ಪಕ್ಷೇತರರಾಗಿ ಗೆಲುವು ಪಡೆದಿದ್ದ ಮೊದಲ ಸಂಸದ
ಚುನಾವಣಾ ಆರಂಭದಿಂದಲೂ ಕೊಪ್ಪಳ ಲೋಕಸಭಾ ಕ್ಷೇತ್ರ ವಿಭಿನ್ನ ಇತಿಹಾಸ ಹೊಂದಿದೆ. 1952ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಭಾವ ವ್ಯಾಪಕವಾಗಿದ್ದ ಕಾಲದಲ್ಲಿಯೂ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಗೆಲುವು ಪಡೆದಿದ್ದರು. ಇವರೇ ಈ ಕ್ಷೇತ್ರದ ಮೊದಲ ಸಂಸದ ಎನ್ನುವ ಹೆಮ್ಮೆ ಹೊಂದಿದ್ದಾರೆ. ಅವರು ತಮ್ಮ ಮೊದಲ ಚುನಾವಣೆಯಲ್ಲಿ ಭಾ.ರಾ.ಕಾಂ. ಪಕ್ಷದ ಮಾಧವರಾವ್ ಅನ್ವರಿ ಅವರನ್ನು ಮಣಿಸಿದ್ದರು. 1957ರ ಎರಡನೇ ಚುನಾವಣೆಯಲ್ಲಿ ಸಂಗಣ್ಣ ಅಗಡಿ ಅವರು ಗೆಲುವು ಪಡೆದಿದ್ದರೂ ಪಕ್ಷೇತರರಾಗಿ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಶಿವಮೂರ್ತಿಸ್ವಾಮಿ ಅವರು 10467 ಮತಗಳಿಂದ ಮಾತ್ರ ಸೋತಿದ್ದರು.