<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಬುಧವಾರ ಪುನರ್ವಸು ಮಳೆ ಪುನಃ ಪುನಃ ಬಿರುಸಿನಿಂದ ಸುರಿಯುತ್ತಿದ್ದು, ಇಳೆಯನ್ನು ಅಕ್ಷರಶಃ ತೋಯಿಸಿ, ಸಂಭ್ರಮ ತಂದಿದೆ. ಇದರೊಂದಿಗೆ ತಗ್ಗು ಪ್ರದೇಶಗಳು ಹಾಗೂ ನದಿದಡಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೂ ತಂದೊಡ್ಡಿದೆ.</p>.<p>ಮಳೆಯೊಂದಿಗೆ ದಾಂಗುಡಿ ಇಡುತ್ತಿರುವ ಬಿರುಸಾದ ಗಾಳಿಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಬೀಳುತ್ತಿದ್ದು, ಜನಮಾನಸದಲ್ಲಿ ಆತಂಕವನ್ನೂ ಸೃಷ್ಟಿಸಿದೆ. ಈ ಮಧ್ಯೆ ಹವಾಮಾನ ಇಲಾಖೆ ಇನ್ನೂ ಎರಡು ದಿನಗಳ ಕಾಲ ‘ರೆಡ್ ಅಲರ್ಟ್’ ಘೋಷಿಸಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.</p>.<p>ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಜೋಡುಪಾಲ ಸಮೀಪ ರಸ್ತೆಗೆ ಮಣ್ಣು ಕುಸಿದಿದೆ. ಜೊತೆಗೆ, ಮೇಕೇರಿ ಗ್ರಾಮದಲ್ಲಿ ಅಲ್ಪಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಗುಡ್ಡದ ಮೇಲಿರುವ ನಿವಾಸಿಗಳಲ್ಲಿ ಆತಂಕ ತಂದಿದೆ. ಉಳಿದಂತೆ, ನಾಪೋಕ್ಲು ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿದೆ.</p>.<p>ದಕ್ಷಿಣ ಕೊಡಗಿನಲ್ಲೂ ಮಳೆ ವ್ಯಾಪಕವಾಗಿ ಬೀಳುತ್ತಿರುವುದರಿಂದ ಅಲ್ಲೂ ಪ್ರವಾಹದ ಭೀತಿಯನ್ನು ಸೃಷ್ಟಿಸಿದೆ. ಅಲ್ಲಿನ ಬರಪೊಳೆ, ಲಕ್ಷ್ಮಣತೀರ್ಥ, ಕೀರೆಹೊಳೆಗಳು ಭೋರ್ಗರೆಯುತ್ತಿವೆ. ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿಯಿಂದ ನಾಲ್ಕೇರಿಗೆ ಹೋಗುವ ರಸ್ತೆ ಜಲವೃತಗೊಂಡಿವೆ.</p>.<p>ಜಿಲ್ಲೆಯಲ್ಲಿ ಒಂದೇ ದಿನ 11 ಮನೆಗಳು ಕುಸಿದಿದ್ದರೆ, 110 ವಿದ್ಯುತ್ ಕಂಬಗಳು ಧರೆಗುರುಗಳಿವೆ. ಹಲವೆಡೆ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸಲಾಗುತ್ತಿದೆ.</p>.<p>ವಿರಾಜಪೇಟೆ- ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮಳೆ ಗಾಳಿಯಿಂದ ಬಿದ್ದಿದ್ದ ಮರದ ತೆರವು ಕಾರ್ಯ ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸುತ್ತಿವೆ.</p>.<p><strong>ನಾಪೋಕ್ಲು; ಹಲವೆಡೆ ರಸ್ತೆ ಸಂಪರ್ಕ ಕಡಿತ</strong></p>.<p>ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಮೀಪದ ಕೊಟ್ಟಮುಡಿ, ಹೊದ್ದೂರು, ಬಲಮುರಿಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.</p>.<p>ನಾಪೋಕ್ಲು -ಮೂರ್ನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.</p>.<p>ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ.