ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ: ಪವನ್ ಕಲ್ಯಾಣ್ ಪುತ್ರಿ ಪಲಿನಾ ಘೋಷಣೆ

Published : 2 ಅಕ್ಟೋಬರ್ 2024, 7:18 IST
Last Updated : 2 ಅಕ್ಟೋಬರ್ 2024, 7:18 IST
ಫಾಲೋ ಮಾಡಿ
Comments

ಅಮರಾವತಿ: ‘ತಿರುಪತಿ ವೆಂಕಟೇಶ್ವರನ ಮೇಲೆ ನಂಬಿಕೆಯಿದೆ’ ಎಂದು ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರಿ ಪಲಿನಾ ಅಂಜನಿ ಕೊನಿಡೇಲಾ, ದೇವಸ್ಥಾನ ಪ್ರವೇಶಿಸುವ ಮೊದಲು ಘೋಷಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಹಿಂದುಯೇತರರು, ದೇವರಲ್ಲಿ ನಂಬಿಕೆಯಿದೆ ಎಂದು ಘೋಷಿಸುವುದು ಕಡ್ಡಾಯವಾಗಿದೆ. ಪಲಿನಾ ಅಂಜನಿ ಅವರು ಹಿಂದುಯೇತರರು ಎಂದು ಗುರುತಿಸಿಕೊಂಡಿದ್ದರಿಂದ ನಂಬಿಕೆ ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ.

‘ಟಿಟಿಡಿ ಸಿಬ್ಬಂದಿ ನೀಡಿದ ದಾಖಲೆಗಳಿಗೆ ಸಹಿ ಹಾಕುವ ಮೂಲಕ ಪಲಿನಾ ಅವರು ವೆಂಕಟೇಶ್ವರನಲ್ಲಿ ಭಕ್ತಿ, ನಂಬಿಕೆಯಿರುವುದಾಗಿ ಘೋಷಿಸಿದ್ದಾರೆ. ಪಲಿನಾ ಅವರು ಅಪ್ರಾಪ್ತರಾಗಿರುವುದರಿಂದ ಅವರ ತಂದೆ ಪವನ್ ಕಲ್ಯಾಣ್ ದಾಖಲೆಗಳನ್ನು ಅನುಮೋದಿಸಿದ್ದಾರೆ’ ಎಂದು ಜನಸೇನಾ ಪಕ್ಷ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಲಿನಾ ಅವರು ಪವನ್ ಕಲ್ಯಾಣ ಅವರ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರ ಮಗಳು.

ಏತನ್ಮಧ್ಯೆ, ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ದೇವಾಲಯದ ಶುದ್ದೀಕರಣಕ್ಕಾಗಿ ಪವನ್ ಕಲ್ಯಾಣ 11 ದಿನಗಳ ದೀಕ್ಷೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT