ಹಂಪಿ ಸಮೀಪದ ವೆಂಕಟಾಪುರದಿಂದ ತುಂಗಭದ್ರಾ ನದಿಯ ನೀರನ್ನು ಎತ್ತಿ 22 ಕೆರೆಗಳನ್ನು ತುಂಬಿಸಿ ಕೃಷಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದೇ ಪಿ.ಕೆ.ಹಳ್ಳಿ ಏತ ನೀರಾವರಿ ಯೋಜನೆಯ ಗುರಿ. ಇದರ ಯೋಜನಾ ವೆಚ್ಚ ₹243 ಕೋಟಿ. ಮಳೆಯಾಶ್ರಿತ 13ಕ್ಕೂ ಅಧಿಕ ಗ್ರಾಮಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ.
ಮೈ ಕೊಡವಿ ಎದ್ದರೇ ಶಾಸಕರು?
ಶಾಸಕ ಎಚ್.ಆರ್.ಗವಿಯಪ್ಪ ಅವರು ಕಳೆದ ಒಂದೂವರೆ ವರ್ಷದಿಂದ ಜನರ ನಡುವೆ ಅಷ್ಟಾಗಿ ಕಾಣಿಸಿದ್ದು ಇಲ್ಲ. ಆದರೆ ಈಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಚುರುಕಿನಿಂದ ಓಡಾಡುತ್ತಿದ್ದು ಶನಿವಾರ ಬಹಳ ಲವಲವಿಕೆಯಿಂದ ಕಾಣಿಸಿದರು. ‘ಪಿ.ಕೆ.ಹಳ್ಳಿ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡುತ್ತೇನೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಡಾಲ್ಮಿಯ ಕಾರ್ಮಿಕರಿಗೆ ಮತ್ತು ಗಣಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳು ಕಟ್ಟಿಸಿಕೊಡುವ ಯೋಜನೆ ಜಾರಿಗೆ ತರಲಾಗುವುದು’ ಎಂದು ಅವರು ಭರವಸೆ ನೀಡಿದರು.