ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜು | ಹೆಚ್ಚಿದ ದಾಖಲಾತಿ; ಬೋಧನೆಯದ್ದೆ ಸಮಸ್ಯೆ!

Published : 21 ಜೂನ್ 2024, 4:50 IST
Last Updated : 21 ಜೂನ್ 2024, 4:50 IST
ಫಾಲೋ ಮಾಡಿ
Comments
ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಬೋಧಿಸುತ್ತಿರುವುದು
ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕ ಬೋಧಿಸುತ್ತಿರುವುದು
ಕಾಲೇಜಿನಲ್ಲಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಾಲೇಜಿಗೆ ಕಾಯಂ ಹುದ್ದೆಗಳ ಭರ್ತಿಯ ಅವಶ್ಯವಿದೆ
ಪಂಡಿತರಾವ ಪಾಟೀಲ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಸೇಡಂ
ನಮ್ಮ ಕಾಲೇಜಿನಲ್ಲಿ ಉತ್ತಮ ಅನುಭವವುಳ್ಳ ಉಪನ್ಯಾಸಕ ಬಳಗವಿದ್ದು ಸಮರ್ಪಕ ಆಡಳಿತಾತ್ಮಕ ನಿರ್ವಹಣೆ ಮಾಡುವ ಅವಶ್ಯಕತೆ ಇದೆ
ಸೌಮ್ಯ ವಿದ್ಯಾರ್ಥಿನಿ
ಕಾಲೇಜಿನ ಪ್ರಯೋಗಾಲಯದಲ್ಲಿ ವಿವಿಧ ಸಾಮಾಗ್ರಿಗಳ ಕೊರತೆಯಿದೆ. ಸಲಕರಣೆಗಳ ಪ್ರಯೋಗಾಲಯಕ್ಕೆ ಆದ್ಯತೆ ಸಿಗಬೇಕು.
ವಿಶ್ವರಾಜ ವಿದ್ಯಾರ್ಥಿ
ಕಾಲೇಜು ಪಟ್ಟಣದಲ್ಲಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ. ವಿದ್ಯಾರ್ಥಿಗಳ ಶೌಚಾಲಯ ಮತ್ತು ನೀರಿನ ಕಡೆಗೆ ಗಮನ ಕೊಡಬೇಕು.
ನಾಗರಾಜ ಹಾಬಾಳ ಸ್ಥಳೀಯ ನಿವಾಸಿ
ಮುಧೋಳ: ಖಾಲಿ ಹುದ್ದೆಗಳೇ ಹೆಚ್ಚು 
ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಮಂಜೂರಾತಿ ಹುದ್ದೆಗಳಲ್ಲಿ ಕೇವಲ ಮೂವರು ಮಾತ್ರ ಇದ್ದಾರೆ. ಕಲಾ ವಿಭಾಗದಲ್ಲಿ 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇತಿಹಾಸ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಿಗೆ ಕಾಯಂ ಉಪನ್ಯಾಸಕರನ್ನು ಹೊರತು ಪಡಿಸಿ ಐಚ್ಛಿಕ ವಿಷಯಗಳಾದ ಇಂಗ್ಲಿಷ್ ಹಿಂದಿ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿವೆ. ಅಲ್ಲದೇ ಪ್ರಾಚಾರ್ಯ ಎಸ್.ಡಿ.ಎ ಮತ್ತು ಗ್ರೂಪ್ ಡಿ ಹುದ್ದೆ ಖಾಲಿ ಇವೆ’ ಎಂದು ಶಾಲೆಯ ಪ್ರಭಾರ ಪ್ರಾಚಾರ್ಯ ಸಂತೋಷ ರಾಠೋಡ ಮತ್ತು ಉಪನ್ಯಾಸಕ ಡಾ.ಸಿದ್ದಲಿಂಗ ಶಾಕಾಪರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಮಳಖೇಡ:ಬೇಕಿದೆ ಕಾಂಪೌಂಡ್ ತಾಲ್ಲೂಕಿನ ಮಳಖೇಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಆವರಣ ಗೋಡೆ ಇಲ್ಲ. ಗ್ರಾಮ ಕೆಲವರು ಕಾಲೇಜಿನ ಆವರಣದೊಳಗೆ ನುಗ್ಗಿ ಮದ್ಯೆ ಸೇವಿಸುವುದು ಜೂಜಾಟ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುತ್ತಾರೆ. ಕಿಟಕಿ ಗಾಜು ಬಾಗಿಲು ಮುರಿಯುತ್ತಿದ್ದಾರೆ. ಆವರಣದಲ್ಲಿ ಎಲ್ಲಿ ನೋಡಿದರೂ ಮದ್ಯದ ಖಾಲಿ ಬಾಟಲಿಗಳೇ ಕಾಣುತ್ತವೆ. ಆದಷ್ಟು ಶೀಘ್ರದಲ್ಲಿ ಕಾಲೇಜಿಗೆ ತಡೆಗೋಡೆ ನಿರ್ಮಾಣವಾಗಬೇಕು’ ಎಂದು ಕಾಲೇಜಿನ ಪ್ರಾಚಾರ್ಯ ಅಶೋಕ ಶಾಸ್ತ್ರಿ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT