ಹಸೀನಾ ಅವರು ಸೋಮವಾರ (ಆಗಸ್ಟ್ 5) ರಾಜೀನಾಮೆ ನೀಡಿದ ಬಳಿಕ ಬುಧವಾರ ಸಂಜೆಯವರೆಗೂ ಸುಮಾರು 232 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರೋಥೋಮ್ ಅಲೋ ಬಂಗಾಳಿ ಪತ್ರಿಕೆ ವರದಿ ಮಾಡಿದೆ.
ಹಿಂಸಾಚಾರದಿಂದ ಕಂಗೆಟ್ಟ ಪೊಲೀಸರು ಕರ್ತವ್ಯಕ್ಕೆ ಗೈರಾಗಿದ್ದು, ಮತ್ತಷ್ಟು ಸಾವು–ನೋವುಗಳಿಗೆ ಕಾರಣವಾಯಿತು. ಬುಧವಾರದಂದು ಹೊಸದಾಗಿ ನೇಮಕಗೊಂಡ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಎಂ.ಡಿ. ಮೈನುಲ್ ಇಸ್ಲಾಂ ಅವರು ದೇಶದಾದ್ಯಂತ ಎಲ್ಲಾ ಪೊಲೀಸರು 24 ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರು.