<p><strong>ಚಿಂಚೋಳಿ:</strong> ತಾಲ್ಲೂಕಿನಲ್ಲಿ ಹೆಸರು ಬೆಳೆ ಹುಲುಸಾಗಿ ಬೆಳೆದು ಹೂವು-ಚೆಳ್ಳಿಯೊಂದಿಗೆ ನಳನಳಿಸುತ್ತಿದ್ದು ಬಂಪರ್ ಉಳುವರಿಯ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.</p>.<p>ತಾಲ್ಲೂಕಿನಲ್ಲಿ ಮುಂಗಾರು ಆಶಾದಾಯಕವಾಗಿದ್ದು ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ 10 ದಿನಗಳಿಂದ ನಿತ್ಯ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಕಳೆ ಹೆಚ್ಚಾಗಿದೆ. 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಹೂವಾಡುವ ಮತ್ತು ಚೆಳ್ಳಿ ಕಚ್ಚುವ ಹಂತದಲ್ಲಿದೆ. ಸಧ್ಯ ಮಳೆ ಬಿಡುವು ನೀಡಬೇಕೆಂದು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.</p>.<p>‘ಮಳೆ ಬಿಡುವು ನೀಡದೇ ಹೋದರೆ ಬೆಳೆಗೆ ಆಪತ್ತು ಎದುರಾಗುವ ಸಾಧ್ಯತೆಯಿದೆ’ ಎಂದು ಚಿಮ್ಮಾಈದಲಾಯಿ ಗ್ರಾಮದ ರೈತ ಬಸವಣಪ್ಪ ತಾಳಪಳ್ಳಿ ತಿಳಿಸಿದರು.</p>.<p>ನಿರಂತರ ಮಳೆಯಿಂದ ಅಲ್ಲಲ್ಲಿ ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಚರಂತಿ ಹುಳುಗಳು ಕಾಣಿಸುತ್ತಿದ್ದು ಕೃಷಿ ಅಧಿಕಾರಿಗಳ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಲಾಗುವುದು ಎಂದರು.</p>.<p>ತಾಲ್ಲೂಕಿನಲ್ಲಿ ಜೂನ್ನಿಂದ ಇವರೆಗೆ 343.9 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಜು 26ವರೆಗೆ 419.2 ಮಿ.ಮೀ ಮಳೆಯಾಗಿದೆ. ಇದು ಶೇ 22ರಷ್ಟು ಅಧಿಕ.</p>.<p>13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 7ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.</p>.<p>ಸಧ್ಯ ಉದ್ದು ಹೆಸರು, ತೊಗರಿ ಬೆಳೆಯು ಬೆಳವಣಿಗೆ ಹಂತದಲ್ಲಿದೆ. ರೈತರು ತೊಗರಿ ಬೆಳೆಯ ಚಂಡಿ ಚಿವುಟಿದರೆ ಉತ್ತಮ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.<br> ಬೆಳೆ ವಿಮೆ ಮಾಡಿಸಲು ಸಲಹೆ.</p>.<p>ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೆಳೆಗಳಿಗೆ ವಿಮೆ ಮಾಡಿಸಲು ಜು.31 ಕೊನೆಯ ದಿನವಾಗಿದ್ದು ರೈತರು ಕೊನೆಯ ದಿನಕ್ಕಾಗಿ ಕಾಯದೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.</p>.<p>ಈವರೆಗೆ ತಾಲ್ಲೂಕಿನಲ್ಲಿ 9,500 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ ಇದು ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ. ಕಳೆದ ವರ್ಷ 23ಸಾವಿರ ರೈತರು ವಿಮೆ ಮಾಡಿಸಿದ್ದರು. ನೆರೆಯ ಆಳಂದ ತಾಲ್ಲೂಕಿನಲ್ಲಿ ಈವರೆಗೆ 52 ಸಾವಿರ ರೈತರು ವಿಮೆ ನೋಂದಣಿ ಮಾಡಿಸಿದ್ದಾರೆ ಎಂದರು.</p>.<p>ಸೋಂಪೊ ಜನರಲ್ ಇನಸುರೆನ್ಸ್ ಕಂಪನಿಯನ್ನು ಕೈಬಿಟ್ಟು ಇಫ್ಕೊ ಟೊಕಿಯೊ ವಿಮಾ ಕಂಪೆನಿಗೆ ಕಲಬುರಗಿ ಜಿಲ್ಲೆ ಹೊಣೆ ಹೊರಿಸಲಾಗಿದೆ. ಪ್ರಸಕ್ತ ವರ್ಷ ಹೆಚ್ಚು ರೈತರು ವಿಮೆ ಮಾಡಿಸಿದರೆ ಅವರ ಬೆಳೆ ಹಾನಿಯಾದರೆ ಹೆಚ್ಚು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.</p>.