ಮಾನಹಾನಿ ಆರೋಪ ಸಂಬಂಧ ಕಂಗನಾ ವಿರುದ್ಧ ಹಿರಿಯ ಗೀತರಚನೆಕಾರ ಜಾವೇದ್ ಅಖ್ತರ್ ಸಲ್ಲಿಸಿದ್ದ ದೂರಿನ ಪ್ರಕರಣ ಸೇರಿದಂತೆ, ಅವರ ವಿರುದ್ಧ ದಾಖಲಾದ ವಿವಿಧ ಪ್ರಕರಣಗಳ ವಿಚಾರಣೆಯನ್ನು ಮುಂಬೈನಿಂದ ಶಿಮ್ಲಾದ ನ್ಯಾಯಾಲಯಕ್ಕೆ ವರ್ಗಾಯಿಸಲು ಅರ್ಜಿಯಲ್ಲಿ ಕೋರಿದ್ದಾರೆ. ಕಂಗನಾ ಮತ್ತು ಅವರ ಸಹೋದರಿ ಚಾಂದೆಲ್ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಮತ್ತು ಕೋಮುದ್ವೇಷದ ಹೇಳಿಕೆಗಳನ್ನು ಹಂಚಿಕೊಂಡಿರುವುದನ್ನು ಉಲ್ಲೇಖಿಸಿಅಲಿ ಕಾಶೀಫ್ ಖಾನ್ ದೇಶ್ಮುಖ್ ಮತ್ತು ಮುನಾವರ್ ಅಲಿ ಎಂಬುವವರು ದೂರು ದಾಖಲಿಸಿದ್ದರು.