<p><strong>ಕೊಪ್ಪಳ:</strong> ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಎಳವೆಯಿಂದಲೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p><p>ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಬೆಳಿಗ್ಗೆ ನಡೆದ 5 ಕೆ ಓಟದ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿದರು.</p><p>ಮಕ್ಕಳು ಕೆಟ್ಟ ಅಭ್ಯಾಸದಿಂದ ಹೊರಗಡೆ ಬರಬೇಕು. ದೇವರು ಕೊಟ್ಟ ಸುಂದರ ಜೀವನವನ್ನು ಸಾಧನೆಯ ಮೂಲಕ ಸಾರ್ಥಕಗೊಳಿಸಬೇಕು ಎಂದರು.</p><p>ಮೊಬೈಲ್, ಕಂಪ್ಯೂಟರ್ ಖರೀದಿ ಮಾಡಿದಾಗ ಅದನ್ನು ಹೇಗೆ ಬಳಸಬೇಕು ಎಂದು ಮಾಹಿತಿ ಪತ್ರ ನೀಡಲಾಗಿರುತ್ತದೆ. ಆದರೆ ದೇವರು ಕೊಟ್ಟ ದೇಹವೆಂಬ ಸಾಮರ್ಥ್ಯದ ಬಗ್ಗೆ ನಾವು ಅರಿವು ಹೊಂದಿರುವುದಿಲ್ಲ ಎಂದರು.</p><p>ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉತ್ತಮ ಮಾರ್ಗದಲ್ಲಿ ಸಾಗುವುದು ಪರಿಹಾರವೇ ಹೊರತು ವಾಮಮಾರ್ಗವಲ್ಲ. ನಮ್ಮ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ದೊರೆಯಬೇಕು ಎಂದು ಮಾದಕ ದ್ರವ್ಯದ ಮೊರೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. ಈ ವ್ಯಸನಕ್ಕೆ ಅಂಟಿಕೊಂಡರೆ ಬದುಕು ಹಾಗೂ ಭವಿಷ್ಯ ಹಾಳಾಗುತ್ತದೆ ಎಂದರು.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ ಜಿಲ್ಲೆಯ ಒಂಬತ್ತು ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಸಹವಾಸ ದೋಷ ಅಥವಾ ಯಾವುದೊ ಕೆಟ್ಟ ಸಣ್ಣ ಕಾರಣಕ್ಕೆ ಮಾದಕ ದ್ರವ್ಯ ಸೇವೆನೆಗೆ ತುತ್ತಾಗುತ್ತಿದ್ದಾರೆ ಎಂದರು.</p><p>ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಮಾಹಿತಿ ನೀಡಬೇಕು ಎಂದರು.</p><p>ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ:</strong> ಎಲ್ಲರ ಬದುಕು ಹಾಗೂ ಸುಂದರ ಭವಿಷ್ಯ ರೂಪುಗೊಳ್ಳುವುದು ಉತ್ತಮ ಹವ್ಯಾಸಗಳಿಂದ ಮಾತ್ರ. ಆದ್ದರಿಂದ ಎಳವೆಯಿಂದಲೇ ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.</p><p>ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಬೆಳಿಗ್ಗೆ ನಡೆದ 5 ಕೆ ಓಟದ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿದರು.</p><p>ಮಕ್ಕಳು ಕೆಟ್ಟ ಅಭ್ಯಾಸದಿಂದ ಹೊರಗಡೆ ಬರಬೇಕು. ದೇವರು ಕೊಟ್ಟ ಸುಂದರ ಜೀವನವನ್ನು ಸಾಧನೆಯ ಮೂಲಕ ಸಾರ್ಥಕಗೊಳಿಸಬೇಕು ಎಂದರು.</p><p>ಮೊಬೈಲ್, ಕಂಪ್ಯೂಟರ್ ಖರೀದಿ ಮಾಡಿದಾಗ ಅದನ್ನು ಹೇಗೆ ಬಳಸಬೇಕು ಎಂದು ಮಾಹಿತಿ ಪತ್ರ ನೀಡಲಾಗಿರುತ್ತದೆ. ಆದರೆ ದೇವರು ಕೊಟ್ಟ ದೇಹವೆಂಬ ಸಾಮರ್ಥ್ಯದ ಬಗ್ಗೆ ನಾವು ಅರಿವು ಹೊಂದಿರುವುದಿಲ್ಲ ಎಂದರು.</p><p>ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉತ್ತಮ ಮಾರ್ಗದಲ್ಲಿ ಸಾಗುವುದು ಪರಿಹಾರವೇ ಹೊರತು ವಾಮಮಾರ್ಗವಲ್ಲ. ನಮ್ಮ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ದೊರೆಯಬೇಕು ಎಂದು ಮಾದಕ ದ್ರವ್ಯದ ಮೊರೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ. ಈ ವ್ಯಸನಕ್ಕೆ ಅಂಟಿಕೊಂಡರೆ ಬದುಕು ಹಾಗೂ ಭವಿಷ್ಯ ಹಾಳಾಗುತ್ತದೆ ಎಂದರು.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿ ಜಿಲ್ಲೆಯ ಒಂಬತ್ತು ಸಾವಿರ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಸಹವಾಸ ದೋಷ ಅಥವಾ ಯಾವುದೊ ಕೆಟ್ಟ ಸಣ್ಣ ಕಾರಣಕ್ಕೆ ಮಾದಕ ದ್ರವ್ಯ ಸೇವೆನೆಗೆ ತುತ್ತಾಗುತ್ತಿದ್ದಾರೆ ಎಂದರು.</p><p>ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಅಪಾಯದ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಮಾಹಿತಿ ನೀಡಬೇಕು ಎಂದರು.</p><p>ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>