'ಬಂಧಿತ ಹಿಂದೂ ಕಾರ್ಯಕರ್ತ ಆಟೊ ಚಾಲಕನಾಗಿದ್ದು, ಸದ್ಯ ಅವರ ಕೈ ಆಪರೇಷನ್ ಮಾಡಲಾಗಿದೆ. ಮಾನವೀಯತೆ ಇಲ್ಲದೆ ದರ್ಪ ತೋರಿಸಿದ್ದಾರೆ. 31 ವರ್ಷಗಳ ಕಾಲ ಸುಮ್ಮನಿದ್ದ ಪೊಲೀಸರಿಗೆ, ರಾಮ ಮಂದಿರ ಉದ್ಘಾಟನೆ ಸಮಯದಲ್ಲಿಯೇ ಅವನನ್ನು ಬಂಧಿಸಬೇಕಿತ್ತೆ? ಇಷ್ಟು ವರ್ಷ ಪೊಲೀಸರು ಏನು ಮಾಡುತ್ತಿದ್ದರು' ಎಂದು ಪ್ರಶ್ನಿಸಿದರು.
ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, 'ಪೊಲೀಸರು ಕೈಯ್ಯಾರೆ ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್'ಸ್ಪೆಕ್ಟರ್ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. 31 ವರ್ಷಗಳ ನಂತರ ಸಾಮಾನ್ಯ ಹಿಂದೂ ಕಾರ್ಯಕರ್ತರನ್ನು ಬಂಧಿಸಿ, ಹಿಂದುಗಳನ್ನು ಹೆದರಿಸುತ್ತಿದ್ದಾರೆ. ಅಮಾಯಕರನ್ನು ಬಂಧಿಸಬೇಡಿ ಎನ್ನುವುದು ನಮ್ಮ ಉದ್ದೇಶ' ಎಂದರು.
ಸುಬ್ರಹ್ಮಣ್ಯ ಶಿರಕೋಳ, ರಂಗಾ ಕಟಾರೆ, ರಮೇಶ ಕದಂ, ಅನೂಪ್ ಬಿಜವಾಡ, ರಾಜು ಕುಂದನಹಳ್ಳಿ, ಮಂಜು ಕಲಾಲ, ಶಿವಾನಂದ ಜತ್ತಿಗೇರಿ, ರಾಜು ಜರತಾರಘರ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದಾರೆ.