ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ಸಣ್ಣ ಪಕ್ಷಗಳಿಂದ ಕಾಣದ ದೊಡ್ಡ ಹೋರಾಟ

ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ, ಪ್ರಮುಖ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ
Published : 8 ಏಪ್ರಿಲ್ 2024, 6:19 IST
Last Updated : 8 ಏಪ್ರಿಲ್ 2024, 6:19 IST
ಫಾಲೋ ಮಾಡಿ
Comments
ರಾಮಾಂಜನಪ್ಪ ಆಲ್ದಳ್ಳಿ
ರಾಮಾಂಜನಪ್ಪ ಆಲ್ದಳ್ಳಿ
ಈಗಿನ ಚುನಾವಣೆಗಳಲ್ಲಿ ಹಣ ತೋಳ್ಬಲದ ಶಕ್ತಿ ಜಾಸ್ತಿಯಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುತ್ತಿವೆ. ಈ ಬಾರಿ ಸ್ಪರ್ಧೆ ಮಾಡದೇ ಕೋಮುವಾದಿ ಬಿಜೆಪಿ ಸೋಲಿಸಲು ನಿರ್ಧರಿಸಲಾಗಿದೆ.
ಡಿ.ಎಚ್‌. ಪೂಜಾರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ
ದೊಡ್ಡ ಪಕ್ಷಗಳ ಎದುರು ರಾಜಕೀಯವಾಗಿ ಸಣ್ಣ ಪಕ್ಷಗಳಿಗೆ ಹೋರಾಟ ಈಗಿನ ದಿನಮಾನಗಳಲ್ಲಿ ಕಷ್ಟವಾದರೂ ಹೋರಾಟವನ್ನಂತೂ ನಿಲ್ಲಿಸಿಲ್ಲ. ಜನಪರ ಚಳವಳಿಗಳ ಮೂಲಕ ಅಧಿಕಾರದ ಗದ್ದುಗೆಯೇರಿದ ಪಕ್ಷಗಳಿಗೆ ಬಿಸಿ ಮುಟ್ಟಿಸುವ ಕೆಲಸ ನಿರಂತರ.
ರಾಮಾಂಜನಪ್ಪ ಆಲ್ದಳ್ಳಿ ಎಸ್‌ಯುಸಿಐ (ಕಮ್ಯುನಿಸ್ಟ್‌) ರಾಜ್ಯ ಕಾರ್ಯದರ್ಶಿ
ಪಕ್ಷೇತರರಾಗಿ ಗೆಲುವು ಪಡೆದಿದ್ದ ಮೊದಲ ಸಂಸದ
ಚುನಾವಣಾ ಆರಂಭದಿಂದಲೂ ಕೊಪ್ಪಳ ಲೋಕಸಭಾ ಕ್ಷೇತ್ರ ವಿಭಿನ್ನ ಇತಿಹಾಸ ಹೊಂದಿದೆ. 1952ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಭಾವ ವ್ಯಾಪಕವಾಗಿದ್ದ ಕಾಲದಲ್ಲಿಯೂ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಗೆಲುವು ಪಡೆದಿದ್ದರು. ಇವರೇ ಈ ಕ್ಷೇತ್ರದ ಮೊದಲ ಸಂಸದ ಎನ್ನುವ ಹೆಮ್ಮೆ ಹೊಂದಿದ್ದಾರೆ. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಭಾ.ರಾ.ಕಾಂ. ಪಕ್ಷದ ಮಾಧವರಾವ್‌ ಅನ್ವರಿ ಅವರನ್ನು ಮಣಿಸಿದ್ದರು. 1957ರ ಎರಡನೇ ಚುನಾವಣೆಯಲ್ಲಿ ಸಂಗಣ್ಣ ಅಗಡಿ ಅವರು ಗೆಲುವು ಪಡೆದಿದ್ದರೂ ಪಕ್ಷೇತರರಾಗಿ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಶಿವಮೂರ್ತಿಸ್ವಾಮಿ ಅವರು 10467 ಮತಗಳಿಂದ ಮಾತ್ರ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT