ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Diwali 2024: ದೀಪ ಬೆಳಗಲಿ, ಪಟಾಕಿ ದೂರವಿರಲಿ..

Published : 28 ಅಕ್ಟೋಬರ್ 2024, 6:35 IST
Last Updated : 28 ಅಕ್ಟೋಬರ್ 2024, 6:35 IST
ಫಾಲೋ ಮಾಡಿ
Comments
’ ಮಕ್ಕಳಿಗೆ ನಾವು ಈಗ ಹಟ ಮಾಡುವುದನ್ನು ಕಲಿಸಿದ್ರೆ ಮುಂದೆ ಅವರ ಭವಿಷ್ಯಕ್ಕೆ ನಾವೇ ಕಲ್ಲು ಹಾಕಿದಂತೆ. ಒಂದು ಸಣ್ಣ ಪಟಾಕಿಯಿಂದ ಇಡೀ ಜೀವನವೇ ನಾಶವಾಗುತ್ತೆ. ಈಗಾಗಲೇ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಿದೆ. ಪಟಾಕಿ ಸಿಡಿಸುವುದೇ ಇಲ್ಲ.
ಚಂದಾ ಮೈಸೂರು
ನನ್ನ ಮಕ್ಕಳಿಗಂತು ಪಟಾಕಿ ತೆಗೆದುಕೊಡುವುದಿಲ್ಲ. ಹಾವಿನ ಗುಳಿಗೆ ಸುರ್ ಸುರ್ ಬತ್ತಿ ಕೊಡಿಸುತ್ತೇನೆ. ಪಟಾಕಿ ತಯಾರಿಸುವಾಗ ರಂಜಕ ಮಣ್ಣು ಕಲ್ಲು ಎಲ್ಲವನ್ನೂ ಪುಡಿ ಮಾಡಿ ಹಾಕಿರ್ತಾರೆ ಅದು ಮಕ್ಕಳಿಗೆ ಗೊತ್ತಾಗೋದಿಲ್ಲ. ಅದಕ್ಕಾಗಿ ನನ್ನ ಮಕ್ಕಳಿಗೆ ಪಟಾಕಿ ಕೊಡಿಸದೇ ಇರಲು ನಿರ್ಧರಿಸಿರುವೆ.
ಗುಜ್ಜನಾಯಕ ಜಯಪುರ
ಹಬ್ಬ ಸರಳವಾಗಿಬೇಕು. ಶಬ್ದ ಮಾಡುವ ಪಟಾಕಿಯನ್ನು ನನ್ನ ಮೊಮ್ಮಕ್ಕಳಿಗೆ ತೆಗೆದುಕೊಡುವುದಿಲ್ಲ. ಅನಾಹುತಗಳ ಬಗ್ಗೆ ತಿಳಿದು ಪಟಾಕಿ ಸಿಡಿಸುವುದನ್ನೇ ನಿಲ್ಲಿಸಿರುವೆ.
ಮೂರ್ತಿ ವೀರನಗೆರೆ ಮೈಸೂರು
ಮಕ್ಕಳು ಎಷ್ಟು ಹೇಳಿದರೂ ಕೇಳುವುದಿಲ್ಲ. ಪಟಾಕಿ ಹೊಗೆ ಕರಳು ಸೇರುವುದು ಅಪಾಯ. ನಾವು ಮಕ್ಕಳಾಗಿದ್ದಾಗ ಹಟ ಮಾಡ್ತಾ ಇದ್ದೆವು. ಆದರೆ ಕಣ್ಣಿಗೆ ಬಿದ್ದರೆ ಅಪಾಯ ಗ್ಯಾರಂಟಿ. ಏನೋ ಅವರು ಕೇಳಿದ್ರೆ ಸುರ್ ಸುರ್ ಬತ್ತಿ ವಿಷ್ಣು ಚಕ್ರ ತೆಗೆದುಕೊಡುವೆ.
ಕೆಂಡಗಣ್ಣಸ್ವಾಮಿ ಧನಗಳ್ಳಿ ಮೈಸೂರು
ನಾನು ಪಟಾಕಿ ಹಾರಿಸಿದ್ರೆ ಹೊರಗಡೆ ಹೋಗುವುದೇ ಇಲ್ಲ. ಅದು ಡೇಂಜರ್. ತಾತ ಹೇಳಿದಂಗೆ ಕಣ್ಣಿಗೆ ತೊಂದರೆ ಆಗುತ್ತೆ. ಅದಕ್ಕೆ ಪಟಾಕಿ ಬೇಡ. ಸುರ್ ಸುರ್ ಬತ್ತಿ ಸಾಕು
ಕೆಂಡಗಣ್ಣಪ್ಪ 8ನೇ ತರಗತಿ ವಿದ್ಯಾರ್ಥಿ ಧನಗಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT