ತಮ್ಮ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ, 2009ರಲ್ಲಿ ಕಾಂಗ್ರೆಸ್ಸಿನ ಯುವ ಘಟಕವನ್ನು ಸೇರಿದರು. ಪಶ್ಚಿಮ ಬಂಗಾಳ ಘಟಕದಲ್ಲಿ ಕಾಗ್ರೆಸ್ ನಾಯಕ ಸುಬ್ರತ ಮುಖರ್ಜಿ ಅವರ ಜೊತೆ ಕೆಲಸ ಮಾಡಿದರು. 2010ರಲ್ಲಿ ಮಹುವಾ ಮತ್ತು ಮುಖರ್ಜಿ ಅವರು ಟಿಎಂಸಿ ಸೇರಿದರು.
2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತಮ್ಮ ಭಾಷಣ ಹಾಗೂ ಚರ್ಚಾ ಕೌಶಲದ ಕಾರಣದಿಂದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರತಿನಿಧಿಸುವ ಪ್ರಮುಖ ವ್ಯಕ್ತಿಯಾಗಿ ಬೆಳೆದರು. 2019ರಲ್ಲಿ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯ ಸಾಧಿಸಿದರು.
ಮನಸ್ಸಿನಲ್ಲಿ ಇದ್ದುದನ್ನು ನೇರವಾಗಿ ಹೇಳುವ ಮಹುವಾ ಅವರು, ಸಂಘಟನೆಯ ವಿಚಾರದಲ್ಲಿ ಪಕ್ಷದ ಪ್ರಮುಖರ ನಿಲುವಿಗೆ ಭಿನ್ನವಾದ ಮಾತು ಆಡುತ್ತಿದ್ದರು. ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ಮಹುವಾ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ.
ಕಳೆದ ಎರಡು ವರ್ಷಗಳಲ್ಲಿ ಮಹುವಾ ಅವರ ಹೆಸರು ವಿವಾದಗಳಿಗೆ ಪರ್ಯಾಯ ಪದವಾಗಿತ್ತು. ಪತ್ರಕರ್ತರನ್ನು ‘ಎರಡು ಪೈಸೆ ಪತ್ರಕರ್ತರು’ ಎಂದು ಹೇಳಿದ ಕಾರಣಕ್ಕೆ ಬಂಗಾಳಿ ಮಾಧ್ಯಮಗಳು ಬಹುಕಾಲ ಅವರನ್ನು ಬಹಿಷ್ಕರಿಸಿದ್ದವು.