ಮಡಿಕೇರಿ: ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬೇರೆಯವರನ್ನು ಜೈಲಿಗೆ ಕಳುಹಿಸಲು ಸಂಚು ಮಾಡುತ್ತಿದ್ದರು. ಆದರೆ, ಈಗ ಅವರೇ ಆ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೋ ಏನೋ ಗೊತ್ತಿಲ್ಲ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಈ ಸರ್ಕಾರ ನನ್ನನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸುತ್ತಿದೆ ಎಂದು ಒಂದೆಡೆ ಆರೋಪಿಸುತ್ತಾರೆ. ಮತ್ತೊಂದೆಡೆ ಯಾವುದೇ ತಪ್ಪನ್ನೂ ನಾನು ಮಾಡಿಲ್ಲ ಎನ್ನುತ್ತಾರೆ. ತಪ್ಪು ಮಾಡಿಲ್ಲದವರನ್ನು ಜೈಲಿಗೆ ಕಳುಹಿಸುವುದಾದರೂ ಹೇಗೆ?’ ಎಂದರು.
‘ಕೊಡಗಿನ ಭಾಗಮಂಡಲದಲ್ಲೂ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ಯಾವುದಾದರೂ ಸಂದರ್ಭದಲ್ಲಿ ಸಾಂಕೇತಿಕವಾಗಿ ನಡೆಸಲಾಗುವುದು’ ಎಂದರು.