ಪೊಲೀಸ್ ಅಧಿಕಾರಿಯಾಗಿ, ಕೌಟಂಬಿಕ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ರಮೇಶ್ ಅರವಿಂದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡು, ಹೊಡೆದಾಟ, ಅಬ್ಬರಿಸುವಿಕೆಯೊಂದಿಗೆ ರಾಧಿಕಾ ಭೈರಾದೇವಿಯಾಗಿ ಮಾಸ್ ಅವತಾರ ತಳೆದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ ಆಗಿ ರಂಗಾಯಣ ರಘು ಅಲ್ಲಲ್ಲಿ ನಗಿಸುವ ಯತ್ನ ಮಾಡುತ್ತಾರೆ. ಅಘೋರಿಗಳ ಗುರುವಾಗಿ ರವಿಶಂಕರ್ ನೋಟದಿಂದಲೇ ಭಯ ಹುಟ್ಟಿಸುತ್ತಾರೆ. ಅಘೋರಿಗಳ ಗುಹೆಯ ಭಾಗದ ಛಾಯಾಚಿತ್ರಗ್ರಹಣ ಸೊಗಸಾಗಿದೆ. ಭೈರಾಗಿಗಳ ವಸ್ತ್ರಾಲಂಕಾರ, ಮೇಕಪ್ ಗಮನ ಸೆಳೆಯುತ್ತದೆ. ಎರಡು ಹಾಡು ಸೊಗಸಾಗಿದೆ. ಹಿನ್ನೆಲೆ ಸಂಗೀತದ ಅಬ್ಬರ ಸ್ವಲ್ಪ ಕಡಿಮೆಯಾಗಬಹುದಿತ್ತು.