<p><strong>ಬ್ರಹ್ಮಾವರ</strong>: ಕೃಷಿಮೇಳದಲ್ಲಿ ಬೈಂದೂರು ಪರಿಸರದ ರೈತರ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಮಳಿಗೆ ಗಮನ ಸೆಳೆಯುತ್ತಿದೆ.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಂಗಳೂರಿನ ನಬಾರ್ಡ್ ಸಹಯೋಗದೊಂದಿಗೆ, ಕ್ಷೀಣಿಸುತ್ತಿರುವ ಭತ್ತ ಕೃಷಿ ಉಳಿಸುವ ದೃಷ್ಟಿಯಿಂದ ರೈತರನ್ನು ಸಂಘಟಿಸಿ, ಯಂತ್ರಗಳನ್ನು ಬಳಸಿ ಭತ್ತ ಕೃಷಿ ಮಾಡುವಂತೆ ಮಾಹಿತಿ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಕ್ಕೂಟವನ್ನು ಆರಂಭಿಸಲಾಗಿತ್ತು. ಈ ಮಳಿಗೆಯಲ್ಲಿ ಸ್ಥಳೀಯ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.</p>.<p>ಸಂಘದ ಸಿಇಒ ರಾಜೇಂದ್ರ ಜಿ. ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 700 ಸದಸ್ಯರುಳ್ಳ ಈ ರೈತರ ಸಂಘ ಸಣ್ಣ, ಅತಿ ಸಣ್ಣ ರೈತರಿಂದ ನರ್ಸರಿ ಗಿಡಗಳು, ಕುಚ್ಚಲಕ್ಕಿ, ಅಡಿಕೆ ತಟ್ಟೆ, ಊದುಬತ್ತಿ, ದಿನಬಳಕೆಯ ವಸ್ತುಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದೆ. ಪ್ರತಿಯೊಬ್ಬ ರೈತ ಸದಸ್ಯರಿಂದ ₹1 ಸಾವಿರ ಬಂಡವಾಳವನ್ನಾಗಿಸಿಕೊಂಡು ಇಂದು ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಗಮನಾರ್ಹ. ಬಂದ ಲಾಭವನ್ನು ರೈತರಿಗೆ ನೀಡಿ, ರಿಯಾಯಿತಿ ದರದಲ್ಲಿ ಭತ್ತ ನಾಟಿ, ಕಟಾವಿಗೆ ಯಂತ್ರೋಪಕರಣಗಳನ್ನು ನೀಡುತ್ತಿದೆ. ಉತ್ತಮ ದರದಲ್ಲಿ ಭತ್ತ ಖರೀದಿಯೂ ಸಂಘದಿಂದ ಆಗುತ್ತಿದೆ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಚಂದ್ರ ಪೂಜಾರಿ, ಪ್ರಬಂಧಕ ಕಿರಣ್, ಕಚೇರಿ ಸಹಾಯಕ ನಿತಿನ್, ವ್ಯಾಪ್ತಿಯ ರೈತರ ಸಹಯೋಗದೊಂದಿಗೆ ನಡೆಯುತ್ತಿರುವ ಸಂಘದ ಚಟುವಟಿಕೆಗಳು ಇತರೆ ಕೃಷಿಕರಿಗೂ ಮಾದರಿಯಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ಕೃಷಿಮೇಳದಲ್ಲಿ ಬೈಂದೂರು ಪರಿಸರದ ರೈತರ ಮೂಕಾಂಬಿಕ ಭತ್ತ ಬೆಳೆಗಾರರ ಒಕ್ಕೂಟದ ಮಳಿಗೆ ಗಮನ ಸೆಳೆಯುತ್ತಿದೆ.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಂಗಳೂರಿನ ನಬಾರ್ಡ್ ಸಹಯೋಗದೊಂದಿಗೆ, ಕ್ಷೀಣಿಸುತ್ತಿರುವ ಭತ್ತ ಕೃಷಿ ಉಳಿಸುವ ದೃಷ್ಟಿಯಿಂದ ರೈತರನ್ನು ಸಂಘಟಿಸಿ, ಯಂತ್ರಗಳನ್ನು ಬಳಸಿ ಭತ್ತ ಕೃಷಿ ಮಾಡುವಂತೆ ಮಾಹಿತಿ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಕ್ಕೂಟವನ್ನು ಆರಂಭಿಸಲಾಗಿತ್ತು. ಈ ಮಳಿಗೆಯಲ್ಲಿ ಸ್ಥಳೀಯ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.</p>.<p>ಸಂಘದ ಸಿಇಒ ರಾಜೇಂದ್ರ ಜಿ. ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 700 ಸದಸ್ಯರುಳ್ಳ ಈ ರೈತರ ಸಂಘ ಸಣ್ಣ, ಅತಿ ಸಣ್ಣ ರೈತರಿಂದ ನರ್ಸರಿ ಗಿಡಗಳು, ಕುಚ್ಚಲಕ್ಕಿ, ಅಡಿಕೆ ತಟ್ಟೆ, ಊದುಬತ್ತಿ, ದಿನಬಳಕೆಯ ವಸ್ತುಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತಿದೆ. ಪ್ರತಿಯೊಬ್ಬ ರೈತ ಸದಸ್ಯರಿಂದ ₹1 ಸಾವಿರ ಬಂಡವಾಳವನ್ನಾಗಿಸಿಕೊಂಡು ಇಂದು ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವುದು ಗಮನಾರ್ಹ. ಬಂದ ಲಾಭವನ್ನು ರೈತರಿಗೆ ನೀಡಿ, ರಿಯಾಯಿತಿ ದರದಲ್ಲಿ ಭತ್ತ ನಾಟಿ, ಕಟಾವಿಗೆ ಯಂತ್ರೋಪಕರಣಗಳನ್ನು ನೀಡುತ್ತಿದೆ. ಉತ್ತಮ ದರದಲ್ಲಿ ಭತ್ತ ಖರೀದಿಯೂ ಸಂಘದಿಂದ ಆಗುತ್ತಿದೆ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಚಂದ್ರ ಪೂಜಾರಿ, ಪ್ರಬಂಧಕ ಕಿರಣ್, ಕಚೇರಿ ಸಹಾಯಕ ನಿತಿನ್, ವ್ಯಾಪ್ತಿಯ ರೈತರ ಸಹಯೋಗದೊಂದಿಗೆ ನಡೆಯುತ್ತಿರುವ ಸಂಘದ ಚಟುವಟಿಕೆಗಳು ಇತರೆ ಕೃಷಿಕರಿಗೂ ಮಾದರಿಯಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>