್ಯವೂ ನಗರಕ್ಕೆ ಬಂದು ಹೋಗು ತ್ತಿದ್ದಾರೆ. ಅವರೆಲ್ಲರೂ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಕೆಳ ಸೇತುವೆ ದಾಟುತ್ತಿದ್ದಾರೆ. ಇತ್ತೀಚೆಗೆ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದ, ಕೆಳ ಸೇತುವೆಯಲ್ಲಿ ತ್ಯಾಜ್ಯವೇ ಹೆಚ್ಚಿದ್ದುದ್ದು ಕಂಡುಬಂತು.</p><p>‘ಕೆಳ ಸೇತುವೆ ನಿರ್ವಹಣೆ ಸರಿಯಿಲ್ಲ. ಇದು ಹಲವು ವರ್ಷಗಳ ಸಮಸ್ಯೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ನಾಗೇಂದ್ರ ನಮಟ್ಟಿಯ ರಜಾಕ ಅಹ್ಮದ್ ಹೇಳಿದರು.</p><p>ಸ್ಥಳೀಯ ನಿವಾಸಿ ಲಕ್ಷ್ಮಣ, ‘ಬಡವರು ವಾಸಿಸುವ ಸ್ಥಳವಿದೆ. ಕೆಳ ಸೇತುವೆ ದಾಟಲು ವಿದ್ಯಾರ್ಥಿಗಳು ಕಷ್ಟಪಡು ತ್ತಿದ್ದಾರೆ. ತ್ಯಾಜ್ಯದ ಜೊತೆಯಲ್ಲಿಯೇ ವಿಷಕಾರಿ ಕ್ರಿಮಿ–ಕೀಟಗಳು ಓಡಾಡು ತ್ತಿವೆ. ಇದರಿಂದ ಮಕ್ಕಳ ಜೀವಕ್ಕೂ ಅಪಾಯ ಉಂಟಾಗುವ ಭಯವಿದೆ’ ಎಂದರು.</p>.<h2><strong>ರಸ್ತೆ ತುಂಬ ಗುಂಡಿ</strong></h2>.<p>ಶಿಗ್ಗಾವಿ: ಕಳೆದ 15 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ನೀರಿನಿಂದಾಗಿ ತಾಲ್ಲೂಕಿನ ಬಾಡ ಮತ್ತು ಹುಣಸಿಕಟ್ಟಿ ಗ್ರಾಮಕ್ಕೆ ಹೋಗುವ ರಸ್ತೆ ಮಳೆ ನೀರಿನಿಂದ ಹದಗೆಟ್ಟು ಕೆಸರಾಗಿ ನಿತ್ಯ ಸಂಚರಿಸುವುದು ಕಷ್ಟಕರವಾಗಿದೆ.</p><p>ಹುಣಸಿಕಟ್ಟ ಗ್ರಾಮದಿಂದ ಬಾಡ ಗ್ರಾಮಕ್ಕೆ ಬರುವ ಪ್ರಮುಖ ರಸ್ತೆಯಾ ಗಿದ್ದು, ಮಳೆಗಾಲ ಬಂದರೆ ಸಾಕು ರಸ್ತೆ ಯಲ್ಲಿ ನೀರು ಹರಿದು ಇಡೀ ರಸ್ತೆಯಲ್ಲ ಕೆಸರುಮಯವಾಗಿ ಪಾದಚಾರಿಗಳು, ವಾಹನಗಳು ಓಡಾಡದಂತಾಗುತ್ತದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿ ಗಳು ಸಂಚಾರಕ್ಕಾಗಿ ಪರದಾಡುತ್ತಿದ್ದಾರೆ.</p><p>ವಾಹನಗಳಿಲ್ಲದೆ ಸಂಚಾರ ಸ್ಥಗಿತವಾಗುತ್ತಿವೆ. ಹೀಗಾಗಿ ರೈತರು, ವ್ಯಾಪಾರಸ್ಥರು ಸಹ ಸಂಚರಿಸ ದಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಈ ಕಡೆ ಗಮನ ಹರಿಸಿ ರಸ್ತೆ ಡಾಂಬರೀಕರಣ ಮಾಡಬೇಕು. ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಗ್ರಾಮಸ್ಥರರಾದ ಜಗದೀಶ ಸಿದ್ದಣ್ಣ ವರ, ಮಾಲತೇಶ ಕಮ್ಮಾರ, ಅಶೋಕ ಸಿದ್ದಣ್ಣವರ, ಶೇಖಪ್ಪ ಹಾದಿಮನಿ, ರಮೇಶ ಕಲಿವಾಳ ಆಗ್ರಹಿಸಿದ್ದಾರೆ.</p><p>ಮರ ಬಿದ್ದು ಕಿರಿಕಿರಿ: ತಾಲ್ಲೂಕಿನ ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ರಸ್ತೆ ನಡುವೆ ದೊಡ್ಡಹಳ್ಳದ ಹತ್ತಿರದಲ್ಲಿ ಮರ ಬಿದ್ದು 3 ತಾಸು ರಸ್ತೆ ಸಂಚಾರ ಸ್ಥಗಿತವಾಗಿತ್ತು. ನಂತರ ಹೆಸ್ಕಾಂ ಮತ್ತು ಸಾರ್ವಜನಿಕರು, ರಸ್ತೆ ಪಕ್ಕದ ರೈತರು ಸೇರಿ ಮರವನ್ನು ತೆರವುಗೊಳಿಸುವಲ್ಲಿ ನೆರವಾದರು.</p><p>ನಂತರ ರಸ್ತೆ ಸಂಚಾರ ಸುಗಮ ಗೊಂಡಿತು. ಮುನವಳ್ಳಿಯಿಂದ ಶಿಗ್ಗಾವಿಗೆ ಹೋಗುವ ವಾಹನಗಳು, ಪಾದಚಾರಿ ಗಳು, ದ್ವಿಚಕ್ರ ವಾಹನಗಳು ಬಂಕಾಪುರ ಮಾರ್ಗವಾಗಿ ಮತ್ತು ದುರ್ಗಾದೇವಿ ದೇವಸ್ಥಾನದ ರಸ್ತೆ ಮಾರ್ಗವಾಗಿ ಸುತ್ತುವರೆದು ಹೋಗುವಂತೆ ಆಯಿತು.</p>.<h2><strong>ಶಿಗ್ಗಾವಿ: ಹಾಳಾದ ರಸ್ತೆ</strong></h2>.<p>ಶಿಗ್ಗಾವಿ: ಪಟ್ಟಣದ ಪ್ರಮುಖ ರಸ್ತೆಯಾದ ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಮುಂದಿನ ರಸ್ತೆ ಸಂಪೂರ್ಣ ತೆಗ್ಗುಗುಂಡಿಗಳು ಬಿದ್ದು, ವಾಹನ ಸವಾರರು ಸಂಚಾರಕ್ಕಾಗಿ ಪರ ದಾಡುವಂತಾಗಿದೆ. ಸಂಬಂಧಿಸಿದ ಅಧಿ ಕಾರಿಗಳು ಈ ಕಡೆ ಗಮನ ಹರಿಸಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p>ಪಟ್ಟಣದ ಪ್ರವಾಸಿ ಮಂದಿರದಿಂದ ಕಿತ್ತೂರ ಚನ್ನಮ್ಮ ವೃತ್ತದವರೆಗೆ ಸಾಕಷ್ಟು ಗುಂಡಿಗಳು ಬಿದ್ದು, ಅವುಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ಅದರಲ್ಲಿ ದ್ವಿಚಕ್ರ ವಾಹನ ಸವಾರರು ಹೋಗಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಅಲ್ಲದೆ ಇದೇ ರಸ್ತೆಯಲ್ಲಿ ಮಾಮ್ಲೆದೇಸಾಯಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಇದೆ. </p><p>ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಗಳಿವೆ. ಹೆಸ್ಕಾಂ ಕಚೇರಿ, ತಾಲ್ಲೂಕು ಪಂಚಾಯ್ತಿ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಿವೆ. ನಿತ್ಯ ಮಕ್ಕಳು ಶಾಲಾ ಕಕಾಲೇಜುಗಳಿಗೆ ಹೋಗಲು ಪರದಾಡುವಂತಾಗಿದೆ. ಅಲ್ಲದೆ ಶಿಗ್ಗಾವಿಯಿಂದ ಸವಣೂರಿಗೆ ಹೋಗುವ ಮುಖ್ಯ ರಸ್ತೆಯಾಗಿದೆ. ಸಾರಿಗೆ ಸಂಸ್ಥೆ ಬಸ್ಗಳು ಸಂಚರಿಸಲು ಕಿರಿಕಿರಿಯಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಕ್ಷಣ ರಸ್ತೆ ದುರಸ್ಥಿ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.</p>.<p><em><strong>ಪೂರಕ ಮಾಹಿತಿ: ಬಸವರಾಜ ಒಡೇರಹಳ್ಳಿ, ಎಂ.ವಿ.ಗಾಡಾದ, ಪ್ರಮೀಳಾ ಹುನಗುಂದ</strong></em></p>.<p>ಬ್ಯಾಡಗಿ: ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಹರಿಯುವ ಶೌಚಾಯದ ನೀರು, ಮಳೆ ಬಂದರೆ ಕೆರೆಯಂತಾಗುವ ರಸ್ತೆ, ಸದಾ ಸಂಚಾರ ಕಿರಿಕಿರಿ, ಜೀವ ಕೈಯಲ್ಲಿ ಹಿಡಿದು ಓಡಾಡುವ ಪಾದಚಾರಿಗಳು. ಆಗಾಗ ಉರುಳಿ ಬೀಳುವ ವಾಹನಗಳು...</p><p>ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯ ದುಸ್ಥಿತಿ ಇದು. ಕಳೆದ 8 ವರ್ಷಗಳ ಹಿಂದೆ ಮುಖ್ಯರಸ್ತೆ ವಿಸ್ತರಣೆಗೆ ಮುಂದಾಗಿದ್ದ ತಾಲ್ಲೂಕು ಆಡಳಿತ, ಚರಂಡಿಗಳನ್ನು ತೆರವುಗೊಳಿಸಿತ್ತು. ಈ ಚರಂಡಿ ಇನ್ನು ದುರಸ್ತಿ ಕಂಡಿಲ್ಲ. ಮುಖ್ಯ ರಸ್ತೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಭೂ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸಮಸ್ಯೆ ಇನ್ನಷ್ಟು ಜಟಿಲಗೊಂಡಿದೆ. ಈ ಮುಖ್ಯ ರಸ್ತೆಯ ವಿಸ್ತರಣೆ ಮರೀಚಿಕೆಯಾಗುತ್ತಿದೆ. ಜೊತೆಗೆ, ಹಲವು ಸಮಸ್ಯೆಗಳು ಉದ್ಭವಿಸುವಂತೆ ಮಾಡಿದೆ.</p><p>ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ವಿಳಂಬವಾಗಿದೆ. ಶತಮಾನದ ಹಿಂದೆ ನಿರ್ಮಿಸಿದ್ದ ಕಾಂಕ್ರೀಟ್ ರಸ್ತೆ ಟಿಪ್ಪರ್ಗಳ ಓಡಾಟದಿಂದ ಬಿರುಕು ಬಿಟ್ಟಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದರೆ ರಸ್ತೆ ಕೆರೆಯಂತಾಗುತ್ತದೆ. ವರ್ಷದ ಹಿಂದೆ ಕಲ್ಲಿನ ಪುಡಿ ಹಾಕಿ ದುರಸ್ತಿ ಮಾಡಿದ್ದ ರಸ್ತೆ ಈಗ ಹಾಳಾಗಿದೆ. ಸ್ಥಳೀಯ ನಿವಾಸಿಗಳ ಶೌಚಾಲಯದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಪಾದಚಾರಿ ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಯ ಮೇಲೆ ಹೋಗುವುದು ದುಸ್ತರವಾಗಿದೆ. ಆದಷ್ಟು ಬೇಗ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.</p><p>ಸದಾ ಸಂಚಾರ ದಟ್ಟಣೆ: ಎದುರು ಬದುರಾಗಿ ವಾಹನಗಳು ಬಂದರೆ ಸದಾ ಸಂಚಾರ ಕಿರಿಕಿರಿ ಆಗುತ್ತಿದೆ. ಡಿಸೆಂಬರ್ನಿಂದ ಐದಾರು ತಿಂಗಳವರೆಗೆ ಮೆಣಸಿನಕಾಯಿ ಹೊತ್ತುಕೊಂಡು ಬರುವ ವಾಹನಗಳು ಮಾರುಕಟ್ಟೆ ಪ್ರವೇಶಿಸಲು ಹರ ಸಾಹಸ ಪಡಬೇಕಾಗಿದೆ. ಸಂಚಾರ ದಟ್ಟಣೆಯಿಂದ ವಾಹನಗಳು ನಿರ್ಗಮಿಸಲು ಗಂಟೆಗಟ್ಟಲೆ ಸಮಯವನ್ನು ತೆಗೆದುಕೊಳ್ಳಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಸ್ತೆಯಲ್ಲಿರುವ ತಗ್ಗು ಮುಚ್ಚಿ, ತಾತ್ಕಾಲಿಕವಾಗಿ ಚರಂಡಿ ನಿರ್ಮಿಸಿದರೆ ಜನತೆ ನಿರಾತಂಕವಾಗಿರಬಹುದು. </p><p>‘ಮುಖ್ಯ ರಸ್ತೆಯ ಭೂ ಮಾಲೀಕರ ಕಟ್ಟಡಗಳಿಗೆ ಹಾನಿಯಾಗದಂತೆ, ಚರಂಡಿ ನಿರ್ಮಾಣ, ರಸ್ತೆ ದುರಸ್ತಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಕೋರ್ಟ್ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ರಸ್ತೆಯಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಲೋಕೋಪಯೋಗಿ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಮುಂದಾಗಬೇಕು.</p><p>ತುಮ್ಮಿನಕಟ್ಟಿ: ರಸ್ತೆಯುದ್ದಕ್ಕೂ ಅಲ್ಲಲ್ಲಿ ಬಾಯ್ತೆರೆದ ತೆಗ್ಗು, ಗುಂಡಿಗಳು ಮಳೆ ನೀರಿನಿಂದ ತುಂಬಿಕೊಂಡಿವೆ. ಇದಲ್ಲದೆ ರಸ್ತೆ ಪಕ್ಕದ ಕಾಲುವೆಯಿಂದ ಹೂಳು ತೆಗೆದ ಮಣ್ಣನ್ನು ಡಾಂಬರ್ ರಸ್ತೆ ಪಕ್ಕ ಹಾಕಲಾಗಿದೆ. ಇದರಿಂದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯ ಸಂಚರಿಸಲು ಪರಿತಪಿಸುವಂತಾಗಿದೆ. ರಾತ್ರಿ ವೇಳೆ ಭಾರಿ ಗಾತ್ರದ ವಾಹನಗಳು ಎದುರಾದರೆ ಸಣ್ಣಪುಟ್ಟ ವಾಹನಗಳ ಸವಾರರು ಜೀವ ಭಯದಲ್ಲೇ ವಾಹನ ಚಾಲನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.</p><p>ಇದು ತುಮ್ಮಿನಕಟ್ಟಿಯಿಂದ ಕೂಸಗಟ್ಟಿಗೆ ಹೋಗುವ ರಸ್ತೆಯ ದುಸ್ಥಿತಿ. ಈ ರಸ್ತೆಯಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವಂತಾಗಿದೆ. ಹೀಗಾಗಿ, ಪ್ರಸ್ತುತ ರಸ್ತೆಯ ದುಸ್ಥಿತಿ ಕಂಡು ಇಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.</p><p>ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನಕ್ಕೆ ಬಂದು ಹೋಗುವ ಅಪಾರ ಪ್ರಮಾಣದ ಭಕ್ತರು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿನಿತ್ಯ ಇದೇ ಮಾರ್ಗವಾಗಿ ಹರಿಹರ, ದಾವಣಗೆರೆ, ರಟ್ಟೀಹಳ್ಳಿ, ಹಿರೇಕೆರೂರು, ಬೆಂಗಳೂರಿಗೆ ತೆರಳುತ್ತಾರೆ. ಸರ್ಕಾರಿ, ಖಾಸಗಿ ಹಾಗೂ ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.</p><p>ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆಯ ಈ ದುಸ್ಥಿತಿ ಕಂಡು ಕಾಣದಂತೆ ಜಾಣ ಕುರುಡು ತೋರುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ ಎಂದು ಎಚ್ಚರಿಸಿದ್ದಾರೆ. ಜನರೇ ಹೋರಾಟದ ಹಾದಿ ತುಳಿದು ತಕ್ಕ ಪಾಠ ಕಲಿಸುವ ಅನಿವಾರ್ಯತೆ ಎದುರಾಗದಂತೆ ಎಚ್ಚರ ವಹಿಸಬೇಕು ಎಂಬುದು ಸ್ಥಳೀಯ ರೈತರ ಆಗ್ರಹವಾಗಿದೆ</p><p>‘ಪ್ರತಿನಿತ್ಯ ಸಂಚಾರ ಸಂಕಷ್ಟ ಎದುರಿಸುವ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು, ನೋವನ್ನು ಅನುಭವಿಸಿದ ಘಟನೆಗಳು ಸಾಕಷ್ಟು ಸಂಭವಿಸಿವೆ. ಸವಾರರಿಗೆ ಎದುರಾಗುವ ಬಾರಿ ಗಾತ್ರದ ವಾಹನಗಳು ಬಂದಾಗ ಸ್ವಲ್ಪ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಸ್ಥಳೀಯ ರೈತ ಮುಖಂಡ ಪರಸಪ್ಪ ಜಾದವ್ ಅವರು.</p><p>ರಸ್ತೆಯ ಈ ದುಸ್ಥಿತಿಯಿಂದ ತುಮ್ಮಿನಕಟ್ಟಿಗೆ ಬರಬೇಕಾದ ಸರ್ಕಾರಿ ಬಸ್ಸುಗಳು ಬಾರದೇ, ಫತ್ತೇಪುರದ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗಿ, ಪುನಃ ಉಕ್ಕಡಗಾತ್ರಿಯಿಂದ ಹರಿಹರಕ್ಕೆ ತಲುಪುತ್ತವೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.</p>.<div><blockquote>ಶಿಗ್ಗಾವಿ ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ನೀರು ನಿಂತು ತುಂಬಾ ತೊಂದರೆಯಾಗಿದೆ. ಈ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ</blockquote><span class="attribution">ರವಿ ಕೋಣಪ್ಪನವರ, ಶಿಗ್ಗಾವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>