<p><strong>ಕವಿತಾಳ:</strong> ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ.</p>.<p>ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ ರೈತರು ಕಳೆ ತೆಗೆಯುವುದು ಮತ್ತು ಮಳೆ ವಿಳಂಬದಿಂದ ಸರಿಯಾಗಿ ನಾಟಿಯಾಗದ ಕಡೆ ಮರು ಬಿತ್ತನೆಯಲ್ಲಿ ತೊಡಗಿದ್ದಾರೆ.</p>.<p>ಕಳೆದ 20 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ ಇದೀಗ ಒಂದು ಅಡಿ ಎತ್ತರಕ್ಕೆ ಬೆಳೆದಿದೆ. ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಕಳೆ ಬೆಳೆಯುತ್ತಿದ್ದು, ರೈತರು ಕಿರು ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದ ದೃಶ್ಯ ಕಂಡುಬರುತ್ತಿದೆ.</p>.<p>‘ಮಳೆ ವಿಳಂಬವಾಗಿದ್ದರೂ ಹತ್ತಿ ನಾಟಿಯಾಗಿದೆ. ಇದೀಗ ಮಳೆಯಿಂದ ಜಮೀನು ಹಸಿಯಾಗಿ ಕಸ ಕಾಣಿಸಿಕೊಂಡಿದೆ. ಕಳೆ ತೆಗೆದು ರಸಗೊಬ್ಬರ ಹಾಕಬೇಕಿದೆ’ ಎಂದು ಗೊಲ್ದಿನ್ನಿ ಗ್ರಾಮದ ರೈತ ಹನುಮೇಶ ಹೇಳಿದರು.</p>.<p>‘ಹತ್ತು ದಿನಗಳ ಹಿಂದೆ ತೊಗರಿ ಬಿತ್ತನೆ ಮಾಡಲಾಗಿತ್ತು. ಮಳೆ ಬಾರದ ಕಾರಣ ಬಹುತೇಕ ಐದು ಎಕರೆ ಜಮೀನಿನಲ್ಲಿ ತೊಗರಿ ಮೊಳಕೆ ಒಡೆದಿಲ್ಲ. ಈಗ ಭೂಮಿ ಹಸಿಯಾಗಿದ್ದು ಮರು ನಾಟಿ ಮಾಡುತ್ತಿದ್ದೇವೆ’ ಎಂದು ಹಣಿಗಿ ಗ್ರಾಮದ ರೈತ ಬಸವರಾಜ ಹೇಳಿದರು.</p>.<p>‘ಇನ್ನೂ ಸಾಕಷ್ಟು ಮಳೆಯ ಅಗತ್ಯವಿದೆ. ನೀರು ಇಂಗಿಸಿಕೊಳ್ಳದ ಕೆಲ ಜಮೀನುಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ ತೊಗರಿ ನಾಟಿಯೇ ಇಲ್ಲ. ಈಗ ಮಳೆ ಬರುತ್ತಿದ್ದು, ಮತ್ತೊಮ್ಮೆ ತೊಗರಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಬೀಜ, ಕೂಲಿ ಕಾರ್ಮಿಕರು ಸೇರಿದಂತೆ ಬರೀ ಬಿತ್ತನೆಗೆ ಪ್ರತಿ ಎಕರೆಗೆ ₹10-₹15 ಸಾವಿರ ಖರ್ಚು ಮಾಡಿದ್ದೇವೆ. ಈಗಲಾದರೂ ಸಮೃದ್ಧ ಮಳೆಯಾದರೆ ಅನುಕೂಲವಾಗುತ್ತದೆ’ ಎಂದು ರೈತ ಹಂಪಣ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಆಗಾಗ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ.</p>.<p>ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಿದ ರೈತರು ಕಳೆ ತೆಗೆಯುವುದು ಮತ್ತು ಮಳೆ ವಿಳಂಬದಿಂದ ಸರಿಯಾಗಿ ನಾಟಿಯಾಗದ ಕಡೆ ಮರು ಬಿತ್ತನೆಯಲ್ಲಿ ತೊಡಗಿದ್ದಾರೆ.</p>.<p>ಕಳೆದ 20 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಹತ್ತಿ ಇದೀಗ ಒಂದು ಅಡಿ ಎತ್ತರಕ್ಕೆ ಬೆಳೆದಿದೆ. ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ಕಳೆ ಬೆಳೆಯುತ್ತಿದ್ದು, ರೈತರು ಕಿರು ಕುಂಟೆ ಹೊಡೆದು ಕಳೆ ತೆಗೆಯುತ್ತಿದ್ದ ದೃಶ್ಯ ಕಂಡುಬರುತ್ತಿದೆ.</p>.<p>‘ಮಳೆ ವಿಳಂಬವಾಗಿದ್ದರೂ ಹತ್ತಿ ನಾಟಿಯಾಗಿದೆ. ಇದೀಗ ಮಳೆಯಿಂದ ಜಮೀನು ಹಸಿಯಾಗಿ ಕಸ ಕಾಣಿಸಿಕೊಂಡಿದೆ. ಕಳೆ ತೆಗೆದು ರಸಗೊಬ್ಬರ ಹಾಕಬೇಕಿದೆ’ ಎಂದು ಗೊಲ್ದಿನ್ನಿ ಗ್ರಾಮದ ರೈತ ಹನುಮೇಶ ಹೇಳಿದರು.</p>.<p>‘ಹತ್ತು ದಿನಗಳ ಹಿಂದೆ ತೊಗರಿ ಬಿತ್ತನೆ ಮಾಡಲಾಗಿತ್ತು. ಮಳೆ ಬಾರದ ಕಾರಣ ಬಹುತೇಕ ಐದು ಎಕರೆ ಜಮೀನಿನಲ್ಲಿ ತೊಗರಿ ಮೊಳಕೆ ಒಡೆದಿಲ್ಲ. ಈಗ ಭೂಮಿ ಹಸಿಯಾಗಿದ್ದು ಮರು ನಾಟಿ ಮಾಡುತ್ತಿದ್ದೇವೆ’ ಎಂದು ಹಣಿಗಿ ಗ್ರಾಮದ ರೈತ ಬಸವರಾಜ ಹೇಳಿದರು.</p>.<p>‘ಇನ್ನೂ ಸಾಕಷ್ಟು ಮಳೆಯ ಅಗತ್ಯವಿದೆ. ನೀರು ಇಂಗಿಸಿಕೊಳ್ಳದ ಕೆಲ ಜಮೀನುಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ ತೊಗರಿ ನಾಟಿಯೇ ಇಲ್ಲ. ಈಗ ಮಳೆ ಬರುತ್ತಿದ್ದು, ಮತ್ತೊಮ್ಮೆ ತೊಗರಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಬೀಜ, ಕೂಲಿ ಕಾರ್ಮಿಕರು ಸೇರಿದಂತೆ ಬರೀ ಬಿತ್ತನೆಗೆ ಪ್ರತಿ ಎಕರೆಗೆ ₹10-₹15 ಸಾವಿರ ಖರ್ಚು ಮಾಡಿದ್ದೇವೆ. ಈಗಲಾದರೂ ಸಮೃದ್ಧ ಮಳೆಯಾದರೆ ಅನುಕೂಲವಾಗುತ್ತದೆ’ ಎಂದು ರೈತ ಹಂಪಣ್ಣ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>