ಬಾಸ್ಮತಿಯೇತರ ಅಕ್ಕಿ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸಿರುವುದು ಕೃಷಿ ಕ್ಷೇತ್ರದಲ್ಲಿ ‘ಗೇಮ್ ಚೇಂಜರ್’ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ರೈಸ್ ವಿಲ್ಲಾ ಸಿಇಒ ಸೂರಜ್ ಅಗರವಾಲ್ ಹೇಳಿದ್ದಾರೆ.
ಈ ನಿರ್ಧಾರದಿಂದ ರಫ್ತುದಾರರ ಆದಾಯವು ಹೆಚ್ಚುತ್ತದೆ. ಮುಂಬರುವ ಹೊಸ ಬೆಳೆಗಳ ಇಳುವರಿಯಿಂದ ಹೆಚ್ಚಿನ ಆದಾಯವನ್ನು ರೈತರು ನಿರೀಕ್ಷಿಸಬಹುದು ಹಾಗೂ ಅವರ ಆರ್ಥಿಕತೆಯು ಸಬಲಗೊಳ್ಳುತ್ತದೆ ಎಂದು ಅಗರ್ವಾಲ್ ಹೇಳಿದರು.