ಕೇದಾರನಾಥ ಹಾಗೂ ಯಮುನೇತ್ರಿ ದೇಗುಲಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುತ್ತದೆ. ಗಂಗೋತ್ರಿ ದೇಗುಲ ಮಧ್ಯಾಹ್ನ 12.20ಕ್ಕೆ ತೆರೆಯಲಿದೆ ಎಂದು ಸಮಿತಿ ತಿಳಿಸಿದೆ.
ಚಾರ್ಧಾಮದ ಮತ್ತೊಂದು ದೇಗುಲ ಬದರಿನಾಥ, ಮೇ 12ರಂದು ಬೆಳಿಗ್ಗೆ ತೆರೆಯಲಿದೆ. ಕೇದಾರನಾಥ ದೇಗುಲವನ್ನು 20 ಕ್ವಿಂಟಲ್ ಹೂವುಗಳಿಂದ ಸಿಂಗರಿಸಲಾಗುವುದು ಎಂದು ಬದರಿನಾಥ–ಕೇದಾರನಾಥ ದೇಗುಲ ಸಮಿತಿಯ ಮಾಧ್ಯಮ ಉಸ್ತುವಾರಿ ಹರೀಶ್ ಗೌರ್ ತಿಳಿಸಿದ್ದಾರೆ.