</p>.<p>ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಿಳಿಗೇರಿ ಬಕ್ಕಬಾಣೆಯ ಸೇತುವೆ ಹಾಗೂ ಬಿಳಿಗೇರಿ ಕಗ್ಗೋಡು ಮಾರ್ಗವಾಗಿ ಬಯಗೊಂಡ ಮನೆ ಬಳಿ ಇರುವ ಸೇತುವೆಯ ಒಂದು ಬದಿ ಮಣ್ಣು ಕುಸಿದಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿ ಮೇಕೇರಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಖಾದರ್ ಮನವಿ ಮಾಡಿದ್ದಾರೆ.</p>.<p><strong>ಸೋಮವಾರಪೇಟೆ; ಚಿಕ್ಕಪುಟ್ಟ ಕುಸಿತಗಳು ಆರಂಭ</strong> </p><p>ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು ಸಾಕಷ್ಟು ಹಾನಿಯೊಂದಿಗೆ ಅಲ್ಲಲ್ಲಿ ಚಿಕ್ಕಪುಟ್ಟ ಬರೆ ಕುಸಿತಗಳು ಆರಂಭವಾಗಿವೆ. ಸಾಕಷ್ಟು ಭಾಗಗಳಲ್ಲಿ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀತ ಗಾಳಿ ಬೀಸುತ್ತಿದ್ದು ಚಳಿಯಿಂದ ಪ್ರಾಣಿಗಳೂ ಪರದಾಡುತ್ತಿವೆ. ಎಲ್ಲದಕ್ಕೂ ವಿದ್ಯುತ್ ನಂಬಿಕೊಂಡಿದ್ದ ಜನರಿಗೆ ವಿದ್ಯುತ್ ಕಡಿತದಿಂದ ಸಾಕಷ್ಟು ತೊಂದರೆಯಾಗಿದೆ. ಸೆಸ್ಕ್ ಸಿಬ್ಬಂದಿ ಹಗಲು ಇರುಳು ಸುರಿಯುವ ಮಳೆಯಲ್ಲಿ ಕೆಲಸ ಮಾಡುತ್ತಿದ್ದರೂ ತಕ್ಷಣಕ್ಕೆ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣುತ್ತಿಲ್ಲ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವುದರಿಂದ ಅಲ್ಲಿಯ ಸಂಪರ್ಕವೇ ಕಡಿತಗೊಂಡಿದೆ. ಮೊಬೈಲ್ಗಳು ಚಾರ್ಜ್ ಇಲ್ಲದೇ ಸ್ತಬ್ದಗೊಂಡಿವೆ. ‘ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಏನೇ ಅನಾಹುತ ನಡೆದರೂ ತಕ್ಷಣಕ್ಕೆ ಮಾಹಿತಿ ಕೊಡಲೂ ಮತ್ತು ಅಲ್ಲಿಂದ ಕರೆತರಲೂ ಸಾಧ್ಯವಿಲ್ಲದಂತಹ ಸ್ಥಿತಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಿದೆ’ ಎಂದು ಅಲ್ಲಿನ ನಿವಾಸಿ ಚಾಮೆರ ಸಂತೋಷ್ ಹೇಳಿದರು. ಕೂಡಲೇ ಇಲ್ಲಿ ಅಧಿಕಾರಿಗಳು ಬಂದು ನರಕ ಸದೃಶ್ಯವಾದ ಜೀವನಕ್ಕೆ ಒಂದು ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದೂ ಅಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿಯಲ್ಲಿ ತಡೆಗೋಡೆ ಕುಸಿದು ರಸ್ತೆಗೆ ಸಂಚಕಾರವಾಗಿದ್ದು ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ. ಗ್ರಾಮದ ಸುಂದರಮ್ಮ ಅವರಿಗೆ ಸೇರಿದ ವಾಸದ ಮನೆಯ ಪಕ್ಕದಲ್ಲೇ ನಿರ್ಮಿಸಿದ್ದ ತಡೆಗೋಡೆ ಭಾರೀ ಮಳೆಗೆ ಕುಸಿದಿದೆ. ಕಳೆದ 3 ದಿನಗಳ ಹಿಂದಷ್ಟೇ ಸಣ್ಣ ಪ್ರಮಾಣದಲ್ಲಿ ಕುಸಿದಿದ್ದ ತಡೆಗೋಡೆ ಇಂದು ಭಾಗಶಃ ಕುಸಿತಗೊಂಡಿದ್ದು ವಾಸದ ಮನೆಗೆ ಅಪಾಯ ತಂದೊಡ್ಡಿದೆ. ಇದೇ ಸ್ಥಳದಲ್ಲಿ ಶ್ರೀಕೊರಗಜ್ಜ ದೇವಾಲಯವೂ ಇದ್ದು ಪೂಜೆಯ ದಿನಗಳಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಅಬ್ಬೂರುಕಟ್ಟೆಯಿಂದ ಅರೆಯೂರು ಸಂಪರ್ಕಿಸುವ ರಸ್ತೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಿದ ತಡೆಗೋಡೆ ಮಳೆಗೆ ಕುಸಿದಿದೆ. ತಡೆಗೋಡೆಯ ಕಲ್ಲುಗಳು ರಸ್ತೆಗೆ ಬಿದ್ದಿದ್ದು ಸ್ಥಳೀಯರು ಕಲ್ಲನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಕೊಟ್ಟಿದ್ದಾರೆ. ರಸ್ತೆ ಮನೆ ಹಾಗೂ ದೇವಾಲಯದ ಹಿತದೃಷ್ಟಿಯಿಂದ ತಕ್ಷಣ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ತಾಲ್ಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯಲ್ಲಿ ಬಾಬು ಮತ್ತು ಜಾನಕಿ ಎಂಬುವವರ ಮನೆ ಮುಂದೆ ಬರೆ ಕುಸಿಯುತ್ತಿದೆ. ಕಳೆದ ವರ್ಷವೇ ಚೌಡ್ಲು ಗ್ರಾಮ ಪಂಚಾಯಿತಿಗೆ ಅಪಾಯದ ಮುನ್ಸೂಚನೆ ಕುರಿತು ಅರ್ಜಿ ಸಲ್ಲಿಸಿ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಪ್ರಸಕ್ತ ಸಾಲಿನ ಮಳೆಯಿಂದಾಗಿ ಬರೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ ಎಂದು ಮನೆಯವರು ತಿಳಿಸಿದ್ದಾರೆ.</p>.<p><strong>ಕೊಡಗರಹಳ್ಳಿಯಲ್ಲಿ ನೀರಿಗೆ ಪರದಾಟ</strong> </p><p>ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಭಾರಿ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳುತ್ತಿರುವುದರಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಪೊನ್ನೀರ ರಾಜ ಬೋಜಮ್ಮ ಅಯ್ಯಟಿ ಚಂದ್ರ ಅಯ್ಯಟಿ ಗಣಪತಿ ಅವರ ಮನೆಯ ಬಳಿ ಸುಮಾರು 7ಕ್ಕಿಂತ ಹೆಚ್ಚಿನ ವಿದ್ಯುತ್ ಕಂಬಗಳು ಭಾರಿ ಗಾಳಿ ಮಳೆಗೆ ನೆಲಕ್ಕುರುಳಿವೆ. ಈ ಜಾಗದಲ್ಲಿ ಕೊಡಗರಹಳ್ಳಿ ನಿವಾಸಿಗಳಿಗೆ ಕುಡಿಯುವ ನೀರು ಸಂಪರ್ಕದ ಮೋಟಾರ್ ಇದ್ದು ವಿದ್ಯುತ್ ವ್ಯತ್ಯಯದಿಂದ ಈ ಭಾಗದ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೂಡಲೇ ಜನರ ದಿನನಿತ್ಯದ ಬಳಕೆಗೆ ಇರುವ ನೀರು ಪೂರೈಕೆಗಾಗಿ ಸೆಸ್ಕ್ ಇಲಾಖೆ ವಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೊಡಗರಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ರವೀಶ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p><strong>ದಕ್ಷಿಣ ಕೊಡಗಿನಲ್ಲಿ ಅಬ್ಬರಿಸಿದ ಪುನರ್ವಸು ಉಕ್ಕಿ ಹರಿದ ಲಕ್ಷ್ಮಣತೀರ್ಥ</strong> </p><p>ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಪುನರ್ವಸು ಮಳೆಯ ಅಬ್ಬರಕ್ಕೆ ತೊರೆ ತೋಡುಗಳೆಲ್ಲ ಉಕ್ಕಿ ಹರಿಯುತ್ತಿವೆ. ಇಲ್ಲಿನ ಪ್ರಮುಖ ನದಿಯಾದ ಲಕ್ಷ್ಮಣತೀರ್ಥ ಮೈ ದುಂಬಿ ಹರಿಯುತ್ತಿದ್ದು ನೀರು ನದಿ ಬಯಲಿನ ಹಳ್ಳದ ಗದ್ದೆಗಳನ್ನು ಆವರಿಸಿಕೊಂಡಿದೆ. ಕಾನೂರು ಕೊಟ್ಟಗೇರಿ ಬಾಳೆಲೆ ನಿಟ್ಟೂರು ಜಾಗಲೆ ಮಲ್ಲೂರು ಭಾಗದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಕಾನೂರು ಮತ್ತು ಕೊಟ್ಟಗೇರಿ ಭಾಗದಲ್ಲಿ ನದಿ ನೀರು ಬೃಹತ್ ಸಾಗರವನ್ನೇ ಸೃಷ್ಟಿಸಿದೆ. ಮೂಲ ನದಿಯನ್ನೇ ಮರೆಸುವ ರೀತಿಯಲ್ಲಿ ಕಿಲೋಮೀಟರ್ ದೂರದವರೆಗೆ ಪ್ರವಾಹ ಆವರಿಸಿಕೊಂಡಿದೆ. ನಿಟ್ಟೂರು ಜಾಗಲೆ ಭಾಗದಲ್ಲಿಯೂ ನದಿ ಪ್ರವಾಹ ಇನ್ನೂ ಹೆಚ್ಚಿದೆ. ಲಕ್ಷ್ಮಣತೀರ್ಥ ಉಗಮ ಸ್ಥಾನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇರ್ಪು ಜಲಪಾತ ಭೋರ್ಗರೆಯುತ್ತಿದೆ. ಇದರ ನೀರು ಕುರ್ಚಿ ಬಳಿಯಲ್ಲಿ ಲಕ್ಷ್ಮಣತೀರ್ಥ ನದಿ ಸೇರಿ ಹಳ್ಳಕೊಳ್ಳಗಳನ್ನೆಲ್ಲ ಆವರಿಸಿದೆ. ಶ್ರೀಮಂಗಲ ಬಳಿ ಮತ್ತಷ್ಟು ಹೆಚ್ಚಿರುವ ನದಿ ಪ್ರವಾಹ ಶ್ರೀಮಂಗಲ ಹಾಗೂ ನಾಲ್ಕೇರಿ ನಡುವಿನ ಸಂಪರ್ಕ ಸೇತುವೆ ಆವರಿಸಿಕೊಂಡಿದೆ. ಇದರಿಂದ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ದ್ವೀಪದಂತಾದ ನಿಡುಗುಂಬ ಕಾನೂರು ಬಳಿಯ ನಿಡುಗುಂಬ ಗ್ರಾಮವೂ ಲಕ್ಷ್ಮಣತೀರ್ಥ ಪ್ರವಾಹದಿಂದ ದ್ವೀಪದಂತಾಗಿದೆ. ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿದ್ದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಬೆಕ್ಕೆಸೊಡ್ಲೂರು ಕಾನೂರು ನಡುವಿನ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಇಲ್ಲಿನ ವಿಶಾಲವಾದ ಗದ್ದೆ ಬಯಲಿನಲ್ಲಿ ಆವರಿಸಿಕೊಂಡಿರುವ ನದಿ ಪ್ರವಾಹ ಸಾಕ್ಷಾತ್ ಸಮುದ್ರದಂತೆಯೇ ಕಂಡು ಬರುತ್ತಿದೆ. ಗದ್ದೆಯಲ್ಲಿನ ನೀರು ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬುಧವಾರ ಬೆಳಿಗ್ಗೆ ಪೊನ್ನಂಪೇಟೆ ಹಾಗೂ ಕಾನೂರು ನಡುವಿನ ಮಾರ್ಗದಲ್ಲಿ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಕಡಿತಗೊಂಡಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು. ಪೊನ್ನಂಪೇಟೆ ತಾಲ್ಲೂಕಿನ ನದಿಗಳಾದ ಬರಪೊಳೆ ಕೀರೆಹೊಳೆ ಕಕ್ಕಟ್ಟು ಹೊಳೆ ಕೆಕೆಆರ್ ಹೊಳೆಗಳೆಲ್ಲ ತುಂಬಿ ಹರಿಯುತ್ತಿವೆ. ಪೊನ್ನಂಪೇಟೆ ಹುದಿಕೇರಿ ನಡುವಿನ ಬೇಗೂರು ಕೊಲ್ಲಿಗದ್ದೆಗಳಲ್ಲಿ ನೀರು ಆವರಿಸಿ ಕಣ್ಣು ಹಾಯಿಸಿದುದ್ದಕ್ಕೂ ನೀರೆ ಕಂಡು ಬರುತ್ತಿದೆ. ಬಿ.ಶೆಟ್ಟಿಗೇರಿ. ಬಿರುನಾಣಿ ಬೀರುಗ ಮೊದಲಾದ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಬುಧವಾರ ಪುನರ್ವಸು ಮಳೆ ಪುನಃ ಪುನಃ ಬಿರುಸಿನಿಂದ ಸುರಿಯುತ್ತಿದ್ದು, ಇಳೆಯನ್ನು ಅಕ್ಷರಶಃ ತೋಯಿಸಿ, ಸಂಭ್ರಮ ತಂದಿದೆ. ಇದರೊಂದಿಗೆ ತಗ್ಗು ಪ್ರದೇಶಗಳು ಹಾಗೂ ನದಿದಡಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನೂ ತಂದೊಡ್ಡಿದೆ.</p>.<p>ಮಳೆಯೊಂದಿಗೆ ದಾಂಗುಡಿ ಇಡುತ್ತಿರುವ ಬಿರುಸಾದ ಗಾಳಿಗೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಬೀಳುತ್ತಿದ್ದು, ಜನಮಾನಸದಲ್ಲಿ ಆತಂಕವನ್ನೂ ಸೃಷ್ಟಿಸಿದೆ. ಈ ಮಧ್ಯೆ ಹವಾಮಾನ ಇಲಾಖೆ ಇನ್ನೂ ಎರಡು ದಿನಗಳ ಕಾಲ ‘ರೆಡ್ ಅಲರ್ಟ್’ ಘೋಷಿಸಿದೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.</p>.<p>ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಜೋಡುಪಾಲ ಸಮೀಪ ರಸ್ತೆಗೆ ಮಣ್ಣು ಕುಸಿದಿದೆ. ಜೊತೆಗೆ, ಮೇಕೇರಿ ಗ್ರಾಮದಲ್ಲಿ ಅಲ್ಪಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಗುಡ್ಡದ ಮೇಲಿರುವ ನಿವಾಸಿಗಳಲ್ಲಿ ಆತಂಕ ತಂದಿದೆ. ಉಳಿದಂತೆ, ನಾಪೋಕ್ಲು ವ್ಯಾಪ್ತಿಯಲ್ಲಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿದೆ.</p>.<p>ದಕ್ಷಿಣ ಕೊಡಗಿನಲ್ಲೂ ಮಳೆ ವ್ಯಾಪಕವಾಗಿ ಬೀಳುತ್ತಿರುವುದರಿಂದ ಅಲ್ಲೂ ಪ್ರವಾಹದ ಭೀತಿಯನ್ನು ಸೃಷ್ಟಿಸಿದೆ. ಅಲ್ಲಿನ ಬರಪೊಳೆ, ಲಕ್ಷ್ಮಣತೀರ್ಥ, ಕೀರೆಹೊಳೆಗಳು ಭೋರ್ಗರೆಯುತ್ತಿವೆ. ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿಯಿಂದ ನಾಲ್ಕೇರಿಗೆ ಹೋಗುವ ರಸ್ತೆ ಜಲವೃತಗೊಂಡಿವೆ.</p>.<p>ಜಿಲ್ಲೆಯಲ್ಲಿ ಒಂದೇ ದಿನ 11 ಮನೆಗಳು ಕುಸಿದಿದ್ದರೆ, 110 ವಿದ್ಯುತ್ ಕಂಬಗಳು ಧರೆಗುರುಗಳಿವೆ. ಹಲವೆಡೆ ಬಿದ್ದ ಮರಗಳನ್ನು ತಕ್ಷಣವೇ ತೆರವುಗೊಳಿಸಲಾಗುತ್ತಿದೆ.</p>.<p>ವಿರಾಜಪೇಟೆ- ಗೋಣಿಕೊಪ್ಪ ಮುಖ್ಯ ರಸ್ತೆಯ ಹಾತೂರು ಬಳಿ ಮಳೆ ಗಾಳಿಯಿಂದ ಬಿದ್ದಿದ್ದ ಮರದ ತೆರವು ಕಾರ್ಯ ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸುತ್ತಿವೆ.</p>.<p><strong>ನಾಪೋಕ್ಲು; ಹಲವೆಡೆ ರಸ್ತೆ ಸಂಪರ್ಕ ಕಡಿತ</strong></p>.<p>ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಮೀಪದ ಕೊಟ್ಟಮುಡಿ, ಹೊದ್ದೂರು, ಬಲಮುರಿಗಳಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ.</p>.<p>ನಾಪೋಕ್ಲು -ಮೂರ್ನಾಡು ರಸ್ತೆ ಸಂಪರ್ಕ ಬಂದ್ ಆಗಿದೆ. ನಾಪೋಕ್ಲು -ಮೂರ್ನಾಡು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ಪ್ರವಾಹ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.</p>.<p>ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕರಸ್ತೆ, ನಾಪೋಕ್ಲು -ಬಲಮುರಿ ಮಾರ್ಗದ ಮಕ್ಕಿಕಡವು ರಸ್ತೆ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮೂರ್ನಾಡು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ನಾಪೋಕ್ಲು ಕೊಟ್ಟಮುಡಿ, ಕೇಮಾಟ್, ಕುಯ್ಯಂಗೇರಿ, ಹೊದ್ದೂರು ಮಾರ್ಗವಾಗಿ ಮೂರ್ನಾಡಿಗೆ ವಾಹನಗಳು ಸಂಚರಿಸುತ್ತಿವೆ.</p>.<p>ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಿಳಿಗೇರಿ ಬಕ್ಕಬಾಣೆಯ ಸೇತುವೆ ಹಾಗೂ ಬಿಳಿಗೇರಿ ಕಗ್ಗೋಡು ಮಾರ್ಗವಾಗಿ ಬಯಗೊಂಡ ಮನೆ ಬಳಿ ಇರುವ ಸೇತುವೆಯ ಒಂದು ಬದಿ ಮಣ್ಣು ಕುಸಿದಿದ್ದು, ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿ ಮೇಕೇರಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಖಾದರ್ ಮನವಿ ಮಾಡಿದ್ದಾರೆ.</p>.<p><strong>ಸೋಮವಾರಪೇಟೆ; ಚಿಕ್ಕಪುಟ್ಟ ಕುಸಿತಗಳು ಆರಂಭ</strong> </p><p>ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು ಸಾಕಷ್ಟು ಹಾನಿಯೊಂದಿಗೆ ಅಲ್ಲಲ್ಲಿ ಚಿಕ್ಕಪುಟ್ಟ ಬರೆ ಕುಸಿತಗಳು ಆರಂಭವಾಗಿವೆ. ಸಾಕಷ್ಟು ಭಾಗಗಳಲ್ಲಿ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಶೀತ ಗಾಳಿ ಬೀಸುತ್ತಿದ್ದು ಚಳಿಯಿಂದ ಪ್ರಾಣಿಗಳೂ ಪರದಾಡುತ್ತಿವೆ. ಎಲ್ಲದಕ್ಕೂ ವಿದ್ಯುತ್ ನಂಬಿಕೊಂಡಿದ್ದ ಜನರಿಗೆ ವಿದ್ಯುತ್ ಕಡಿತದಿಂದ ಸಾಕಷ್ಟು ತೊಂದರೆಯಾಗಿದೆ. ಸೆಸ್ಕ್ ಸಿಬ್ಬಂದಿ ಹಗಲು ಇರುಳು ಸುರಿಯುವ ಮಳೆಯಲ್ಲಿ ಕೆಲಸ ಮಾಡುತ್ತಿದ್ದರೂ ತಕ್ಷಣಕ್ಕೆ ಸಮಸ್ಯೆ ಪರಿಹಾರವಾಗುವ ಲಕ್ಷಣ ಕಾಣುತ್ತಿಲ್ಲ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವುದರಿಂದ ಅಲ್ಲಿಯ ಸಂಪರ್ಕವೇ ಕಡಿತಗೊಂಡಿದೆ. ಮೊಬೈಲ್ಗಳು ಚಾರ್ಜ್ ಇಲ್ಲದೇ ಸ್ತಬ್ದಗೊಂಡಿವೆ. ‘ರಸ್ತೆಯಲ್ಲಿ ಸಂಚರಿಸಲು ಅಸಾಧ್ಯವಾಗಿದೆ. ಏನೇ ಅನಾಹುತ ನಡೆದರೂ ತಕ್ಷಣಕ್ಕೆ ಮಾಹಿತಿ ಕೊಡಲೂ ಮತ್ತು ಅಲ್ಲಿಂದ ಕರೆತರಲೂ ಸಾಧ್ಯವಿಲ್ಲದಂತಹ ಸ್ಥಿತಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಿದೆ’ ಎಂದು ಅಲ್ಲಿನ ನಿವಾಸಿ ಚಾಮೆರ ಸಂತೋಷ್ ಹೇಳಿದರು. ಕೂಡಲೇ ಇಲ್ಲಿ ಅಧಿಕಾರಿಗಳು ಬಂದು ನರಕ ಸದೃಶ್ಯವಾದ ಜೀವನಕ್ಕೆ ಒಂದು ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದೂ ಅಲ್ಲಿನ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತಾಲ್ಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿಯಲ್ಲಿ ತಡೆಗೋಡೆ ಕುಸಿದು ರಸ್ತೆಗೆ ಸಂಚಕಾರವಾಗಿದ್ದು ವಾಸದ ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ. ಗ್ರಾಮದ ಸುಂದರಮ್ಮ ಅವರಿಗೆ ಸೇರಿದ ವಾಸದ ಮನೆಯ ಪಕ್ಕದಲ್ಲೇ ನಿರ್ಮಿಸಿದ್ದ ತಡೆಗೋಡೆ ಭಾರೀ ಮಳೆಗೆ ಕುಸಿದಿದೆ. ಕಳೆದ 3 ದಿನಗಳ ಹಿಂದಷ್ಟೇ ಸಣ್ಣ ಪ್ರಮಾಣದಲ್ಲಿ ಕುಸಿದಿದ್ದ ತಡೆಗೋಡೆ ಇಂದು ಭಾಗಶಃ ಕುಸಿತಗೊಂಡಿದ್ದು ವಾಸದ ಮನೆಗೆ ಅಪಾಯ ತಂದೊಡ್ಡಿದೆ. ಇದೇ ಸ್ಥಳದಲ್ಲಿ ಶ್ರೀಕೊರಗಜ್ಜ ದೇವಾಲಯವೂ ಇದ್ದು ಪೂಜೆಯ ದಿನಗಳಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಅಬ್ಬೂರುಕಟ್ಟೆಯಿಂದ ಅರೆಯೂರು ಸಂಪರ್ಕಿಸುವ ರಸ್ತೆಯಲ್ಲಿರುವ ತಿರುವಿನಲ್ಲಿ ನಿರ್ಮಿಸಿದ ತಡೆಗೋಡೆ ಮಳೆಗೆ ಕುಸಿದಿದೆ. ತಡೆಗೋಡೆಯ ಕಲ್ಲುಗಳು ರಸ್ತೆಗೆ ಬಿದ್ದಿದ್ದು ಸ್ಥಳೀಯರು ಕಲ್ಲನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಕೊಟ್ಟಿದ್ದಾರೆ. ರಸ್ತೆ ಮನೆ ಹಾಗೂ ದೇವಾಲಯದ ಹಿತದೃಷ್ಟಿಯಿಂದ ತಕ್ಷಣ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ತಾಲ್ಲೂಕಿನ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಬೆಟ್ಟ ಅಯ್ಯಪ್ಪ ಕಾಲೋನಿಯಲ್ಲಿ ಬಾಬು ಮತ್ತು ಜಾನಕಿ ಎಂಬುವವರ ಮನೆ ಮುಂದೆ ಬರೆ ಕುಸಿಯುತ್ತಿದೆ. ಕಳೆದ ವರ್ಷವೇ ಚೌಡ್ಲು ಗ್ರಾಮ ಪಂಚಾಯಿತಿಗೆ ಅಪಾಯದ ಮುನ್ಸೂಚನೆ ಕುರಿತು ಅರ್ಜಿ ಸಲ್ಲಿಸಿ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಪ್ರಸಕ್ತ ಸಾಲಿನ ಮಳೆಯಿಂದಾಗಿ ಬರೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ ಎಂದು ಮನೆಯವರು ತಿಳಿಸಿದ್ದಾರೆ.</p>.<p><strong>ಕೊಡಗರಹಳ್ಳಿಯಲ್ಲಿ ನೀರಿಗೆ ಪರದಾಟ</strong> </p><p>ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಭಾರಿ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳುತ್ತಿರುವುದರಿಂದ ಅಪಾರ ನಷ್ಟ ಸಂಭವಿಸುತ್ತಿದೆ. ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಪೊನ್ನೀರ ರಾಜ ಬೋಜಮ್ಮ ಅಯ್ಯಟಿ ಚಂದ್ರ ಅಯ್ಯಟಿ ಗಣಪತಿ ಅವರ ಮನೆಯ ಬಳಿ ಸುಮಾರು 7ಕ್ಕಿಂತ ಹೆಚ್ಚಿನ ವಿದ್ಯುತ್ ಕಂಬಗಳು ಭಾರಿ ಗಾಳಿ ಮಳೆಗೆ ನೆಲಕ್ಕುರುಳಿವೆ. ಈ ಜಾಗದಲ್ಲಿ ಕೊಡಗರಹಳ್ಳಿ ನಿವಾಸಿಗಳಿಗೆ ಕುಡಿಯುವ ನೀರು ಸಂಪರ್ಕದ ಮೋಟಾರ್ ಇದ್ದು ವಿದ್ಯುತ್ ವ್ಯತ್ಯಯದಿಂದ ಈ ಭಾಗದ ನಿವಾಸಿಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಕೂಡಲೇ ಜನರ ದಿನನಿತ್ಯದ ಬಳಕೆಗೆ ಇರುವ ನೀರು ಪೂರೈಕೆಗಾಗಿ ಸೆಸ್ಕ್ ಇಲಾಖೆ ವಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕೊಡಗರಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ರವೀಶ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p><strong>ದಕ್ಷಿಣ ಕೊಡಗಿನಲ್ಲಿ ಅಬ್ಬರಿಸಿದ ಪುನರ್ವಸು ಉಕ್ಕಿ ಹರಿದ ಲಕ್ಷ್ಮಣತೀರ್ಥ</strong> </p><p>ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಪುನರ್ವಸು ಮಳೆಯ ಅಬ್ಬರಕ್ಕೆ ತೊರೆ ತೋಡುಗಳೆಲ್ಲ ಉಕ್ಕಿ ಹರಿಯುತ್ತಿವೆ. ಇಲ್ಲಿನ ಪ್ರಮುಖ ನದಿಯಾದ ಲಕ್ಷ್ಮಣತೀರ್ಥ ಮೈ ದುಂಬಿ ಹರಿಯುತ್ತಿದ್ದು ನೀರು ನದಿ ಬಯಲಿನ ಹಳ್ಳದ ಗದ್ದೆಗಳನ್ನು ಆವರಿಸಿಕೊಂಡಿದೆ. ಕಾನೂರು ಕೊಟ್ಟಗೇರಿ ಬಾಳೆಲೆ ನಿಟ್ಟೂರು ಜಾಗಲೆ ಮಲ್ಲೂರು ಭಾಗದ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಕಾನೂರು ಮತ್ತು ಕೊಟ್ಟಗೇರಿ ಭಾಗದಲ್ಲಿ ನದಿ ನೀರು ಬೃಹತ್ ಸಾಗರವನ್ನೇ ಸೃಷ್ಟಿಸಿದೆ. ಮೂಲ ನದಿಯನ್ನೇ ಮರೆಸುವ ರೀತಿಯಲ್ಲಿ ಕಿಲೋಮೀಟರ್ ದೂರದವರೆಗೆ ಪ್ರವಾಹ ಆವರಿಸಿಕೊಂಡಿದೆ. ನಿಟ್ಟೂರು ಜಾಗಲೆ ಭಾಗದಲ್ಲಿಯೂ ನದಿ ಪ್ರವಾಹ ಇನ್ನೂ ಹೆಚ್ಚಿದೆ. ಲಕ್ಷ್ಮಣತೀರ್ಥ ಉಗಮ ಸ್ಥಾನ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು ಇರ್ಪು ಜಲಪಾತ ಭೋರ್ಗರೆಯುತ್ತಿದೆ. ಇದರ ನೀರು ಕುರ್ಚಿ ಬಳಿಯಲ್ಲಿ ಲಕ್ಷ್ಮಣತೀರ್ಥ ನದಿ ಸೇರಿ ಹಳ್ಳಕೊಳ್ಳಗಳನ್ನೆಲ್ಲ ಆವರಿಸಿದೆ. ಶ್ರೀಮಂಗಲ ಬಳಿ ಮತ್ತಷ್ಟು ಹೆಚ್ಚಿರುವ ನದಿ ಪ್ರವಾಹ ಶ್ರೀಮಂಗಲ ಹಾಗೂ ನಾಲ್ಕೇರಿ ನಡುವಿನ ಸಂಪರ್ಕ ಸೇತುವೆ ಆವರಿಸಿಕೊಂಡಿದೆ. ಇದರಿಂದ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ದ್ವೀಪದಂತಾದ ನಿಡುಗುಂಬ ಕಾನೂರು ಬಳಿಯ ನಿಡುಗುಂಬ ಗ್ರಾಮವೂ ಲಕ್ಷ್ಮಣತೀರ್ಥ ಪ್ರವಾಹದಿಂದ ದ್ವೀಪದಂತಾಗಿದೆ. ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡಿದ್ದು ಜನರ ಓಡಾಟಕ್ಕೆ ತೊಂದರೆಯಾಗಿದೆ. ಬೆಕ್ಕೆಸೊಡ್ಲೂರು ಕಾನೂರು ನಡುವಿನ ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಇಲ್ಲಿನ ವಿಶಾಲವಾದ ಗದ್ದೆ ಬಯಲಿನಲ್ಲಿ ಆವರಿಸಿಕೊಂಡಿರುವ ನದಿ ಪ್ರವಾಹ ಸಾಕ್ಷಾತ್ ಸಮುದ್ರದಂತೆಯೇ ಕಂಡು ಬರುತ್ತಿದೆ. ಗದ್ದೆಯಲ್ಲಿನ ನೀರು ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬುಧವಾರ ಬೆಳಿಗ್ಗೆ ಪೊನ್ನಂಪೇಟೆ ಹಾಗೂ ಕಾನೂರು ನಡುವಿನ ಮಾರ್ಗದಲ್ಲಿ ಬೃಹತ್ ಮರ ಬಿದ್ದು ರಸ್ತೆ ಸಂಚಾರ ಕಡಿತಗೊಂಡಿತ್ತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು. ಪೊನ್ನಂಪೇಟೆ ತಾಲ್ಲೂಕಿನ ನದಿಗಳಾದ ಬರಪೊಳೆ ಕೀರೆಹೊಳೆ ಕಕ್ಕಟ್ಟು ಹೊಳೆ ಕೆಕೆಆರ್ ಹೊಳೆಗಳೆಲ್ಲ ತುಂಬಿ ಹರಿಯುತ್ತಿವೆ. ಪೊನ್ನಂಪೇಟೆ ಹುದಿಕೇರಿ ನಡುವಿನ ಬೇಗೂರು ಕೊಲ್ಲಿಗದ್ದೆಗಳಲ್ಲಿ ನೀರು ಆವರಿಸಿ ಕಣ್ಣು ಹಾಯಿಸಿದುದ್ದಕ್ಕೂ ನೀರೆ ಕಂಡು ಬರುತ್ತಿದೆ. ಬಿ.ಶೆಟ್ಟಿಗೇರಿ. ಬಿರುನಾಣಿ ಬೀರುಗ ಮೊದಲಾದ ಭಾಗಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>