<p>Highlights - 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೇಸಾಯ ವಾಡಿಕೆಗಿಂತಲೂ ಶೇ 22 ಅಧಿಕ ಮಳೆ ಬೆಳೆ ವಿಮಾ ನೋಂದಣಿಗೆ ರೈತರ ನೀಸರ ಪ್ರತಿಕ್ರಿಯೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ:</strong> ತಾಲ್ಲೂಕಿನಲ್ಲಿ ಹೆಸರು ಬೆಳೆ ಹುಲುಸಾಗಿ ಬೆಳೆದು ಹೂವು-ಚೆಳ್ಳಿಯೊಂದಿಗೆ ನಳನಳಿಸುತ್ತಿದ್ದು ಬಂಪರ್ ಉಳುವರಿಯ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.</p>.<p>ತಾಲ್ಲೂಕಿನಲ್ಲಿ ಮುಂಗಾರು ಆಶಾದಾಯಕವಾಗಿದ್ದು ಬೆಳೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ 10 ದಿನಗಳಿಂದ ನಿತ್ಯ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ಕಳೆ ಹೆಚ್ಚಾಗಿದೆ. 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆ ಹೂವಾಡುವ ಮತ್ತು ಚೆಳ್ಳಿ ಕಚ್ಚುವ ಹಂತದಲ್ಲಿದೆ. ಸಧ್ಯ ಮಳೆ ಬಿಡುವು ನೀಡಬೇಕೆಂದು ರೈತರು ಮುಗಿಲಿನತ್ತ ಮುಖ ಮಾಡಿದ್ದಾರೆ.</p>.<p>‘ಮಳೆ ಬಿಡುವು ನೀಡದೇ ಹೋದರೆ ಬೆಳೆಗೆ ಆಪತ್ತು ಎದುರಾಗುವ ಸಾಧ್ಯತೆಯಿದೆ’ ಎಂದು ಚಿಮ್ಮಾಈದಲಾಯಿ ಗ್ರಾಮದ ರೈತ ಬಸವಣಪ್ಪ ತಾಳಪಳ್ಳಿ ತಿಳಿಸಿದರು.</p>.<p>ನಿರಂತರ ಮಳೆಯಿಂದ ಅಲ್ಲಲ್ಲಿ ಹೆಸರು ಬೆಳೆಯಲ್ಲಿ ಎಲೆ ತಿನ್ನುವ ಚರಂತಿ ಹುಳುಗಳು ಕಾಣಿಸುತ್ತಿದ್ದು ಕೃಷಿ ಅಧಿಕಾರಿಗಳ ಸಲಹೆ ಪಡೆದು ಔಷಧ ಸಿಂಪಡಣೆ ಮಾಡಲಾಗುವುದು ಎಂದರು.</p>.<p>ತಾಲ್ಲೂಕಿನಲ್ಲಿ ಜೂನ್ನಿಂದ ಇವರೆಗೆ 343.9 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ ಜು 26ವರೆಗೆ 419.2 ಮಿ.ಮೀ ಮಳೆಯಾಗಿದೆ. ಇದು ಶೇ 22ರಷ್ಟು ಅಧಿಕ.</p>.<p>13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 7ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.</p>.<p>ಸಧ್ಯ ಉದ್ದು ಹೆಸರು, ತೊಗರಿ ಬೆಳೆಯು ಬೆಳವಣಿಗೆ ಹಂತದಲ್ಲಿದೆ. ರೈತರು ತೊಗರಿ ಬೆಳೆಯ ಚಂಡಿ ಚಿವುಟಿದರೆ ಉತ್ತಮ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.<br> ಬೆಳೆ ವಿಮೆ ಮಾಡಿಸಲು ಸಲಹೆ.</p>.<p>ಮುಂಗಾರು ಹಂಗಾಮಿನ ಬೆಳೆಗಳಾದ ಉದ್ದು, ಹೆಸರು, ತೊಗರಿ, ಸೋಯಾ ಮೊದಲಾದ ಬೆಳೆಗಳಿಗೆ ವಿಮೆ ಮಾಡಿಸಲು ಜು.31 ಕೊನೆಯ ದಿನವಾಗಿದ್ದು ರೈತರು ಕೊನೆಯ ದಿನಕ್ಕಾಗಿ ಕಾಯದೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು.</p>.<p>ಈವರೆಗೆ ತಾಲ್ಲೂಕಿನಲ್ಲಿ 9,500 ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ ಇದು ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದಂತಾಗಿದೆ. ಕಳೆದ ವರ್ಷ 23ಸಾವಿರ ರೈತರು ವಿಮೆ ಮಾಡಿಸಿದ್ದರು. ನೆರೆಯ ಆಳಂದ ತಾಲ್ಲೂಕಿನಲ್ಲಿ ಈವರೆಗೆ 52 ಸಾವಿರ ರೈತರು ವಿಮೆ ನೋಂದಣಿ ಮಾಡಿಸಿದ್ದಾರೆ ಎಂದರು.</p>.<p>ಸೋಂಪೊ ಜನರಲ್ ಇನಸುರೆನ್ಸ್ ಕಂಪನಿಯನ್ನು ಕೈಬಿಟ್ಟು ಇಫ್ಕೊ ಟೊಕಿಯೊ ವಿಮಾ ಕಂಪೆನಿಗೆ ಕಲಬುರಗಿ ಜಿಲ್ಲೆ ಹೊಣೆ ಹೊರಿಸಲಾಗಿದೆ. ಪ್ರಸಕ್ತ ವರ್ಷ ಹೆಚ್ಚು ರೈತರು ವಿಮೆ ಮಾಡಿಸಿದರೆ ಅವರ ಬೆಳೆ ಹಾನಿಯಾದರೆ ಹೆಚ್ಚು ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.</p>.<p>Highlights - 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೇಸಾಯ ವಾಡಿಕೆಗಿಂತಲೂ ಶೇ 22 ಅಧಿಕ ಮಳೆ ಬೆಳೆ ವಿಮಾ ನೋಂದಣಿಗೆ ರೈತರ ನೀಸರ ಪ್ರತಿಕ್ರಿಯೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>